Good Fortune: ಅಯೋಧ್ಯೆ ರಾಮಮಂದಿರದ ಕೆತ್ತನೆ ಕೆಲಸದಲ್ಲಿ ಮುಸ್ಲಿಂ ಕುಶಲಕರ್ಮಿಗಳು
Team Udayavani, Oct 28, 2023, 11:45 AM IST
ಉತ್ತರ ಪ್ರದೇಶ: ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನೆಯ ದಿನಾಂಕ ಸಮೀಪಿಸುತ್ತಿದ್ದಂತೆ, ಉತ್ತರ ಪ್ರದೇಶದ ಫತೇಪುರ್ ಸಿಕ್ರಿ ಮತ್ತು ಖೇರಗಢ್ನಲ್ಲಿರುವ ಕುಶಲಕರ್ಮಿಗಳು ದೇವಾಲಯದಲ್ಲಿ ಬಳಸಲಾಗುವ ಕೆಂಪು ಮರಳುಗಲ್ಲಿನ ಮೇಲೆ ಅನನ್ಯ ಕೆತ್ತನೆಗಳನ್ನು ರಚಿಸಲು ಹಗಲಿರುಳು ಶ್ರಮಿಸುತ್ತಿದ್ದಾರೆ.
ವಿಶೇಷತೆ ಏನೆಂದರೆ ಇಲ್ಲಿ ನಡೆಯುತ್ತಿರುವ ಕೆತ್ತನೆ ಕೆಲಸಗಳಲ್ಲಿ ಮುಸ್ಲಿಂ ಕುಶಲಕರ್ಮಿಗಳು ಸೇರಿರುವುದು, ಇಲ್ಲಿರುವ ಕುಶಲಕರ್ಮಿಗಳಲ್ಲಿ ಕೆಲವೊಬ್ಬರು ಮುಸ್ಲಿಂ ಕುಶಲಕರ್ಮಿಗಳು ಇದ್ದು ರಾಮ ಮಂದಿರದ ಕಂಬಗಳ ಕೆತ್ತನೆ ಕೆಲಸದಲ್ಲಿ ತೊಡಗಿದ್ದಾರೆ. ಇಲ್ಲಿರುವ ನೂರಾರು ಕಂಬಗಳಲ್ಲಿ ಮೂಡಿ ಬರುವ ಕೆತ್ತನೆಗಳಲ್ಲಿ ಇವರ ಕೆತ್ತನೆಯ ಕೆಲಸಗಳು ಅಡಕವಾಗಿವೆ ಎಂಬುದು ಸಂತಸದ ವಿಷಯ.
ಆಗ್ರಾ ಮೂಲದ ಎರಡು ಕಂಪನಿಗಳಾದ ಜೈ ಕನ್ಸ್ಟ್ರಕ್ಷನ್ಸ್ ಮತ್ತು ರಜಪೂತ್ ಎಂಟರ್ಪ್ರೈಸಸ್ನ 65 ಕುಶಲಕರ್ಮಿಗಳು ರಾಮಮಂದಿರ ನಿರ್ಮಾಣದಲ್ಲಿ ತೊಡಗಿದ್ದಾರೆ. ಈ ಕುಶಲಕರ್ಮಿಗಳು ಸಾಂಪ್ರದಾಯಿಕ ಉಪಕರಣಗಳನ್ನು ಬಳಸಿ ಕೆತ್ತನೆಯ ಕೆಲಸಗಳನ್ನು ಮಾಡುತ್ತಿದ್ದಾರೆ ಎನ್ನಲಾಗಿದೆ.
ಸದ್ಯ ಅಯೋಧ್ಯೆ ರಾಮಮಂದಿರದ ಕೆಲಸ ಕಾರ್ಯಗಳು ಭರದಿಂದ ಸಾಗುತ್ತಿದ್ದು 2024ರ ಜನವರಿ 22ರಂದು ಶ್ರೀರಾಮ ಮಂದಿರ ಉದ್ಘಾಟನೆಗೆ ಮುಹೂರ್ತ ಫಿಕ್ಸ್ ಆಗಿದೆ. ಪ್ರಧಾನ ಮಂತ್ರಿ ನಂರೇಂದ್ರ ಮೋದಿ ಅವರು ಇತರ ಗಣ್ಯರ ಸಮ್ಮುಖದಲ್ಲಿ ರಾಮಮಂದಿರದ ಉದ್ಘಾಟನೆಯನ್ನು ಮಾಡಲಿದ್ದಾರೆ.
ಇದನ್ನೂ ಓದಿ: E-mail: 20 ಕೋಟಿ ಕೊಡಿ ಇಲ್ಲವಾದರೆ… ಮುಖೇಶ್ ಅಂಬಾನಿಗೆ ಇ ಮೇಲ್ ಮೂಲಕ ಕೊಲೆ ಬೆದರಿಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ