ಗರ್ಭ ಧರಿಸುವ ಹಕ್ಕು ಮಹಿಳೆಯದ್ದೇ ಆಗಲಿ


Team Udayavani, Feb 12, 2017, 3:45 AM IST

11-PTI-10.jpg

ಹೊಸದಿಲ್ಲಿ: ಗರ್ಭಧಾರಣೆ, ಮಗು ಹೊಂದುವ ಕುರಿತ ನಿರ್ಧಾರದ ಹಕ್ಕು ಮಹಿಳೆಯರದ್ದೇ ಆಗಲಿ ಎಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಅರ್ಜನ್‌ ಕುಮಾರ್‌ ಸಿಕ್ರಿ ಹೇಳಿದ್ದಾರೆ.

ಭಾರತದ ನ್ಯಾಯಾಲಯಗಳಲ್ಲಿ ಸಂತಾ ನೋತ್ಪತ್ತಿಯ ಹಕ್ಕುಗಳ ಮಾನ್ಯತೆ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಸಂತಾನೋತ್ಪತ್ತಿಯ ನಿರ್ಧಾರ ಪುರುಷರದ್ದೇ ಎಂಬಂತೆ ಇದೆ. ಜತೆಗೆ ಹೆಣ್ಣಿನ ಮೇಲೆ ಅವರ ನಿರ್ಧಾರವನ್ನು ಹೇರಲಾಗು ತ್ತದೆ. ಸಂತಾನೋತ್ಪತ್ತಿಯ ಹಕ್ಕಿನ ವಿಚಾರಕ್ಕೆ ಬಂದಾಗ ಮಹಿಳೆಯ ನಿರ್ಧಾರಗಳನ್ನು ಕೇಳಲಾಗುವುದೇ ಇಲ್ಲ. ಈ ವಿಚಾರದಲ್ಲಿ ನನಗೆ ನೆರವು ನೀಡಲು ಸಾಧ್ಯವಿಲ್ಲ. ಆದರೆ ನಾವು ಮಾನವೀಯತೆಯನ್ನು ಹೇಗೆ ಕಳೆದುಕೊಂಡಿದ್ದೇವೆ ಎಂಬುದನ್ನು ಗಮನಿಸಬೇಕು ಎಂದು ಹೇಳಿದ್ದಾರೆ.

ನಾವಿಂದು 21ನೇ ಶತಮಾನದಲ್ಲಿದ್ದೇವೆ. ಅತ್ಯಾಧುನಿಕ ತಂತ್ರಜ್ಞಾನಗಳನ್ನು ಹೊಂದಿದ್ದೇವೆ. ಬಾಹ್ಯಾಕಾಶಕ್ಕೆ ನಿರಂತರ ಸಂಚರಿಸು ವವರಾಗಿದ್ದೇವೆ. ಆದರೆ ನಮಗೆ ಮಹಿಳೆಗೆ ಮಾನವೀಯತೆಯನ್ನು ತೋರಿಸಲು ಸಾಧ್ಯ ವಾಗಿಲ್ಲ. ಇದು ಕಟು ಸತ್ಯ ಎಂದು ಹೇಳಿದರು. ಸಾಮಾನ್ಯವಾಗಿ ಸಂತಾನೋತ್ಪತ್ತಿಯ ನಿರ್ಧಾರ ಗಂಡ, ಕುಟುಂಬದ್ದು, ಹಿರಿಯರು ಹೇಳಿದಂತೆ ಎಂಬಂತೆ ಇದೆ. ಗಂಡು ಅಥವಾ ಹೆಣ್ಣು ಮಗು ಬೇಕು ಎಂಬುದೂ ಇದೆ. ಇದೇ ಕಾರಣ ಭ್ರೂಣ ಹತ್ಯೆಯ ಪ್ರಕರಣಗಳೂ ನಡೆ ಯುತ್ತವೆ. ಆದರೆ ಸಂತಾನೋತ್ಪತ್ತಿಯ ವಿಚಾರದಲ್ಲಿ ನಿಜ ವಾದ ಹಕ್ಕು ಮಹಿಳೆಯದ್ದು. ಗರ್ಭಧಾರಣೆ ತಡೆ, ಗರ್ಭ ಪಾತ, ಮಗು ಹೊಂದುವ ನಿರ್ಧಾರ ಆಕೆಯದ್ದೇ. ಅದು ಆಕೆಯ ದೇಹ. ಆದ್ದರಿಂದ ನಿರ್ಧಾರ ಕೈಗೊಳ್ಳುವ ಹಕ್ಕೂ ಆಕೆಯದ್ದೇ ಎಂದು ನ್ಯಾ| ಸಿಕ್ರಿ ಹೇಳಿದ್ದಾರೆ.

ಮಾನವ ಹಕ್ಕುಗಳ ಕುರಿತಂತೆ ನ್ಯಾಯಾಂಗ ಕಾನೂನಿನಲ್ಲಿ ಏನು ಹೇಳಿದೆಯೋ ಅದನ್ನೇ ಮಾಡುತ್ತದೆ. ಕಾನೂನಿನಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು. ನಾವು ಸಮಾನತೆ ವಿಚಾರ ಮಾತನಾಡುವಾಗ ಮಹಿಳೆಯೂ ತನ್ನ ಸಂಗಾತಿಯೊಂದಿಗೆ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಆಗಬೇಕು.  ಗಂಡ ತನ್ನ ನಿರ್ಧಾರವನ್ನು ಆಕೆ ಮೇಲೆ ಹೇರುವುದಲ್ಲ. ಯಾಕೆಂದರೆ, ಸಂತಾನೋತ್ಪತ್ತಿ ವಿಚಾರದಲ್ಲಿ ಹಕ್ಕುಗಳ ಬಾಧ್ಯತೆ ಇರುವುದು ಮಹಿಳೆಗೆ. ತನ್ನ ದೇಹದಲ್ಲಿ ಆಕೆ ಕುಡಿಯನ್ನು ಧರಿಸುತ್ತಾಳೆ. ಹೀಗೆ ಬೇರಾರಿಗೂ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಗರ್ಭ ಧರಿಸುವುದು ಆಕೆಯ ಹಕ್ಕಾಗಿರುತ್ತದೆ. ಈ ವಿಚಾರದಲ್ಲಿ ಮಹಿಳೆಯ ನಿರ್ಧಾರವನ್ನು ಗೌರವಿಸುವುದು ಮಾನವನ ಘನತೆಯ ಸಂಗತಿಯೂ ಹೌದು ಎಂದು ಹೇಳಿದ್ದಾರೆ.

ಜತೆಗೆ ಮಹಿಳೆಯ ಹಕ್ಕಿನ ಬಗ್ಗೆ ಸಾಮಾಜಿಕ ಬದಲಾವಣೆಯಾಗದ ಹೊರತು ಯಾವುದೇ ಕಾನೂನುಗಳು ಪರಿಣಾಮ ಬೀರಲಾರವು. ಕಾನೂನುಗಳು ಸಮಾಜದಲ್ಲಿನ ಕೆಟ್ಟದ್ದನ್ನು ತಡೆಯಲು ಮಾತ್ರ ಸಹಕಾರಿ. ಆದರೆ ಬದಲಾವಣೆಯನ್ನು ತರಲು ಸಾಧ್ಯವಾಗುವುದಿಲ್ಲ. ಮಹಿಳೆ ಹಕ್ಕಿನ ಕುರಿತ ವಿಚಾರದಲ್ಲಿ ನಮ್ಮ ಸಮಾಜ, ನಮ್ಮ ಬುದ್ಧಿಯಲ್ಲಿ ಬದಲಾವಣೆ ಯಾಗಬೇಕು. ನಾವು ಅರ್ಧಾಂಗಿ ಎನ್ನುತ್ತೇವೆ. ಆದರೆ ಅವಳಿಗೆ ಅರ್ಧ ಕೊಡಲು ತಯಾರಿರುವುದಿಲ್ಲ. ಆದರೆ ಹಕ್ಕಿನಲ್ಲಾದರೂ ಆಕೆಗೆ ಅರ್ಧ ಬಿಟ್ಟುಕೊಡಬೇಕು ಎಂದು ಮಾರ್ಮಿಕವಾಗಿ ನ್ಯಾ| ಸಿಕ್ರಿ ಹೇಳಿದರು.

ಟಾಪ್ ನ್ಯೂಸ್

Lok Sabha Elections ಬಿಜೆಪಿ ಗೆಲ್ಲುವ 400 ಸ್ಥಾನಗಳಲ್ಲಿ ನಾನೂ ಒಬ್ಬ: ಶ್ರೀರಾಮುಲು

Lok Sabha Elections ಬಿಜೆಪಿ ಗೆಲ್ಲುವ 400 ಸ್ಥಾನಗಳಲ್ಲಿ ನಾನೂ ಒಬ್ಬ: ಶ್ರೀರಾಮುಲು

man hits his wife because he could not afford the treatment!

ಚಿಕಿತ್ಸೆ ವೆಚ್ಚ ಭರಿಸಲಾಗದೆ ಹೆಂಡತಿಯನ್ನೇ ಕೊಂದ!

Teacher Recruitment Scam: Supreme Court Slams Bengal Govt

West Bengal; ಶಿಕ್ಷಕರ ನೇಮಕ ಹಗರಣ: ಬಂಗಾಳ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ತರಾಟೆ

Torture of husband by burning with cigarette: Wife arrested based on CCTV video

Bijnor; ಸಿಗರೇಟಿಂದ ಸುಟ್ಟು ಪತಿಗೆ ಚಿತ್ರಹಿಂಸೆ: ಸಿಸಿಟಿವಿ ವಿಡಿಯೋ ಆಧರಿಸಿ ಪತ್ನಿ ಸೆರೆ

Afghan batsman Rahmanullah Gurbaz to return to KKR team

KKR ತಂಡಕ್ಕೆ ಮರಳಲಿರುವ ಅಫ್ಘಾನ್‌ ಬ್ಯಾಟರ್‌ ರಹ್ಮಾನುಲ್ಲ ಗುರ್ಬಾಝ್

G. Parameshwara ಕಾನೂನಾತ್ಮಕ ಸಂಸ್ಥೆ ಮೇಲೆ ಮಾಜಿ ಸಿಎಂ ಅನುಮಾನಪಟ್ಟರೆ ಹೇಗೆ?

G. Parameshwara ಕಾನೂನಾತ್ಮಕ ಸಂಸ್ಥೆ ಮೇಲೆ ಮಾಜಿ ಸಿಎಂ ಅನುಮಾನಪಟ್ಟರೆ ಹೇಗೆ?

H. D. Kumaraswamy ಸದ್ಯದಲ್ಲೇ ರಾಜ್ಯಪಾಲರ ಭೇಟಿ

Prajwal Revanna Case ಸದ್ಯದಲ್ಲೇ ರಾಜ್ಯಪಾಲರ ಭೇಟಿ: ಕುಮಾರಸ್ವಾಮಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CSIR: Opportunity to wear unironed clothes every Monday!

CSIR: ಪ್ರತೀ ಸೋಮವಾರ ಇಸ್ತ್ರಿ ಹಾಕದ ವಸ್ತ್ರ ಧರಿಸಲು ಅವಕಾಶ!

Teacher Recruitment Scam: Supreme Court Slams Bengal Govt

West Bengal; ಶಿಕ್ಷಕರ ನೇಮಕ ಹಗರಣ: ಬಂಗಾಳ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ತರಾಟೆ

Torture of husband by burning with cigarette: Wife arrested based on CCTV video

Bijnor; ಸಿಗರೇಟಿಂದ ಸುಟ್ಟು ಪತಿಗೆ ಚಿತ್ರಹಿಂಸೆ: ಸಿಸಿಟಿವಿ ವಿಡಿಯೋ ಆಧರಿಸಿ ಪತ್ನಿ ಸೆರೆ

Encounter in Kashmir:

ಕಾಶ್ಮೀರದಲ್ಲಿ ಎನ್‌ಕೌಂಟರ್‌: ಇಬ್ಬರು ಉಗ್ರರ ಹತ್ಯೆ

Man shot a Cow on head twice

Manipur; ಹಸುವಿಗೆ ಗುಂಡಿಟ್ಟು ಕೊಂದ ಕ್ರೂರಿ!: ವ್ಯಾಪಕ ಆಕ್ರೋಶ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Lok Sabha Elections ಬಿಜೆಪಿ ಗೆಲ್ಲುವ 400 ಸ್ಥಾನಗಳಲ್ಲಿ ನಾನೂ ಒಬ್ಬ: ಶ್ರೀರಾಮುಲು

Lok Sabha Elections ಬಿಜೆಪಿ ಗೆಲ್ಲುವ 400 ಸ್ಥಾನಗಳಲ್ಲಿ ನಾನೂ ಒಬ್ಬ: ಶ್ರೀರಾಮುಲು

man hits his wife because he could not afford the treatment!

ಚಿಕಿತ್ಸೆ ವೆಚ್ಚ ಭರಿಸಲಾಗದೆ ಹೆಂಡತಿಯನ್ನೇ ಕೊಂದ!

CSIR: Opportunity to wear unironed clothes every Monday!

CSIR: ಪ್ರತೀ ಸೋಮವಾರ ಇಸ್ತ್ರಿ ಹಾಕದ ವಸ್ತ್ರ ಧರಿಸಲು ಅವಕಾಶ!

Teacher Recruitment Scam: Supreme Court Slams Bengal Govt

West Bengal; ಶಿಕ್ಷಕರ ನೇಮಕ ಹಗರಣ: ಬಂಗಾಳ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ತರಾಟೆ

Torture of husband by burning with cigarette: Wife arrested based on CCTV video

Bijnor; ಸಿಗರೇಟಿಂದ ಸುಟ್ಟು ಪತಿಗೆ ಚಿತ್ರಹಿಂಸೆ: ಸಿಸಿಟಿವಿ ವಿಡಿಯೋ ಆಧರಿಸಿ ಪತ್ನಿ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.