ಹೊಸ ಸಂಸತ್‌ ಭವನದಲ್ಲಿ ಅಕ್ಕಮಹಾದೇವಿ ವರ್ಣಚಿತ್ರ!

ಪಾರ್ಲಿಮೆಂಟ್‌ ಗೋಡೆಗಳಲ್ಲಿ 75 ಮಹಿಳೆಯರಿಗೆ ಸ್ಥಾನ; ಕೇಂದ್ರ ಸರ್ಕಾರ ಚಿಂತನೆ

Team Udayavani, May 30, 2022, 7:00 AM IST

ಹೊಸ ಸಂಸತ್‌ ಭವನದಲ್ಲಿ ಅಕ್ಕಮಹಾದೇವಿ ವರ್ಣಚಿತ್ರ!

ನವದೆಹಲಿ: ಸೆಂಟ್ರಲ್‌ ವಿಸ್ತಾ ಯೋಜನೆಯಡಿ ದೆಹಲಿಯಲ್ಲಿ ತಲೆಎತ್ತಲಿರುವ ದೇಶದ ನೂತನ ಸಂಸತ್‌ ಭವನದ ಗೋಡೆಯನ್ನು ಕನ್ನಡದ ಮೊದಲ ಕವಯಿತ್ರಿ, ಶಿವಶರಣೆ ಅಕ್ಕಮಹಾದೇವಿಯ ವರ್ಣಚಿತ್ರವು ಅಲಂಕರಿಸಲಿದೆ.

ಅಕ್ಕಮಹಾದೇವಿಯವರು ಮಾತ್ರವಲ್ಲದೇ ಭಾರತದ ಇತಿಹಾಸ ಹಾಗೂ ಪುರಾಣಗಳಲ್ಲಿ ಸ್ಥಾನ ಪಡೆದಿರುವಂಥ ದ್ರೌಪದಿ, ಸೀತೆ, ರಜಿಯಾ ಸುಲ್ತಾನಾ, ಅಹಿಲ್ಯಾ ಹೋಳ್ಕರ್‌ ಮತ್ತು ಇತರೆ ಮಹಿಳಾಮಣಿಗಳ ವರ್ಣಚಿತ್ರಗಳನ್ನೂ ಸಂಸತ್‌ ಭವನದ ಗೋಡೆಗಳಲ್ಲಿ ಅಳವಡಿಸಲು ಸರ್ಕಾರ ಚಿಂತನೆ ನಡೆಸಿದೆ.

75 ಮಹಿಳೆಯರಿಗೆ ಗೌರವ:
ದೇಶವು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಹಿನ್ನೆಲೆಯಲ್ಲಿ, ವೇದಕಾಲದಿಂದ 1947ರವರೆಗಿನ 75 ಮಹಿಳೆಯರ ಚಿತ್ರಗಳನ್ನು ಸಂಸತ್‌ ಭವನದಲ್ಲಿ ಅಳವಡಿಸಲು ಸರ್ಕಾರ ಚಿಂತನೆ ನಡೆಸಿದೆ. ಅವರ ವರ್ಣಚಿತ್ರಗಳು ಮಾತ್ರವಲ್ಲದೇ, ಅವರ ಕುರಿತಾದ ಮಾಹಿತಿ, ದೇಶದ ಇತಿಹಾಸದಲ್ಲಿ ಅವರ ಪಾತ್ರದ ಕುರಿತ ಸಂಕ್ಷಿಪ್ತ ವಿವರಣೆಯೂ ಇಲ್ಲಿರಲಿದೆ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಗಳು ತಿಳಿಸಿದ್ದಾರೆ.

ಅಕ್ಟೋಬರ್‌ ವೇಳೆಗೆ ಸಂಸತ್‌ ಭವನದ ಕಟ್ಟಡ ನಿರ್ಮಾಣ ಪೂರ್ಣಗೊಳ್ಳಲಿದ್ದು, ಸೆಂಟ್ರಲ್‌ ಅವೆನ್ಯೂ ನವೀಕರಣ ಕಾರ್ಯ ಜೂನ್‌ ಅಂತ್ಯದಲ್ಲಿ ಮುಗಿಯಲಿದೆ. ಸೆಂಟ್ರಲ್‌ ವಿಸ್ತಾ ಯೋಜನೆಯ ಭಾಗವಾಗಿ, ಸರ್ಕಾರವು ಹೊಸ ಸಂಸತ್‌ ಭವನ, ಉಪರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿಗಳಿಗಾಗಿ ಹೊಸ ನಿವಾಸ, 51 ಸಚಿವಾಲಯಗಳುಳ್ಳ ಸೆಂಟ್ರಲ್‌ ಸೆಕ್ರೆಟರಿಯೇಟ್‌ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ.

ಯಾರ್ಯಾರ ಚಿತ್ರಗಳು ರಾರಾಜಿಸಲಿವೆ?
12ನೇ ಶತಮಾನದ ಕನ್ನಡ ಕವಯಿತ್ರಿ ಅಕ್ಕಮಹಾದೇವಿ, 18ನೇ ಶತಮಾನದ ಮರಾಠರ ರಾಣಿ ಅಹಿಲ್ಯಾ ಹೋಳ್ಕರ್‌, ಮಹಾಭಾರತದ ಪಂಚಪಾಂಡವರ ಪತ್ನಿಯಾದ ದ್ರೌಪದಿ, ಶ್ರೀರಾಮನ ಮಡದಿ ಸೀತೆ, ವೇದಕಾಲದ ಇತರೆ ಕವಯಿತ್ರಿಗಳಾದ ಅದಿತಿ, ಅಪ್ಪಳ ಮತ್ತು ಗಾರ್ಗಿ, ಕಾಶ್ಮೀರದ ಮಧ್ಯಕಾಲೀನ ಶೈವ ಕವಯಿತ್ರಿ ಲಲ್ಲೇಶ್ವರಿ, 16ನೇ ಶತಮಾನದ ಹಿಂದಿ ಕವಯಿತ್ರಿ ಹಾಗೂ ಕೃಷ್ಣನ ಭಕ್ತೆ ಮೀರಾಬಾಯಿ, 13ನೇ ಶತಮಾನದಲ್ಲಿ ದೆಹಲಿಯನ್ನು ಆಳಿದ ರಜಿಯಾ ಸುಲ್ತಾನಾ ಅವರ ವರ್ಣಚಿತ್ರಗಳು ಸಂಸತ್‌ ಭವನದ ಗೋಡೆಗಳಲ್ಲಿ ರಾರಾಜಿಸುವ ಸಾಧ್ಯತೆಯಿದೆ ಎಂದೂ ಮೂಲಗಳು ಹೇಳಿವೆ.

ಇದೇ ವೇಳೆ, ಮುಸ್ಲಿಮರ ಬುರ್ಖಾ ಪದ್ಧತಿಯ ವಿರುದ್ಧ ಹೋರಾಡಿದ್ದ ಮೊದಲ ಮಹಿಳೆ ಎಂಬ ಖ್ಯಾತಿಗೆ ಪಾತ್ರವಾಗಿರುವ ಸುಗ್ರಾ ಮಿರ್ಜಾ ಅವರ ಚಿತ್ರವನ್ನೂ ಅಳವಡಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.

 

ಟಾಪ್ ನ್ಯೂಸ್

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

1-weeeqwe

ಅಮೃತಶಿಲೆಯಲ್ಲಿ ಕೆತ್ತಿದ 18 ಅಡಿ ಕಾಳಿ ಮಾತೆ ಪ್ರತಿಮೆ ಇಂದು ಕೇರಳಕ್ಕೆ

mohan bhagwat

RSS ಮೀಸಲಾತಿ ವಿರೋಧಿಸಿಲ್ಲ: ಮೋಹನ್‌ ಭಾಗವತ್‌

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.