ಪಾಲಕ್ಕಾಡ್ ಜಿಲ್ಲೆಯ ಮತೂರ್ ಗ್ರಾ.ಪಂ.ನ ವಿಶೇಷ ನಿರ್ಣಯ : ಸರ್, ಮ್ಯಾಡಮ್ಗೆ ನಿಷೇಧ
Team Udayavani, Sep 3, 2021, 7:10 AM IST
ಪಾಲಕ್ಕಾಡ್: ದೇಶದಿಂದ ಬ್ರಿಟಿಷರು ತೊರೆದಿದ್ದರೂ, ಅಲ್ಲಲ್ಲಿ ವಸಾಹತು ಶಾಹಿ ವ್ಯವಸ್ಥೆಗಳ ಪ್ರಾತಿನಿಧಿಕ ಅಂಶಗಳು ನಮ್ಮಲ್ಲಿವೆ. ಅದನ್ನು ಮರೆತೇ ಬಿಡುವ ನಿಟ್ಟಿನಲ್ಲಿ ಕೇರಳದ ಪಾಲಕ್ಕಾಡ್ ಜಿಲ್ಲೆಯ ಮತೂರ್ ಗ್ರಾಮ ಪಂಚಾಯತ್ ಇತ್ತೀಚೆಗೆ ನಿರ್ಣಯ ಕೈಗೊಂಡಿತ್ತು.
ಅದರ ಅನ್ವಯ ಗ್ರಾ.ಪಂ. ಸಿಬಂದಿ, ಅಧಿಕಾರಿಗಳಿಗೆ “ಸರ್’, “ಮ್ಯಾಡಮ್’ ಎಂದು ಕರೆಯುವಂತೆಯೇ ಇಲ್ಲ. ಮತ್ತೂಂದು ಗಮನಾರ್ಹ ವಿಚಾರ ವೆಂದರೆ ಇಂಥ ನಿರ್ಣಯ ಕೈಗೊಂಡ ದೇಶದ ಮೊದಲ ಗ್ರಾ.ಪಂ. ಎಂಬ ಹೆಗ್ಗಳಿಕೆಗೆ ಕೂಡ ಮತೂರ್ ಪಾತ್ರವಾಗಿದೆ.
ಸಿಪಿಎಂನ ಏಳು, ಬಿಜೆಪಿಯ ಒಬ್ಬ ಸದಸ್ಯರು ಇರುವ ಗ್ರಾಮ ಪಂಚಾಯತ್ನಲ್ಲಿ ವಸಾಹತು ಶಾಹಿ ಪದ್ಧತಿ ಕೈಬಿಡುವ ಬಗ್ಗೆ ಸಭೆ ನಡೆಸಿ, ಅವಿರೋಧವಾಗಿ ನಿರ್ಣಯ ಕೈಗೊಳ್ಳಲಾಗಿದೆ. ಈ ಬಗ್ಗೆ ಮಾತನಾಡಿದ ಉಪಾಧ್ಯಕ್ಷ ಪಿ.ಆರ್.ಪ್ರಸಾದ್ “ಗ್ರಾಮದ ಜನರು ಮತ್ತು ಅಧಿಕಾರಿಗಳ ನಡುವೆ ಸಂಪರ್ಕ ಹೆಚ್ಚಿನ ರೀತಿಯಲ್ಲಿ ಬೆಳೆಯಲು ಈ ನಿರ್ಧಾರ ಕೈಗೊಳ್ಳಲಾಗಿದೆ. ಪರಸ್ಪರ ನಂಬಿಕೆ ಮತ್ತು ವಿಶ್ವಾಸವನ್ನು ಬೆಳೆಸುವುದೂ ಸೇರಿದೆ. ಸರ್ ಅಥವಾ ಮ್ಯಾಡಮ್ ಎಂದು ಕರೆಯು ವದರಿಂದ ಅಂತರ ಹೆಚ್ಚುತ್ತದೆ. ಅದನ್ನು ನಿವಾರಿಸುವುದು ನಿರ್ಣಯದ ಹಿಂದಿನ ಆಶಯ’ ಎಂದು ಹೇಳಿದ್ದಾರೆ.
ನಿರ್ಣಯ ಅಂಗೀಕಾರವಾದ ಬಳಿಕ ಪಂಚಾಯತ್ ಕಚೇರಿ ಮುಂಭಾಗದಲ್ಲಿ ಈ ಬಗ್ಗೆ ನೋಟಿಸ್ ಹಾಕಲಾಗಿದೆ. ಜತೆಗೆ ಅದರಲ್ಲಿ ಪಂಚಾಯತ್ನಲ್ಲಿ ಇರುವ ಅಧಿಕಾರಿ ಮತ್ತು ಅವರ ಹುದ್ದೆಯ ವಿವರನ್ನೂ ಪ್ರಕಟಿಸಲಾಗಿದೆ. ಹೊಸ ನಿಯಮ ಪ್ರಕಾರ ಜನರು ಅಧಿಕಾರಿಗಳನ್ನು “ಅಣ್ಣಾ’, ಮಹಿಳಾ ಅಧಿಕಾರಿಗಳನ್ನು “ಅಕ್ಕಾ’ ಎಂದು ಕರೆಯಲೂ ಅವಕಾಶ ಇದೆಯಂತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ
MUST WATCH
ಹೊಸ ಸೇರ್ಪಡೆ
IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್
Devanahalli: ಬೇಸಿಗೆ ಬಿಸಿ; ಹುರುಳಿಕಾಯಿ ದರ ದುಬಾರಿ
PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್
Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು
Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ