ಚಿನ್ನಮ್ಮ ಶಶಿಕಲಾ ಮುಖ್ಯಮಂತ್ರಿ ಆಗೋದನ್ನು ಯಾರೂ ತಡೆಯಲಾರರು: AIADMK
Team Udayavani, Feb 7, 2017, 4:52 PM IST
ಚೆನೈ : ಚಿನ್ನಮ್ಮ ಶಶಿಕಲಾ ತಮಿಳು ನಾಡಿನ ಮುಖ್ಯಮಂತ್ರಿಯಾಗುವುದನ್ನು ಯಾರಿಂದಲೂ ತಡೆಯಲಾಗದು ಎಂದು ಎಐಎಡಿಎಂಕೆ ನಾಯಕ ಕೆ ಎ ಸೆಂಗೋಟಯನ್ ಹೇಳಿದ್ದಾರೆ.
“ಕೆಲವರು ಅನಗತ್ಯ ಗೊಂದಲ ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಮಾತ್ರವಲ್ಲ ಅವರು ಪರಿಸ್ಥಿತಿಯ ದುರ್ಲಾಭವನ್ನು ಪಡೆಯಲು ಹವಣಿಸುತ್ತಿದ್ದಾರೆ’ ಎಂದು ಸೆಂಗೋಟಯನ್ ಟೀಕಿಸಿದರು.
ಎಐಎಡಿಎಂಕೆ ಹಿರಿಯ ನಾಯಕ ಪಿ ಎಚ್ ಪಾಂಡಿಯನ್ ಅವರು ಜೆ ಜಯಲಲಿತಾ ಅವರ ಸಾವಿನಲ್ಲಿ ಷಡ್ಯಂತ್ರ ನಡೆದಿದೆ ಎಂದು ಆರೋಪಿಸುವ ಮೂಲಕ ಹೊಸ ವಿವಾದ ಸೃಷ್ಟಿಸಲು ಯತ್ನಿಸಿದ ಕೆಲವೇ ತಾಸುಗಳ ಬಳಿಕ ಎಐಎಡಿಎಂ ಇದಕ್ಕೆ ಬಲವಾದ ಆಕ್ಷೇಪ ವ್ಯಕ್ತಪಡಿಸಿ “ಚಿನ್ನಮ್ಮ ಶಶಿಕಲಾ ಅವರು ತಮಿಳು ನಾಡಿನ ಮುಖ್ಯಮಂತ್ರಿ ಆಗೇ ಆಗ್ತಾರೆ; ಅದನ್ನು ಯಾರಿಂದಲೂ ತಡೆಯಲು ಆಗದು’ ಎಂದು ಸ್ಪಷ್ಟಪಡಿಸಿತು.
ಪಕ್ಷದ ನಾಯಕ ಹಾಗೂ ಶಾಸಕ ಪನ್ರುತಿ ರಾಮಚಂದ್ರನ್ ಅವರು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಾ, “ಶಶಿಕಲಾ ಅವರನ್ನು ನಾಯಕಿಯನ್ನಾಗಿ ಪಕ್ಷದ ಶಾಸಕರು ಸರ್ವಾನುಮತದಿಂದ, ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ; ನಾವು ನಮ್ಮ ನಿರ್ಧಾರವನ್ನು ರಾಜ್ಯಪಾಲರಿಗೆ ತಿಳಿಸಿದ್ದೇವೆ. ಅವರು ತಮ್ಮ ನಿರ್ಧಾರವನ್ನು ತಿಳಿಸಲು ಸಮಯ ತೆಗೆದುಕೊಂಡಿರುವುದರ ಅರ್ಥ ಅವರದನ್ನು ವಿಳಂಬಿಸಿದ್ದಾರೆ ಎಂದು ಅಲ್ಲ; ಅವರು ತಮ್ಮ ಅನುಕೂಲಕ್ಕೆ ಅನುಗುಣವಾಗಿ ಪ್ರಶ್ನೆಯನ್ನು ನಿಭಾಯಿಸಲಿದ್ದಾರೆ; ನಾವು ಅವರನ್ನು ಬಲವಂತಪಡಿಸುವಂತಿಲ್ಲ’ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!