ಒಡಿಶಾದಲ್ಲಿ ನಕ್ಸಲರ ದಾಳಿ: ಮೂವರು ಸಿಆರ್ಪಿಎಫ್ ಯೋಧರು ಹುತಾತ್ಮ
Team Udayavani, Jun 21, 2022, 9:26 PM IST
ಹೊಸದಿಲ್ಲಿ/ಭುವನೇಶ್ವರ: ಒಡಿಶಾದ ನೌಪದಾ ಜಿಲ್ಲೆಯಲ್ಲಿ ನಕ್ಸಲೀಯರು ನಡೆಸಿದ ದಾಳಿಯಲ್ಲಿ ಸಿಆರ್ಪಿಎಫ್ ನ ಮೂವರು ಯೋಧರು ಹುತಾತ್ಮರಾಗಿದ್ದಾರೆ.
ಜಿಲ್ಲೆಯ ಪಟಧಾರಾ ಮೀಸಲು ಅರಣ್ಯದಲ್ಲಿ ಒಂದು ಶಿಬಿರದಿಂದ ಮತ್ತೊಂದಕ್ಕೆ ಯೋಧರು ತೆರಳುತ್ತಿದ್ದ ವೇಳೆ ನಕ್ಸಲೀಯರು ದಾಳಿ ನಡೆಸಿದ್ದರು.
ಸಿಆರ್ಪಿಎಫ್ ಮತ್ತು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ ಎಂದು ಒಡಿಶಾ ಡಿಜಿಪಿ ಎಸ್.ಕೆ. ಬನ್ಸಲ್ ತಿಳಿಸಿದ್ದಾರೆ.
ಇದನ್ನೂ ಓದಿ:ಉಳ್ಳಾಲ: ಹತ್ತಿ ದಾಸ್ತಾನು ಗೋದಾಮಿಗೆ ಆಕಸ್ಮಿಕ ಬೆಂಕಿ : 8 ಲಕ್ಷಕ್ಕೂ ಹೆಚ್ಚು ನಷ್ಟ
ದಾಳಿಯ ಸಂದರ್ಭದಲ್ಲಿ ಏಳು ಮಂದಿ ಯೋಧರು ಇದ್ದರು. ಸ್ಥಳದಲ್ಲಿ ಶೋಧ ಕಾರ್ಯ ಮುಂದುವರಿಸಲಾಗಿದೆ ಎಂದು ಬನ್ಸಲ್ ತಿಳಿಸಿದ್ದಾರೆ.