ನಿರಂತರ 4ನೇ ದಿನವೂ ಪಾಕ್ ಸೇನೆಯಿಂದ ಕದನ ವಿರಾಮ ಉಲ್ಲಂಘನೆ
Team Udayavani, Sep 16, 2017, 12:00 PM IST
ಹೊಸದಿಲ್ಲಿ : ಓರ್ವ ಬಿಎಸ್ಎಫ್ ಜವಾನನ್ನು ಕೊಂದು ಓರ್ವ ಪೌರನನ್ನು ಗಾಯಗೊಳಿಸಿದ ಒಂದು ದಿನದ ತರುವಾಯ ಪಾಕ್ ರೇಂಜರ್ಗಳು ಜಮ್ಮು ಜಿಲ್ಲೆಯ ಆರ್ ಎಸ್ ಪುರ ದ ಆರ್ನಿಯಾ ಉಪ ವಲಯದಲ್ಲಿ ಆರರಿಂದ ಎಂಟು ಭಾರತೀಯ ಗಡಿ ಠಾಣೆಗಳನ್ನು ಗುರಿ ಇರಿಸಿ ಶುಕ್ರವಾರ ಮತ್ತು ಶನಿವಾರದ ನಡುವಿನ ರಾತ್ರಿಯಲ್ಲಿ ಭಾರೀ ಗುಂಡಿನ ದಾಳಿ ನಡೆಸುವ ಮೂಲಕ ನಿರಂತರ ನಾಲ್ಕನೇ ದಿನವೂ ಕದನ ವಿರಾಮ ಉಲ್ಲಂಘನೆ ಮಾಡಿದ್ದಾರೆ.
ಪಾಕ್ ರೇಂಜರ್ ಗಳ ಈ ಕದನ ವಿರಾಮ ಉಲ್ಲಂಘನೆಗೆ ಪ್ರತಿಯಾಗಿ ಭಾರತೀಯ ಬಿಎಸ್ಎಫ್ ಯೋಧರು ತಕ್ಕುದಾದ ಗುಂಡಿನ ಉತ್ತರವನ್ನು ನೀಡಿದ್ದಾರೆ ಎಂದು ಡಿಐಜಿ ಧರ್ಮೇಂದ್ರ ಪಾರೀಖ್ ತಿಳಿಸಿದ್ದಾರೆ.
ಶುಕ್ರವಾರ ಮಧ್ಯರಾತ್ರಿಯಿಂದ ಶನಿವಾರ ನಸುಕಿನ ತನಕವೂ ಪಾಕ್ ರೇಂಜರ್ಗಳು ಆರ್ನಿಯಾ ವಲಯದಲ್ಲಿನ ಭಾರತದ ಆರರಿಂದ ಎಂಟು ಗಡಿ ಠಾಣೆಗಳನ್ನು ಗುರಿ ಇರಿಸಿ ನಡೆಸಿರುವ ಗುಂಡಿನ ಹಾಗೂ ಶೆಲ್ಲಿಂಗ್ ದಾಳಿಗಳಿಗೆ ಭಾರತೀಯ ಯೋಧರು ಸರಿಯಾದ ಉತ್ತರವನ್ನು ನೀಡಿದ್ದಾರೆ ಎಂದು ಡಿಐಜಿ ಪಾರೀಖ್ ಹೇಳಿದರು.
ಪಾಕ್ ರೇಂಜರ್ಗಳ ಗುಂಡಿನ ಹಾಗೂ ಶೆಲ್ಲಿಂಗ್ ದಾಳಿಯ ಶನಿವಾರ ಬೆಳಗ್ಗೆ 6.45ರ ಹೊತ್ತಿಗೆ ನಿಂತಿತು. ಭಾರತದ ಕಡೆಯಲ್ಲಿ ಯಾವುದೇ ಜೀವ ಹಾನಿ, ನಾಶ ನಷ್ಟ ಉಂಟಾಗಿಲ್ಲ ಎಂದು ಪಾರೀಖ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM Modi ಮತ ಹಾಕಿದವರ ಆಸ್ತಿ ವೋಟ್ ಜೆಹಾದ್ ಮಾಡಿದವರಿಗೆ
Tamil Nadu ಭಾರಿ ಮಳೆ ಎಚ್ಚರಿಕೆ: ಊಟಿಗೆ ಬರದಂತೆ ಪ್ರವಾಸಿಗರಿಗೆ ಸೂಚನೆ
Delhi;ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಬೆಂಕಿ: ದೆಹಲಿಯಲ್ಲಿ ತುರ್ತು ಲ್ಯಾಂಡಿಂಗ್
Goa ;ಬೀಚ್ ನಲ್ಲಿ ಸಿಡಿಲಿನ ಆಘಾತಕ್ಕೆ ಕೇರಳದ ಪ್ರವಾಸಿಗ ಮೃತ್ಯು
AAP Leader ಬಿಭವ್ ಕುಮಾರ್ ನನ್ನ ಕೆನ್ನೆಗೆ ಹೊಡೆದು, ಎದೆಗೆ ಒದ್ದರು..; ಸ್ವಾತಿ ಮಲಿವಾಲ್