ರಹಸ್ಯ ಪರಮಾಣು ನಗರಿ:ಉಗ್ರವಾದದಿಂದ ಗಮನ ಬೇರೆಡೆಗೆ ಸೆಳೆವ ಪಾಕ್ ಯತ್ನ
Team Udayavani, Feb 9, 2017, 7:46 PM IST
ಹೊಸದಿಲ್ಲಿ : ಭಾರತ ರಹಸ್ಯ ಪರಮಾಣು ನಗರವನ್ನು ನಿರ್ಮಿಸುತ್ತಿದೆ ಎಂಬ ಪಾಕಿಸ್ಥಾನದ ಹೇಳಿಕೆಯು ನಿರಾಧಾರವಾದದ್ದೆಂದು ಹೊಸದಿಲ್ಲಿ ಇಂದು ಗುರುವಾರ ಸ್ಪಷ್ಟಪಡಿಸಿದೆ.
“ಪಾಕಿಸ್ಥಾನದ ಈ ಯತ್ನವು ಭಯೋತ್ಪಾದನೆಯ ನೈಜ ಹಾಗೂ ಜ್ವಲಂತ ಪ್ರಶ್ನೆಯಿಂದ ಗಮನವನ್ನು ಬೇರೆಡೆಗೆ ಸೆಳೆಯುವ ಉದ್ದೇಶ ಹೊಂದಿದೆ’ ಎಂದು ವಿದೇಶ ವ್ಯವಹಾರಗಳ ಸಚಿವಾಲಯದ ವಕ್ತಾ ವಿಕಾಸ್ ಸ್ವರೂಪ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಇಂದು ಬೆಳಗ್ಗೆ ಪಾಕಿಸ್ಥಾನವು “ಭಾರತ ರಹಸ್ಯ ಪರಮಾಣು ನಗರವೊಂದನ್ನು ನಿರ್ಮಿಸುತ್ತಿದ್ದು ಅಲ್ಲಿ ತನ್ನ ಪರಮಾಣು ಅಸ್ತ್ರಗಳನ್ನು ಸಂಗ್ರಹಿಸಿಡುತ್ತಿದೆ; ಭಾರತದ ಈ ಕ್ರಮವು ಈ ವಲಯದಲ್ಲಿ ವ್ಯೂಹಾತ್ಮಕ ಶಕ್ತಿ ಸಂತುಲನೆಗೆ ಬೆದರಿಕೆಯಾಗಿದೆ’ ಎಂದು ಹೇಳಿತ್ತು.
ಪಾಕ್ ವಿದೇಶ ಕಾರ್ಯಾಲಯದ ವಕ್ತಾರ ನಫೀಸ್ ಝಕಾರಿಯಾ ಅವರು ಇಂದು ನಡೆಸಿದ ಸಾಪ್ತಾಹಿಕ ಸುದ್ದಿ ಗೋಷ್ಠಿಯಲ್ಲಿ “ಭಾರತದ ಅಣ್ವಸ್ತ್ರ ವೃದ್ದಿ ಕಾರ್ಯಕ್ರಮ’ದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ