ನಾಯಿಗೆ ಊಟ ತಡವಾಗಿ ಹಾಕಿದ್ದಕ್ಕೆ 21 ವರ್ಷದ ಯುವಕನನ್ನು ಬೆಲ್ಟ್ನಿಂದ ಹೊಡೆದು ಕೊಂದ ಸಂಬಂಧಿ!
Team Udayavani, Nov 6, 2022, 12:00 PM IST
ತಿರುವನಂತಪುರಂ: ಕ್ಷುಲಕ ಕಾರಣಕ್ಕೆ ಯುವಕನೋರ್ವ ಜೊತೆಯಲ್ಲಿದ್ದ ಸಹೋದರ ಸಂಬಂಧಿ ಯುವಕನನ್ನು ಭೀಕರವಾಗಿ ಹಿಂಸಿಸಿ ಕೊಲೆಗೈದ ಘಟನೆ ಪಾಲಕ್ಕಾಡ್ನ ಮನ್ನೆಂಗೋಡ್ ನಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ಹರ್ಷದ್ (27) ಸಾವಿಗೀಡಾದ ಯುವಕ. ಹಕೀಂ (27) ಕೃತ್ಯವೆಸಗಿದ ಆರೋಪಿ.
ಘಟನೆ ಹಿನ್ನೆಲೆ: ಹರ್ಷದ್ ಹಾಗೂ ಹಕೀಂ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಇಬ್ಬರು ಖಾಸಗಿ ಮೊಬೈಲ್ ಟೆಲಿಕಾಂ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಹಕೀಂ ಹರ್ಷದ್ ರನ್ನು ಯಾವಾಗಲೂ ಸೇವಕನಂತೆ ನೋಡಿಕೊಳ್ಳುತ್ತಿದ್ದ. ಸಂಬಂಧಿಯಾದ ಕಾರಣ ಹರ್ಷದ್ ಸುಮ್ಮನಿದ್ದು ಮಾತು ಕೇಳಿಕೊಂಡು ಇರುತ್ತಿದ್ದ. ಗುರುವಾರ ( ನವೆಂಬರ್ 3 ರಂದು) ಹಕೀಂ ತನ್ನ ಮನೆಯ ಸಾಕು ನಾಯಿಗೆ ಹರ್ಷದ್ ತಡವಾಗಿ ಊಟ ಹಾಕಿದ್ದಕ್ಕೆ ಸಿಟ್ಟಾಗಿ, ನಾಯಿಗೆ ಹಾಕಿದ್ದ ಬೆಲ್ಟ್ ಹಾಗೂ ಮರದ ವಸ್ತುವಿನಿಂದ ಹೊಡೆಯಲು ಆರಂಭಿಸಿದ್ದಾನೆ. ನೋವಿನಲ್ಲಿ ನರಳುತ್ತಿದ್ದರು ಹೊಡೆಯುತ್ತಲೇ ಹಕೀಂ ಹರ್ಷದ್ ರನ್ನು ಒದ್ದು ಮನೆಯಿಂದ ಕೆಳಕ್ಕೆ ದೂಡಿದ್ದಾನೆ.
ತೀವ್ರವಾಗಿ ಗಾಯಗೊಂಡ ಹರ್ಷದ್ ರನ್ನು ಸ್ವತಃ ಹಕೀಂ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ವೈದ್ಯರ ಬಳಿ ಈತ ಮನೆಯ ಮೇಲಿಂದ ಬಿದ್ದಿದ್ದಾನೆ ಎಂದು ಹೇಳಿದ್ದಾನೆ. ಆದರೆ ವೈದ್ಯರು ಹರ್ಷದ್ ಅವರ ಬೆನ್ನ ಹಿಂದಿನ ಗಾಯ ನೋಡಿ ಅನುಮಾನಗೊಂಡು ಪೊಲೀಸರಿಗೆ ತಿಳಿಸಿದ್ದಾರೆ.
ಶನಿವಾರ (ನ.5) ಪೊಲೀಸರು ಹಕೀಂರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಬಳಿಕ ಹಕೀಂ ಸತ್ಯ ಬಾಯಿ ಬಿಟ್ಟಿದ್ದಾನೆ.
ಹರ್ಷದ್ ನಿಗೆ ಬೆಲ್ಟ್ ಹಾಗೂ ಮರದ ವಸ್ತುವಿನಿಂದ ಹೊಡೆದ ಪರಿಣಾಮ ಆತನಿಗೆ 160 ಕ್ಕೂ ಹೆಚ್ಚು ಗಾಯಗಳಾಗಿತ್ತು. ಆಸ್ಪತ್ರೆಗೆ ಕರೆದುಕೊಂಡು ಬರುವಾಗಲೇ ಆತ ತೀವ್ರ ಗಾಯಗೊಂಡು ಸಾವನ್ನಪ್ಪಿದ್ದ ಎಂದು ವರದಿ ತಿಳಿಸಿದೆ.
ಪೊಲೀಸರು ವಿಚಾರಣೆ ಬಳಿಕ, ಹಕೀಂ ಹರ್ಷದ್ ರನ್ನು ಒಂದಲ್ಲ ಒಂದು ವಿಷಯಕ್ಕೆ ಪ್ರತಿದಿನ ಹೊಡೆಯುತ್ತಿದ್ದ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್ಗೆ 48 ಗಂಟೆ ಪ್ರಚಾರ ನಿಷೇಧ
Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್ ಮೈಂಡ್; ಗೋಲ್ಡಿ ಬ್ರಾರ್ ಶೂಟೌಟ್ – ವರದಿ
ಸಲ್ಮಾನ್ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ
Panaji: ವಿಮಾನ ನಿಲ್ದಾಣದಲ್ಲಿ ಬಾಂಬ್! ಇ-ಮೇಲ್ ಮೂಲಕ ಬೆದರಿಕೆ
Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ
MUST WATCH
ಹೊಸ ಸೇರ್ಪಡೆ
Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್ಗೆ 48 ಗಂಟೆ ಪ್ರಚಾರ ನಿಷೇಧ
Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ
Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್ ಹೇಳಿಕೆ
ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…
Kollywood: ದಳಪತಿ ವಿಜಯ್ ʼGOATʼ ಸಿನಿಮಾದಲ್ಲಿ ಧೋನಿ, ರುತ್ ರಾಜ್ ನಟನೆ?