ಸ್ಫೋಟಕದ ಶೋಧಕ್ಕೆ ಬಂದಾಗ ಕಂಡಿದ್ದು ಪಾನ್‌ ಮಸಾಲಾ ಕವರ್‌ಗಳು!


Team Udayavani, Jul 16, 2017, 3:50 AM IST

pan-masala.gif

ಲಕ್ನೋ: ಜನಪ್ರತಿನಿಧಿಗಳ ಕುರ್ಚಿ ಕೆಳಗೇ ಸ್ಫೋಟಕ ದೊರೆತ ಕಾರಣಕ್ಕೆ ಎರಡು ದಿನಗಳಿಂದ ಸುದ್ದಿಯಲ್ಲಿದ್ದ ಉತ್ತರ ಪ್ರದೇಶ ವಿಧಾನಸಭೆ, ಶನಿವಾರ ಬೇರೆಯದೇ ಕಾರಣಕ್ಕೆ ದೇಶದ ಗಮನ ಸೆಳೆದಿದೆ. ಅದೇನೆಂದರೆ, ಶಕ್ತಿ ಕೇಂದ್ರದೊಳಗೆ ಸ್ಫೋಟಕ ತಂದವರನ್ನೇ ನಾಚಿಸುವಷ್ಟು ಪ್ರಮಾಣದ ಗುಟ್ಕಾ, ಪಾನ್‌ ಮಸಾಲಾ ಪ್ಯಾಕೆಟ್‌ಗಳು ಉ.ಪ್ರ ವಿಧಾನಸಭೆಯಲ್ಲಿ ದೊರೆತಿವೆ!

ವಿಧಾನಸಭೆಯಲ್ಲಿ ಇನ್ನೇನಾದರೂ ಸ್ಫೋಟಕ ಇರಬಹುದೇ ಎಂಬ ಅನುಮಾನದೊಂದಿಗೆ ತಪಾಸ ಣೆ ಗಿಳಿದ ಉಗ್ರ ನಿಗ್ರಹ ದಳದ ಸಿಬಂದಿ, ಕೈಯ್ಯಲ್ಲಿ ಸ್ಫೋಟಕ ಪತ್ತೆ ಸಾಧನ ಹಿಡಿದು ಕಟ್ಟಡದ ಮೂಲೆ ಮೂಲೆಯನ್ನೂ ಜಾಲಾಡುತ್ತಿದ್ದರು. ಹೀಗೆ ಹುಡುಕುವಾಗ ಅಲ್ಲಲ್ಲಿ ಸರ್‌-ಬರ್‌ ಸದ್ದಾಗುತ್ತಿತ್ತು. ಸ್ಫೋಟಕ ಇರಬಹುದೇನೋ ಎಂಬ ಅನುಮಾನ ದೊಂದಿಗೆ, ಸದ್ದು ಮಾಡಿದ ವಸ್ತುವನ್ನು ಕೈಗೆತ್ತಿ ಕೊಂಡು ನೋಡಿದರೆ ಅದು ಪಾನ್‌ ಮಸಾಲಾ ಪೊಟ್ಟಣ ವಾಗಿರುತ್ತಿತ್ತು. ತಪಾಸಣೆ ವೇಳೆ ಎಲ್ಲ ಸಿಬಂ ದಿಗೂ ಸಾಕಷ್ಟು ಬಾರಿ ಇಂಥ ಅನುಭವಾಯಿತು.

ಸ್ಫೋಟಕದ ಪುಡಿ ಸಿಕ್ಕ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ಒಪ್ಪಿಸಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಶುಕ್ರವಾರ ಆದೇಶಿಸಿದ್ದರು. ಅದರಂತೆ ತಪಾಸಣೆ ಕಾರ್ಯ ಕೈಗೊಳ್ಳಲು ಉಗ್ರ ನಿಗ್ರಹ ದಳದ ಸಿಬಂದಿ ಶನಿವಾರ ವಿಧಾನಸಭೆ ಕಟ್ಟಡ ಪ್ರವೇಶಿಸಿದ್ದರು. ಈ ವೇಳೆ ಶಾಸಕರ ಕುರ್ಚಿಗಳ ಸಂದಿ, ಗೊಂದಿಗಳಲ್ಲಿ ಸಿಕ್ಕ ಗುಟ್ಕಾ, ಪಾನ್‌ ಮಸಾಲಾದ ಖಾಲಿ ಕವರ್‌ಗಳನ್ನು ಕಂಡು ಉಗ್ರ ನಿಗ್ರಹ ದಳ ನಿಬ್ಬೆರಗಾಯಿತು! ಇದೇ ವೇಳೆ ತಪಾಸಣೆ ನಡೆಸುತ್ತಿದ್ದ ತಂಡಕ್ಕೆ ಮೆಗ್ನೇಶಿಯಂ ಸಲ್ಫೆàಟ್‌ ಇರುವ ಪೊಟ್ಟಣ ಕೂಡ ಸಿಕ್ಕಿದ್ದು, ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಸುದ್ದಿ ಸಂಸ್ಥೆಯೊಂದು ತಿಳಿಸಿದೆ.

ಉತ್ತರಪ್ರದೇಶ ವಿಧಾನಸಭೆ ಕಟ್ಟಡವನ್ನು ಸ್ವತ್ಛ ಗೊಳಿಸುತ್ತಿದ್ದ ಸಿಬ್ಬಂದಿಗೆ ಜು.12ರಂದು ಬಿಳಿ ಬಣ್ಣದ ಪುಡಿ ಇದ್ದ ಪೊಟ್ಟಣ ದೊರೆತಿತ್ತು. ಪ್ರಯೋಗಾಲ ಯದಲ್ಲಿ ಪರೀಕ್ಷಿಸಿದ ನಂತರ ಅದು “ಪೆಂಟಾರಿಥಿರಿ ಟೋಲ್‌ ಟೆಟ್ರಾನಿಟ್ರೇಟ್‌’ ಎಂಬ ಸ್ಫೋಟಕ ಎಂದು ದೃಢಪಟ್ಟಿತ್ತು. ಇದೀಗ ತಪಾಸಣೆ ಉದ್ದೇಶದಿಂದ ವಿಧಾನಸಭೆ ಕಟ್ಟಡಕ್ಕೆ ಬಿಗಿ ಬಂದೋಬಸ್ತ್ ಒದಗಿಸಿದ್ದು, ಯಾರೊಬ್ಬರೂ ಕಟ್ಟಡ ಪ್ರವೇಶಿಸದಂತೆ ಕಟ್ಟೆಚ್ಚರ ವಹಿಸಲಾಗಿದೆ.

ಯುಪಿ ವಿಧಾನಸಭೆಗೆ ಸರ್ಪಗಾವಲು
ಸ್ಫೋಟಕ ವಸ್ತುಗಳು ಪತ್ತೆಯಾದ ಹಿನ್ನೆ°ಲೆಯಲ್ಲಿ ಉತ್ತರಪ್ರದೇಶ ವಿಧಾನಸಭೆಗೆ ಭಾರೀ ಭದ್ರತೆ ಒದಗಿಸಲಾಗಿದೆ. ವಿಧ್ವಂಸಕ ಕೃತ್ಯ ನಿಗ್ರಹ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇಡೀ ಸದನಕ್ಕೆ ಸಮಗ್ರ ಭದ್ರತೆ ಒದಗಿಸುವ ಪ್ರಕ್ರಿಯೆ ಆರಂಭಿಸಿದ್ದೇವೆ ಎಂದು ಹೆಚ್ಚುವರಿ ಡಿಜಿಪಿ ಆನಂದ್‌ ಕುಮಾರ್‌ ಹೇಳಿದ್ದಾರೆ. ಸದ್ಯದಲ್ಲೇ ಅಣಕು ಭದ್ರತಾ ಪ್ರದರ್ಶನ ಮಾಡಲಾಗುವುದು. ಸದನದ ಆವರಣದಲ್ಲಿ ಕ್ಷಿಪ್ರ ಕಾರ್ಯಪಡೆ, ಉಗ್ರ ನಿಗ್ರಹ ಪಡೆಯನ್ನು ನಿಯೋಜಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.

ಟಾಪ್ ನ್ಯೂಸ್

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

1-twin

Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

1-wqeewqe

Mumbai Indians ವಿರುದ್ಧ ತವರಿನ ಅಂಗಳ: ರಾಹುಲ್‌ಗೆ ಮಹತ್ವದ ಪಂದ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-twin

Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ

1-weweweqwe

Manipal ಹಾಸ್ಪಿಟಲ್ಸ್‌ ಪಾಲಾದ ಮೆಡಿಕಾ ಸಿನರ್ಜಿ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

1-twin

Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.