Parliament; ಗದ್ದಲದ ನಡುವೆ ಕಲಾಪ ಉತ್ಪಾದಕತೆ ಶೇ.74:ಅಂಗೀಕಾರಗೊಂಡ ಮಸೂದೆಗಳು 18
ಒಂದು ದಿನ ಮುಂಚಿತವಾಗಿಯೇ ಲೋಕ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ
Team Udayavani, Dec 22, 2023, 6:15 AM IST
ಹೊಸದಿಲ್ಲಿ: ಸಂಸತ್ ಭದ್ರತೆ ಉಲ್ಲಂಘನೆ, 140 ಸಂಸದರ ಅಮಾನತು, ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ಉಚ್ಚಾಟನೆ ಮುಂತಾದ ಗದ್ದಲಗಳಿಗೆ ಸಾಕ್ಷಿಯಾದ ಲೋಕಸಭೆಯ ಕಲಾಪವು ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ. ಅಧಿವೇಶನ ಅಂತ್ಯಕ್ಕೆ ಒಂದು ದಿನ ಬಾಕಿಯಿರುವಂತೆಯೇ, ಗುರುವಾರ ಕಲಾಪವನ್ನು ಮುಂದೂಡಲಾಗಿದೆ.
ಡಿ. 4ರಂದು ಅಧಿವೇಶನ ಆರಂಭವಾಗಿದ್ದು, ಮೊದಲ ವಾರ ಸುಗುಮವಾಗಿ ಕಲಾಪಗಳು ನಡೆದವು. ಡಿ.13ರ ಭದ್ರತಾ ವೈಫಲ್ಯದ ಬಳಿಕ ಇಡೀ ಸನ್ನಿವೇಶ ಬದಲಾಯಿತು. ಈ ಬಾರಿಯ ಲೋಕಸಭೆ ಕಲಾಪದಲ್ಲಿ ಕ್ರಿಮಿನಲ್ ಕಾನೂನುಗಳ ತಿದ್ದುಪಡಿ ಮಸೂದೆ, ಟೆಲಿಗ್ರಾಫ್ ಕಾಯ್ದೆ, ಪ್ರಸ್ ಆ್ಯಂಡ್ ರಿಜಿಸ್ಟ್ರೇಷನ್ ಆಫ್ ಬುಕ್ಸ್ ಆ್ಯಕ್ಟ್, ಅಂಚೆ ಕಚೇರಿ ಮಸೂದೆ ಮುಂತಾದ ಪ್ರಮುಖ ಮಸೂದೆಗಳು ಅಂಗೀಕಾರಗೊಂಡವು.
ಇನ್ನು ವೃತ್ತಪತ್ರಿಕೆ ನೋಂದಣಿ ಸುಲಭ
ವೃತ್ತಪತ್ರಿಕೆಗಳ ನೋಂದಣಿಯನ್ನು ಸರಳೀಕರಿಸುವ ನಿಟ್ಟಿನಲ್ಲಿ ಮಂಡನೆಯಾದ ಪ್ರಸ್ ಆ್ಯಂಡ್ ರಿಜಿಸ್ಟ್ರೇಷನ್ ಆಫ್ ಪೀರಿಯಾಡಿಕಲ್ಸ್ ಬಿಲ್- 2023 ಮಸೂದೆಗೆ ಸಂಸತ್ನ ಅನುಮೋದನೆ ದೊರೆತಿದೆ. ಹಳೆಯ ಕಾನೂನಿನಲ್ಲಿ ವೃತ್ತಪತ್ರಿಕೆಗಳ ನೋಂದಣಿಗೆ 8 ಹಂತದ ಪ್ರಕ್ರಿಯೆಗಳನ್ನು ನಡೆಸಬೇಕಿತ್ತು. ಹೊಸ ಕಾನೂನಿನಂತೆ, ಕೇವಲ ಒಂದು ಹಂತದಲ್ಲೇ ನೋಂದಣಿ ಪೂರ್ಣಗೊಳ್ಳಲಿದೆ. ಇದೇ ವೇಳೆ, ಟೆಲಿಕಮ್ಯೂನಿಕೇಶನ್ಸ್ ಮಸೂದೆಗೆ ಗುರುವಾರ ರಾಜ್ಯಸಭೆಯ ಅನುಮೋದನೆ ದೊರೆತಿದೆ.
ಧನ್ಕರ್ ಮಿಮಿಕ್ರಿ: ಜಾಟ್ ಪ್ರತಿಭಟನೆ
ರಾಜ್ಯಸಭೆ ಸಭಾಧ್ಯಕ್ಷ, ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಅವರನ್ನು ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಗೇಲಿ ಮಾಡಿದ್ದನ್ನು ಖಂಡಿಸಿ ದಿಲ್ಲಿಯಲ್ಲಿ ಜಾಟ್ ಸಮುದಾಯ ಪ್ರತಿಭಟನೆ ನಡೆಸಿದೆ. ಗೇಲಿ ಮಾಡಿದ ಕಲ್ಯಾಣ್ ಬ್ಯಾನರ್ಜಿ, ಅದರ ವೀಡಿಯೋ ಮಾಡಿದ ರಾಹುಲ್ಗಾಂಧಿ ಇಬ್ಬರನ್ನೂ ಸಂಸತ್ನಿಂದ ಶಾಶ್ವತವಾಗಿ ಅಮಾನತು ಮಾಡಬೇಕು ಎಂದು ಜಾಟ್ ಮಹಾಸಭಾ ಆಗ್ರಹಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
MUST WATCH
ಹೊಸ ಸೇರ್ಪಡೆ
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್