PM Modi ಭೇಟಿಯಾದ ಸರ್ವಧರ್ಮದ 25 ಗುರುಗಳ ನಿಯೋಗ
ನಾವೆಲ್ಲರೂ ಭಾರತೀಯರು ಬನ್ನಿ ನಮ್ಮ ದೇಶವನ್ನು ಬಲಪಡಿಸೋಣ... 'ವಿಶ್ವಗುರು'ವಾಗಲು ಹತ್ತಿರವಿದ್ದೇವೆ...
Team Udayavani, Feb 5, 2024, 4:37 PM IST
ಹೊಸದಿಲ್ಲಿ: ಸಂಸತ್ತಿನ ಬಜೆಟ್ ಅಧಿವೇಶನ ನಡೆಯುತ್ತಿರುವ ವೇಳೆಯಲ್ಲಿ ಸೋಮವಾರ ವಿವಿಧ ಧರ್ಮಗಳ 25 ಧಾರ್ಮಿಕ ಮುಖಂಡರ ನಿಯೋಗ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಎಲ್ಲಾ ಅಲ್ಪಸಂಖ್ಯಾತ ಧಾರ್ಮಿಕ ಮುಖಂಡರು ಮಾಧ್ಯಮಗಳೊಂದಿಗೆ ಮಾತನಾಡಿ “ನಮ್ಮ ಜಾತಿಗಳು, ಆಚಾರಗಳು, ಧರ್ಮಗಳು, ಪ್ರಾರ್ಥನೆ ವಿಧಾನಗಳು ವಿಭಿನ್ನವಾಗಿರಬಹುದು. ಆದರೆ ಮಾನವರಾಗಿ ನಮ್ಮ ದೊಡ್ಡ ಧರ್ಮ ಮಾನವೀಯತೆಯಾಗಿದೆ. ನಾವೆಲ್ಲರೂ ಒಂದೇ ದೇಶದಲ್ಲಿ ವಾಸಿಸುತ್ತಿದ್ದೇವೆ. ನಾವೆಲ್ಲರೂ ಭಾರತೀಯರು ಬನ್ನಿ ನಮ್ಮ ದೇಶವನ್ನು ಬಲಪಡಿಸೋಣ.ನಮ್ಮ ದೇಶ ನಮ್ಮ ಮೊದಲ ಆದ್ಯತೆ.ಒಟ್ಟಾಗಿ ನಮ್ಮ ದೇಶವನ್ನು ಮುಂದೆ ಕೊಂಡೊಯ್ಯಬೇಕಿದೆ.ಇಂದು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಮತ್ತೊಮ್ಮೆ ‘ವಿಶ್ವಗುರು’ವಾಗಲು ಹತ್ತಿರವಾಗಿದೆ. ಮತ್ತು ಅದು ಸಂಭವಿಸಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು.ಹೊಸ ಸಂಸತ್ತಿನ ಕಟ್ಟಡದ ಈ ದೃಶ್ಯಗಳು ನಮ್ಮ ದೇಶಕ್ಕೆ ಬದಲಾಗುತ್ತಿರುವ ಕಾಲಕ್ಕೆ ಸಾಕ್ಷಿಯಾಗಿದೆ” ಎಂದು ಹೇಳಿದರು.
ಪಾರ್ಸಿ ಸಮುದಾಯದ ಪ್ರಧಾನ ಗುರು ದಸ್ತೂರ್ ಜಿ ಮಾತನಾಡಿ “ನಾವು ಎಲ್ಲಾ ಧರ್ಮಗಳವರು ಒಂದಾಗಿ ಇಲ್ಲಿಗೆ ಬಂದಿದ್ದೇವೆ, ಪ್ರಧಾನಿ ನರೇಂದ್ರ ಮೋದಿ ಇಲ್ಲಿರುವವರೆಗೆ ನಾವು ಯಾವುದಕ್ಕೂ ಹೆದರುವುದಿಲ್ಲ, ನಾವು ಮುಂದುವರಿಯುತ್ತೇವೆ ಮತ್ತು ನಮ್ಮ ದೇಶವು ಜಗತ್ತಿನಲ್ಲೇ ಶ್ರೇಷ್ಠವಾಗಬೇಕೆಂದು ನಾನು ಬಯಸುತ್ತೇನೆ” ಎಂದರು.
#WATCH | Delhi: On meeting PM Narendra Modi in the New Parliament Building, all minority religious leaders say, “Our castes, customs, religions, prayer methods might be different. but our biggest religion as a human is that of humanity. We all live in the same country, we are all… pic.twitter.com/XmEUCAYkTc
— ANI (@ANI) February 5, 2024
ಜೈನ ಗುರು ವಿವೇಕ್ ಮುನಿ ಮಾತನಾಡಿ “ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಸಭೆಯು ಬಹಳ ಉತ್ತಮವಾಗಿತ್ತು. ನಾವು ಭಾರತೀಯ ಅಲ್ಪಸಂಖ್ಯಾತರ ಪ್ರತಿಷ್ಠಾನದ ಪರವಾಗಿ ಇಲ್ಲಿ ಒಟ್ಟುಗೂಡಿದ್ದೇವೆ. ಏಕತೆ, ಸಮಗ್ರತೆ ಮತ್ತು ‘ಸರ್ವ್ ಧರ್ಮ ಸದ್ಭಾವ’ ಕುರಿತು ನಮ್ಮ ಕೆಲಸವನ್ನು ಪ್ರಧಾನ ಮಂತ್ರಿಯವರು ಶ್ಲಾಘಿಸಿದ್ದಾರೆ” ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MUST WATCH
ಹೊಸ ಸೇರ್ಪಡೆ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ