ಉಗ್ರರ ದಾಳಿಯಿಂದ ಕುಟುಂಬ,ನೆರೆಹೊರೆಯವರನ್ನು ರಕ್ಷಿಸಿದ ಸಾಕು ನಾಯಿ.!
ಉಗ್ರರು ಮನೆಯತ್ತ ಬಂದು ಗುಂಡು ಹಾರಿಸಿ ಬಳಿಕ ತೆರಳಿದ್ದಾರೆ.
Team Udayavani, Jan 7, 2023, 11:20 AM IST
ಜಮ್ಮು: ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ಉಗ್ರರ ಭೀತಿ ಹೆಚ್ಚಾಗುತ್ತಿದೆ. ಸಿಬ್ಬಂದಿಗಳಿಂದ ಹತರಾದರೂ, ಉಗ್ರರು ತಮ್ಮ ಚಾಳಿಯನ್ನು ಬಿಡುತ್ತಿಲ್ಲ. ಮನೆಯ ಸಾಕು ನಾಯೊಯೊಂದು ಭಯೋತ್ಪಾಕರ ದಾಳಿಯಿಂದ ರಕ್ಷಿಸಿಕೊಳ್ಳಲು ಮನೆಯವರನ್ನು ಎಚ್ಚರಿಸಿದ ಘಟನೆ ರಜೌರಿಯಲ್ಲಿ ನಡೆದಿದೆ.
ಮೈಕಲ್ ಎಂಬ ಸಾಕು ನಾಯಿ ಬಂದೂಕುಗಳನ್ನು ಹಿಡಿದುಕೊಂಡು ಬಂದ ಉಗ್ರರನ್ನು ನೋಡಿ, ಬೊಗಳಲು ಆರಂಭಿಸಿದೆ. ಹೀಗೆ ಬೊಗಳಿ ಮನೆಯವರು ಸುರಕ್ಷಿತವಾಗಿ ಇರುವಂತೆ ಮಾಡಿದೆ. ಮನೆಯವರು ನಾಯಿಯ ಧ್ವನಿ ಕೇಳಿ ಸುಮ್ಮನೆ ಅವಿತುಕೊಂಡು ಕುಳಿತಿದ್ದರು ಎಂದು ವರದಿ ತಿಳಿಸಿದೆ.
ಮೈಕಲ್ ಏನಾದರೂ ಅಪಾಯ ಆಗುವ ಮುನ್ಸೂಚನೆಯಿದ್ದರೆ ಮಾತ್ರ ಜೋರು ಧ್ವನಿಯಲ್ಲಿ ಬೊಗಳುತ್ತದೆ. ಮೈಕಲ್ ಬೊಗಳಿ ನೆರೆಹೊರೆಯವರನ್ನು ಎಚ್ಚರಿಸಿದ್ದು ಅವರೆಲ್ಲಾ ಒಳಗಿನಿಂದ ಬಾಗಲು ಮುಚ್ಚಿಕೊಂಡರು, ಉಗ್ರರು ಮನೆಯತ್ತ ಬಂದು ಗುಂಡು ಹಾರಿಸಿ ಬಳಿಕ ತೆರಳಿದ್ದಾರೆ. ಒಂದು ವೇಳೆ ಮೈಕಲ್ ಬೊಗಳಿ ನಮ್ಮನ್ನು ಎಚ್ಚರಿಸದಿದ್ದರೆ ನಾವು ಸಾಯುತ್ತಿದ್ದಿವಿ ಎಂದು ನಾಯಿಯನ್ನು ಸಾಕಿದ ಮಾಲಕಿ ನಿರ್ಮಲ್ ದೇವಿ ಮಾಧ್ಯಮಗಳ ಜೊತೆ ಮಾತನಾಡುತ್ತ ತಿಳಿಸಿದ್ದಾರೆ.
ಮೈಕಲ್ ಮೇಲೆ ಗುಂಡು ಹಾರಿಸಲು ಉಗ್ರರು ಯತ್ನಿಸಿದ್ದರು, ಮೈಕಲ್ ಗೆ ಏನು ಆಗದೇ ಪಾರಾಗಿತ್ತು. ಮೈಕಲ್ ಬೊಗಳಿ ಎಚ್ಚರಿಸಿದ್ದರಿಂದ ನಾವಿಂದು ಉಳಿದುಕೊಂಡಿದ್ದೇವೆ ಎನ್ನುತ್ತಾರೆ ನಿರ್ಮಲ್ ದೇವಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್ ಘೋಷಣೆ ಬರೆದ ವಿದ್ಯಾರ್ಥಿ ಪಾಸ್: ಪ್ರಾಧ್ಯಾಪಕ ಅಮಾನತು!
ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
MUST WATCH
ಹೊಸ ಸೇರ್ಪಡೆ
ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ
Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?