ಯೋಧನ ಶಿಕ್ಷೆಗೆ ಮೋದಿ ತಡೆ
Team Udayavani, Mar 9, 2018, 8:15 AM IST
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಗೆ ಅಗೌರವ ತೋರಿಸಲಾಗಿದೆ ಎಂಬ ಆರೋಪದ ಮೇರೆಗೆ ಬಿಎಸ್ಎಫ್ ಯೋಧರೊಬ್ಬರಿಗೆ ವಾರದ ವೇತನ ಕಡಿತ ಮಾಡುವ ಪ್ರಸ್ತಾಪಕ್ಕೆ ಖುದ್ದು ಮೋದಿಯವರೇ ಅಂಥ ಕ್ರಮ ಕೈಗೊಳ್ಳದಂತೆ ಸೂಚಿಸಿದ್ದಾರೆ. ಹೀಗಾಗಿ ಅದನ್ನು ಬಿಎಸ್ಎಫ್ ಹಿಂಪಡೆದಿದೆ. ಪಶ್ಚಿಮ ಬಂಗಾಳದ ನಡಿಯಾ ಜಿಲ್ಲೆಯಲ್ಲಿದ್ದ ಬಿಎಸ್ಎಫ್ನ 15ನೇ ಬೆಟಾಲಿಯನ್ ಯೋಧ ಸಂಜೀವ್ ಕುಮಾರ್ ಫೆ.21ರಂದು ಪ್ರಧಾನಿ ಭಾಗವಹಿಸಿದ್ದ ಕಾರ್ಯಕ್ರಮದ ಬಗ್ಗೆ ಮೇಲಧಿಕಾರಿಗಳಿಗೆ ವರದಿ ಮಾಡುವ ಸಂದರ್ಭದಲ್ಲಿ “ಪ್ರಧಾನಿ ಶ್ರೀ ನರೇಂದ್ರ ಮೋದಿ’ ಎಂದು ಉಲ್ಲೇಖ ಮಾಡಿರಲಿಲ್ಲ. ಅದಕ್ಕೆ ಆಕ್ಷೇಪಿಸಿದ್ದ ಕಮಾಂಡಿಂಗ್ ಆಫೀಸರ್ (ಸಿ.ಒ) ಅನೂಪ್ ಲಾಲ್ ಭಗತ್, ಕುಮಾರ್ ವಿರುದ್ಧ ತನಿಖೆ ನಡೆಸಿ ಏಳು ದಿನಗಳ ವೇತನ ಕಡಿತ ಶಿಕ್ಷೆಯನ್ನು ವಿಧಿಸಿದ್ದರು. ಈ ಬಗ್ಗೆ ಬಿಎಸ್ಎಫ್ಗೆ ಪತ್ರ ಬರೆದಿರುವ ಪ್ರಧಾನಿ ಮೋದಿ, ಯೋಧರು ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಕೆಲಸ ಮಾಡುತ್ತಾರೆ. ಸೇನೆಯಲ್ಲಿ ಅವರಿಗೆ ಕಮಾಂಡರ್ಗಳು ಶಿಸ್ತು ಪಾಲನೆ ಬೋಧಿಸಬೇಕು. ಆದರೆ ಶಿಕ್ಷೆಯು ತಪ್ಪಿಗೆ ಸಮಾನ ತೀವ್ರದ್ದಾಗಿರಬೇಕು ಎಂದು ಮೋದಿ ಪತ್ರದಲ್ಲಿ ವಿವರಿಸಿದ್ದಾರೆ. ಅಲ್ಲದೆ ಯೋಧನ ಹೇಳಿಕೆಯಿಂದಾಗಿ ವೇತನ ಕಡಿತ ಮಾಡುವುದು ಸರಿಯಲ್ಲ ಎಂದೂ ಪತ್ರದಲ್ಲಿ ಆಕ್ಷೇಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!