ನಮ್ಮ ಜನಪರ ಕೆಲಸವನ್ನು ಕೋಮುವಾದ ಎನ್ನುವವರು ದೇಶವನ್ನು ವಿಭಜಿಸುತ್ತಿದ್ದಾರೆ : ಮೋದಿ
Team Udayavani, Apr 3, 2021, 4:36 PM IST
ಅಸ್ಸಾಂ : ದೇಶದ ಜನರ ಸೇವೆ ಮಾಡುವುದನ್ನು ಕೋಮುವಾದ ಎಂದು ಬಣ್ಣಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ಅಸ್ಸಾಂ ನ ತಮುಲ್ಪುರ್ ನಲ್ಲಿ ಚುನಾವಣಾ ಪ್ರಚಾರವನ್ನುದ್ದೇಶಿಸಿ ಮಾತನಾಡಿದ ಪ್ರದಾನಿ, ಬಿಜೆಪಿ ದೇಶದ ಜನರ ಸೇವೆ ಮಾಡುತ್ತಿದೆ. ಅದನ್ನು ಕೆಲವರು ಕೋಮುವಾದ ಎಂದು ಹೇಳುತ್ತಿದ್ದಾರೆ. ನಾವು ದೇಶದ ಎಲ್ಲಾ ಜನರಿಗೆ ಕೆಲಸ ಮಾಡಿದರೆ ಅದನ್ನು ಕೋಮುವಾದ ಎಂದು ಕರೆಯುತ್ತಿದ್ದಾರೆ. ಹಾಗೆ ಹೇಳುವವರು ದೇಶವನ್ನು ವಿಭಜಿಸುತ್ತಿದ್ದಾರೆ ಎಂದು ಅವರು ಗುಡುಗಿದ್ದಾರೆ.
ಓದಿ : ಮಂಜೇಶ್ವರದಲ್ಲಿ ಎಡರಂಗ ಹಾಗೂ ಬಿಜೆಪಿ ಒಳ ಒಪ್ಪಂದ: ಮುಲ್ಲಪಳ್ಳಿ ರಾಮಚಂದ್ರನ್
ಈ ಬಾರಿ ದೇಶ 75ನೇ ಸ್ವಾತಂತ್ರ್ಯವನ್ನು ಆಚರಿಸುತ್ತಿದೆ. ಈ ಬಾರಿ ನೀವು ನಮಗೆ ಚಲಾಯಿಸುವ ಮತಗಳು 100 ನೇ ವರ್ಷ ಸ್ವಾತಂತ್ರ್ಯವನ್ನು ಆಚರಿಸುವಾಗ ಅಸ್ಸಾಂ ಎಷ್ಟು ಪ್ರಗತಿ ಸಾಧಿಸಿದೆ ಎಂಬುವದನ್ನು ತಿಳಿಸುತ್ತದೆ.
ಅಸ್ಸಾಂನಲ್ಲಿ ಟೀ ಗಾರ್ಡನ್ ನಿರ್ಮಿಸಲು ಕೇಂದ್ರ ಬಜೆಟ್ ನಲ್ಲಿ 1000 ಕೋಟಿ ಹೊರಡಿಸಲಾಗಿದೆ. ಎಲ್ಲರ ಜೊತೆಯಲ್ಲಿ ಎಲ್ಲರ ಅಭಿವೃದ್ಧಿ ಹಾಗೂ ಎಲ್ಲರ ವಿಶ್ವಾಸ ನಮ್ಮ ಮೂಲ ಮಂತ್ರವಾಗಿದೆ. ಅಸ್ಸಾಂನ ಒಪ್ಪಂದವನ್ನು ಸಂಪೂರ್ಣವಾಗಿ ಕಾರ್ಯಗತಗೊಳಿಸಲು ಕೇಂದ್ರವು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ಇನ್ನು, ಅಸ್ಸಾಂನ ಉಗ್ರರಿಗೆ ಶರಣಾಗುವಂತೆ ಮನವಿ ಮಾಡಿದ್ದು, ಇದುವರೆಗೂ ಯಾರು ಶರಣಾಗಿಲ್ಲ ಅವರು ಶರಣಾಗಿ ಮುಖ್ಯವಾಹಿನಿಗೆ ಬಂದು ಆತ್ಮನಿರ್ಭರ್ ಅಸ್ಸಾಂ ರೂಪಿಸುವ ಅಗತ್ಯವಿದೆ ಎಂದಿದ್ದಾರೆ.
ಬಂದೂಕು ಹಿಡಿದು ನಿಮ್ಮ ಮಕ್ಕಳು ಕಾಡಿನಲ್ಲಿ ಜೀವನ ಮಾಡಬೇಕಿಲ್ಲ. ಯಾರದೋ ಗುಂಡಿಗೆ ಬಲಿಯಾಗಬೇಕಿಲ್ಲ. ನಿಮ್ಮ ಮಕ್ಕಳ ಕನಸನ್ನು ಈಡೇರಿಸುವುದಾಗಿ ಅಸ್ಸಾಂ ತಾಯಂದಿರು ಮತ್ತು ಸಹೋದರಿಯರಿಗೆ ನಾನು ಭರವಸೆ ನೀಡುತ್ತೇನೆ. ಇದಕ್ಕೆ ಎನ್ ಡಿ ಎ ಸರ್ಕಾರ ಬದ್ಧವಾಗಿದೆ ಅವರು ಹೇಳಿದ್ದಾರೆ.
Addressing a rally in Tamulpur. Watch. https://t.co/sBxRPPVF2c
— Narendra Modi (@narendramodi) April 3, 2021
ಓದಿ : ರಾಷ್ಟ್ರಪತಿ ಕೋವಿಂದ್ ಆರೋಗ್ಯದಲ್ಲಿ ಚೇತರಿಕೆ-ಐಸಿಯುನಿಂದ ವಿಶೇಷ ವಾರ್ಡ್ ಗೆ ಶಿಫ್ಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ
MUST WATCH
ಹೊಸ ಸೇರ್ಪಡೆ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ
ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್
Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ
Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ