ಗಂಗೆಯಲ್ಲಿ ಮಿಂದೇಳಲು ಸಾಧುಗಳೇ ಹಿಂದೇಟು
Team Udayavani, Oct 2, 2017, 6:00 AM IST
ಮುಜಾಫರ್ನಗರ: ಗಂಗೆಯ ಒಂದು ಹನಿ ನೀರು ತಾಕಿದರೂ ಏಳೇಳು ಜನ್ಮ ಪಾವನವಾಗುತ್ತದೆ ಎಂಬುದು ನಮ್ಮ ಜನರ, ದೇಶದ ಪರಂಪರಾಗತ ನಂಬಿಕೆ. ಆದರೆ ಈಗ? ಗಂಗೆಯಲ್ಲಿ ಜನರು ಇರಲಿ, ದೇಶದ ಸಾಧು- ಸಂತರೇ ಮುಳುಗೇಳಲು ಹಿಂದೇ ಟು ಹಾಕಿರುವ ಘಟನೆ ವರದಿಯಾಗಿದೆ.
ವಿಜಯದಶಮಿ ಅಂಗವಾಗಿ ಗಂಗೆಯಲ್ಲಿ ಪುಣ್ಯಸ್ನಾನ ಮಾಡಲು ಸಾಧು ಸಂತರೇ ನಿರಾಕರಿಸಿರುವ ಘಟನೆ ಮುಜಾಫರ ನಗರದಲ್ಲಿ ನಡೆದಿದೆ. ನೀರು ತುಂಬ ಮಲಿನವಾಗಿರುವ ಕಾರಣ ನೀರಿಗೆ ಇಳಿಯುವುದಿಲ್ಲ ಎಂದು ಸಾಧು ಸಂತರು ಜಳಕವನ್ನೇ ಕೈಬಿಟ್ಟಿದ್ದಾರೆ.
ಇಲ್ಲಿನ ಸುಕೀರ್ತಲ್ ಬಳಿಯ ಗಂಗಾನದಿಯ ನೀರು ಕಪ್ಪು ಬಣ್ಣಕ್ಕೆ ತಿರುಗಿದೆ. ಪಕ್ಕದ ಕಾರ್ಖಾನೆಗಳ ಮಲಿನ ನೀರು ನದಿಯ ನೀರನ್ನು ಸೇರಿ, ಅದು ಸಂಪೂರ್ಣ ಮಲಿನವಾಗಿದೆ. ಇಂತಹ ನೀರಿನಲ್ಲಿ ಸ್ನಾನ ಮಾಡುವುದಿಲ್ಲ ಎಂದು ಸಾಧುಗಳು ಹೇಳಿದ್ದಾರೆ. ಸಾಧುಗಳ ಈ ಸಣ್ಣ ಮಟ್ಟಿನ ಪ್ರತಿಭಟನೆಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ನೀರಿನ ಮಾದರಿಯನ್ನು ಸಂಗ್ರಹ ಮಾಡಿ, ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದೆ.
“ಗಂಗೆಯ ಒಂದು ಹನಿ ನೀರೂ ಇಲ್ಲಿಯ ವರೆಗೆ ಶುದ್ಧೀಕರಣಗೊಂಡಿಲ್ಲ’ ಎಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಅಸಮಾ ಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಇಂತ ಹುದೊಂದು ಘಟನೆ ನಡೆದಿದೆ. ನಮಾಮಿ ಗಂಗೆ ಯೋಜನೆಯಡಿ ಗಂಗಾ ನದಿಯನ್ನು ಸ್ವತ್ಛಗೊಳಿಸಲು ಕೇಂದ್ರ ಸರ್ಕಾರ ಮುಂದಾ ಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?
Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!
Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ
ಅಮೃತಶಿಲೆಯಲ್ಲಿ ಕೆತ್ತಿದ 18 ಅಡಿ ಕಾಳಿ ಮಾತೆ ಪ್ರತಿಮೆ ಇಂದು ಕೇರಳಕ್ಕೆ
ಇಂದಿನಿಂದ ದ್ವಿತೀಯ ಪಿಯು-2 ಪರೀಕ್ಷೆ: 1.5 ಲಕ್ಷ ವಿದ್ಯಾರ್ಥಿಗಳ ನೋಂದಣಿ