ನಾಳೆ ರಾಷ್ಟ್ರಪತಿ ಚುನಾವಣೆ: ಕೋಟ್ಯಧಿಪತಿಗಳಿಂದ ರಾಷ್ಟ್ರಪತಿ ಆಯ್ಕೆ


Team Udayavani, Jul 16, 2017, 4:10 AM IST

Presidential-election-india.gif

ನವದೆಹಲಿ: ಸ್ವತಂತ್ರ ಭಾರತದ 14ನೇ ರಾಷ್ಟ್ರಪತಿ ಆಯ್ಕೆಗೆ ವೇದಿಕೆ ಸಜ್ಜಾಗಿದೆ. ಸೋಮವಾರ (ಜು.17) ರಾಷ್ಟ್ರಪತಿ ಚುನಾವಣೆ ನಡೆಯಲಿದೆ. ನವದೆಹಲಿಯ ಸಂಸತ್‌ ಭವನ, ದೇಶದ 28 ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭೆ ಕಟ್ಟಡಗಳೇ ಮತದಾನ ಕೇಂದ್ರಗಳಾಗಿವೆ. 

ಇಲ್ಲಿ ಶಾಸಕರು, ಸಂಸದರು ಸೇರಿದಂತೆ ಒಟ್ಟು 4,896 ಮಂದಿ ಹಕ್ಕು ಚಲಾಯಿಸಲಿದ್ದಾರೆ. ರಾಷ್ಟ್ರಪತಿ ಚುನಾವಣೆ ಹೊಸ್ತಿಲಲ್ಲಿರುವಾಗಲೇ ಅಸೋಸಿಯೇಷನ್‌ ಆಫ್ ಡೆಮಾಕ್ರಟಿಕ್‌ ರಿಫಾಮ್ಸ್‌ì (ಎಡಿಆರ್‌) ಮತ್ತು ನ್ಯಾಷನಲ್‌ ಎಲೆಕ್ಷನ್‌ ವಾಚ್‌(ಎನ್‌ಇಡಬ್ಲ್ಯು) ಸಂಸ್ಥೆಗಳು ಮತದಾರರ ಕುರಿತು ಆಳವಾದ ಅಧ್ಯಯನ ನಡೆಸಿವೆ. ಅಧ್ಯಯನದಿಂದ ದೊರೆತ ಅಂಕಿ ಅಂಶಗಳ ಪ್ರಕಾರ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಪ್ರಥಮ ಪ್ರಜೆ ಯಾರಾಗಲಿದ್ದಾರೆ ಎಂಬುದನ್ನು ಕ್ರಿಮಿನಲ್‌ಗ‌ಳು ಹಾಗೂ ಕೋಟ್ಯಾಧಿಪತಿಗಳು ನಿರ್ಧರಿಸುತ್ತಾರೆ!

ಹೌದು. ರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನದ ಹಕ್ಕು ಚಲಾಯಿಸಲಿರುವ ದೇಶದ 4,896 ಶಾಸಕರು ಹಾಗೂ ಸಂಸದರ ಪೈಕಿ ಶೇ.33 ಮಂದಿ ವಿರುದ್ಧ ಕ್ರಿಮಿನಲ್‌ ಮೊಕದ್ದಮೆಗಳಿವೆ. ಶೇ.71 ಜನಪ್ರತಿನಿಧಿಗಳು ಕೋಟ್ಯಧಿಪತಿಗಳಾಗಿದ್ದಾರೆ. ಹಿಂದಿನ ಲೋಕಸಭೆ, ವಿಧಾನಸಭೆ ಚುನಾವಣೆಗಳ ವೇಳೆ ಜನಪ್ರತಿನಿಧಿಗಳು ಚುನಾವಣೆ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣಪತ್ರದಿಂದ ಈ ಎಲ್ಲ ಮಾಹಿತಿ ಲಭ್ಯವಾಗಿವೆ.

ಶೇ.33 ಕ್ರಿಮಿನಲ್‌ ಮತದಾರರು!
ಒಟ್ಟು ಮತದಾರರ ಪೈಕಿ 1,581 ಅಂದರೆ ಶೇ.33 ಮಂದಿ ಮೇಲೆ ಕ್ರಿಮಿನಲ್‌ ಕೇಸುಗಳಿವೆ. ಈ ಪೈಕಿ 993 ಮಂದಿ ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ದೇಶದ 184 (ಶೇ.34) ಸಂಸದರು ಮತ್ತು 1,353 ಶಾಸಕರು (ಶೇ.33), 231 ರಾಜ್ಯಸಭೆ ಸದಸ್ಯರ ಪೈಕಿ 44 ಮಂದಿ (ಶೇ.19) ಕ್ರಿಮಿನಲ್‌ ಹಿನ್ನೆಲೆ ಹೊಂದಿದ್ದಾರೆ.

ಶೇ.71 ಕೋಟ್ಯಧಿಪತಿಗಳು!
ಲೋಕಸಭೆ ಸಂಸದರ ಪೈಕಿ 445 (ಶೇ.82) ಮಂದಿ ಕೋಟಿಗೆ ಬಾಳುತ್ತಾರೆ. 4078 ಶಾಸಕರ ಪೈಕಿ 2721 (ಶೇ.68) ಕೋಟ್ಯಧಿಪತಿಗಳಿದ್ದು, ರಾಜ್ಯಸಭೆಯ 194 ಸದಸ್ಯರು (ಶೇ.84) ಕೋಟ್ಯಂತರ ರೂ. ಮೌಲ್ಯದ ಆಸ್ತಿ ಒಡೆಯರಾಗಿದ್ದಾರೆ. ಅದರಲ್ಲೂ ಕರ್ನಾಟಕ ಅತಿ ಹೆಚ್ಚು ಸಂಖ್ಯೆಯ ಕೋಟ್ಯಾಧೀಶ ಮತದಾರರನ್ನು ಹೊಂದಿದೆ.

ಮಹಿಳಾ ಮತದಾರರು
4,852 ಮತದಾರರ ಪೈಕಿ ಮಹಿಳೆಯರ ಸಂಖ್ಯೆ ಕೇವಲ 451 (ಶೇ.9). ಲೋಕಸಭೆಯಲ್ಲಿ 65 ಸಂಸದೆಯರು, ದೇಶಾದ್ಯಂತ 363 ಶಾಸಕಿಯರಿದ್ದು, ರಾಜ್ಯಸಭೆಯಲ್ಲಿ 23 ಮಹಿಳೆಯರಿದ್ದಾರೆ. ಪಶ್ಚಿಮ ಬಂಗಾಳ ಅತಿ ಹೆಚ್ಚು ಶಾಸಕಿಯರನ್ನು (41) ಹೊಂದಿದೆ.
ಒಟ್ಟು ಮತದಾರರು- 4,896
ಸಂಸದರು- 776
ಶಾಸಕರು- 4120
ಕ್ರಿಮಿನಲ್‌ ಹಿನ್ನೆಲೆಯವರು- 1,581
ಕೋಟ್ಯಾಧಿಪತಿಗಳು- 3360

ರಾಜ್ಯದಲ್ಲೇ ಮತ ಚಲಾಯಿಸಲು ದೀದಿ ಸೂಚನೆ; ಸಂಸದರಿಗೆ ಅತೃಪ್ತಿ
ರಾಷ್ಟ್ರಪತಿ ಚುನಾವಣೆಯಲ್ಲಿ ಅಡ್ಡ ಮತದಾನ ಆಗಬಹುದು ಎಂಬ ಭೀತಿಯಿಂದ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರು ತನ್ನೆಲ್ಲ ಸಂಸದರಿಗೂ ರಾಜ್ಯದಲ್ಲೇ ಮತ ಚಲಾಯಿಸುವಂತೆ ಸೂಚಿಸಿದ್ದಾರೆ. ಜು.1ರಂದೇ ಈ ಕುರಿತು ಸಂಸದರಿಗೆ ಎಸ್ಸೆಮ್ಮೆಸ್‌ ಸಂದೇಶ ರವಾನಿಸಿರುವ ದೀದಿ, “ಸಂಸದರೆಲ್ಲ ಕೋಲ್ಕತ್ತಾದಲ್ಲೇ ಹಕ್ಕು ಚಲಾಯಿಸಬೇಕು. ಚುನಾವಣಾ ಆಯೋಗ ಕಳುಹಿಸಿರುವ ಅರ್ಜಿಯಲ್ಲಿ ಮತ ಚಲಾಯಿಸುವ ಸ್ಥಳವನ್ನು ಕೋಲ್ಕತ್ತಾ ಎಂದೇ ಉಲ್ಲೇಖೀಸಿ ಮಣಿಕ್‌ ದಾ(ಮಮತಾ ಅವರ ಕಾರ್ಯದರ್ಶಿ ಮತ್ತು ನಂಬಿಕಸ್ಥ ಬಂಟ) ಅವರಿಗೆ ಕಳುಹಿಸಿಕೊಡಬೇಕು’ ಎಂದು ಹೇಳಿದ್ದರು. ಅದರಂತೆ, ಸುಗತಾ ಬೋಸ್‌, ಕೆ.ಡಿ.ಸಿಂಗ್‌ ಸೇರಿದಂತೆ ಮೂವರು ಸಂಸದರನ್ನು ಹೊರತುಪಡಿಸಿ ಉಳಿದ ಎಲ್ಲರೂ ಕೋಲ್ಕತ್ತಾದಲ್ಲೇ ಮತ ಚಲಾಯಿಸಲಿದ್ದಾರೆ. ಈ ಕುರಿತು ಮಾತನಾಡಿರುವ ಹೆಸರು ಹೇಳಲಿಚ್ಛಿಸದ ಸಂಸದರೊಬ್ಬರು, “ನಾವು ತುಂಬಿದ ಅರ್ಜಿಗಳನ್ನು ತಮ್ಮ ಕಾರ್ಯಾಲಯಕ್ಕೆ ತರಿಸಿಕೊಂಡು, ಅಲ್ಲಿಂದ ಆಯೋಗಕ್ಕೆ ಕಳುಹಿಸಿಕೊಡಲಾಗಿದೆ. ಮಮತಾ ಅವರಿಗೆ ನಮ್ಮಲ್ಲಿ ನಂಬಿಕೆ ಇಲ್ಲ ಎನ್ನುವುದಕ್ಕೆ ಇದೇ ಸಾಕ್ಷಿ’ ಎಂದಿದ್ದಾರೆ. ಇನ್ನೊಬ್ಬರು, “ಮಮತಾ ಅವರು ನಾವು ಮತ ಚಲಾಯಿಸಿದ ಬಳಿಕ ಮತಪತ್ರಗಳನ್ನೂ ತಮಗೆ ತೋರಿಸಬೇಕು ಎಂದು ಹೇಳಿದರೂ ಆಶ್ಚರ್ಯವಿಲ್ಲ,’ ಎನ್ನುವ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.

ಟಾಪ್ ನ್ಯೂಸ್

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

ARMY (2)

ಕಾಶ್ಮೀರದ ಉಧಂಪುರದಲ್ಲಿ ಗ್ರಾಮ ರಕ್ಷಣ ಸಿಬಂದಿ ಹತ್ಯೆ

arrested

ಮಹಾದೇವ್‌ ಆ್ಯಪ್‌ ಕೇಸು: ನಟ ಸಾಹಿಲ್‌ ಖಾನ್‌ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.