ಅಪಹರಿಸಲ್ಪಟ್ಟಿದ್ದ ಥಾಣೆ ಯುವಕನ ರಕ್ಷಣೆ ;ಇಬ್ಬರು ಮಹಿಳೆಯರು, ಐವರು ಪುರುಷರ ಬಂಧನ
Team Udayavani, Nov 2, 2020, 10:35 PM IST
ಥಾಣೆ: ಥಾಣೆ ಪೊಲೀಸರು ನೆರೆಯ ಪಾಲ್ಗರ್ ಜಿಲ್ಲೆಯಲ್ಲಿ 4 ಲಕ್ಷ ರೂ. ಗಳ ಸುಲಿಗೆಗಾಗಿ ಸೆರೆಯಾಗಿದ್ದ ಐಟಿ ವೃತ್ತಿಪರನನ್ನು ರಕ್ಷಿಸಿ, ಏಳು ಜನರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ. ಅಭಿಷೇಕ್ ಗುಪ್ತಾ (20) ಅವರು ಶನಿವಾರ ಕೆಲಸದಲ್ಲಿದ್ದಾಗ ಅವರ ಸ್ನೇಹಿತೆಯರಲ್ಲಿ ಒಬ್ಬಳಾದ ನರ್ಗೀಸ್ ಮೊಹಮ್ಮದ್ ಜಾವೇದ್ (20) ಮಧ್ಯಾಹ್ನ ಅವರನ್ನು ವಸಾಯಿಯಲ್ಲಿರುವ ಉಪಾಹಾರ ಗೃಹಕ್ಕೆ ಕರೆದಳು. ಅವರು ಅಲ್ಲಿಗೆ ತಲುಪಿದಾಗ, ಏಳು ಜನರ ತಂಡವು ಅವರನ್ನು ಕಾರಿನಲ್ಲಿ ಅಪಹರಿಸಿ ಮೊದಲು ಮನೋರ್ಗೆ ಮತ್ತು ಅನಂತರ ವಿರಾರ್ನ ಬಲೂಚ್ ನಗರದ ಫ್ಲ್ಯಾಟ್ಗೆ ಕರೆದೊಯ್ದು ಹಲ್ಲೆ ನಡೆಸಿ 4 ಲಕ್ಷ ರೂ.ಗಳನ್ನು ಕೋರಿ ಅವರ ಸಹೋದರನಿಗೆ ಕರೆ ಮಾಡಿದರು ಎಂದು ಥಾಣೆ ಪೊಲೀಸ್ನ ವಾಗ್ಲೆ ಎಸ್ಟೇಟ್ ವಿಭಾಗದ ಎಸಿಪಿ ಜಯಂತ್ ಬಜ್ಬಲೆ ಹೇಳಿದ್ದಾರೆ.
ಸುಳಿವುಗಳನ್ನು ಆಧರಿಸಿ ಪೊಲೀಸ್ ತಂಡಗಳು ರವಿವಾರ ತಡರಾತ್ರಿಯಿಂದ ಸೋಮವಾರ ಮುಂಜಾನೆವರೆಗೆ ನಡೆದ ಕಾರ್ಯಾಚರಣೆಯಲ್ಲಿ ಗುಪ್ತಾ ಅವರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿವೆ ಎಂದು ಎಸಿಪಿ ತಿಳಿಸಿದ್ದಾರೆ. ಇಬ್ಬರು ಮಹಿಳೆಯರು ಸೇರಿದಂತೆ ಏಳು ಜನರನ್ನು ಪೊಲೀಸರು ಬಂಧಿಸಿದ್ದಾರೆ ಎಂದವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ