Punjab ಸಿಖ್ ಗುರುದ್ವಾರ ಕಾಯ್ದೆ ತಿದ್ದುಪಡಿಗೆ ಕ್ಯಾಬಿನೆಟ್ ಅನುಮೋದನೆ
ಗೋಲ್ಡನ್ ಟೆಂಪಲ್ನಿಂದ ಗುರ್ಬಾನಿಯ 'ಉಚಿತ ಪ್ರಸಾರ' ಖಚಿತಪಡಿಸಿಕೊಳ್ಳಿ: ಸಿಎಂ ಮಾನ್
Team Udayavani, Jun 19, 2023, 7:55 PM IST
ಅಮೃತಸರ: ಸಿಖ್ಬರ ಪವಿತ್ರ ಸ್ವರ್ಣ ಮಂದಿರದಿಂದ ಗುರ್ಬಾನಿಯ “ಉಚಿತ ಟೆಲಿಕಾಸ್ಟ್ ಹಕ್ಕುಗಳನ್ನು” ಖಚಿತಪಡಿಸಿಕೊಳ್ಳಲು ಸಿಖ್ ಗುರುದ್ವಾರ ಕಾಯಿದೆ, 1925 ಅನ್ನು ತಿದ್ದುಪಡಿ ಮಾಡುವ ಪ್ರಸ್ತಾವನೆಯನ್ನು ಪಂಜಾಬ್ ಕ್ಯಾಬಿನೆಟ್ ಸೋಮವಾರ ಅನುಮೋದಿಸಿದೆ ಎಂದು ಮುಖ್ಯಮಂತ್ರಿ ಭಗವಂತ್ ಮಾನ್ ಹೇಳಿದ್ದಾರೆ.
ಈ ನಿಟ್ಟಿನಲ್ಲಿ ಸರ್ಕಾರವು ರಾಜ್ಯ ವಿಧಾನಸಭೆಯಲ್ಲಿ ತಿದ್ದುಪಡಿ ಮಸೂದೆಯನ್ನು ತರಲಿದೆ ಎಂದು ಮಾನ್ ಹೇಳಿದರು. ಅಧಿಕೃತ ಹೇಳಿಕೆಯ ಪ್ರಕಾರ, ಸಿಖ್ ಗುರುದ್ವಾರ ತಿದ್ದುಪಡಿ ಕಾಯಿದೆ, 2023 ಪವಿತ್ರ ಗುರ್ಬಾನಿಯ ಉಚಿತ ಪ್ರಸಾರದ ಮೇಲೆ ಅನಗತ್ಯ ನಿಯಂತ್ರಣವನ್ನು ತೆಗೆದುಹಾಕಲು ದಾರಿ ಮಾಡಿಕೊಡುತ್ತದೆ ಎಂದು ಹೇಳಿದ್ದಾರೆ.
ಸಿಖ್ ಗುರುದ್ವಾರ ಕಾಯಿದೆ, 1925 ಅನ್ನು ತಿದ್ದುಪಡಿ ಮಾಡಲು ಮತ್ತು ಕಾಯಿದೆಯಲ್ಲಿ ಸೆಕ್ಷನ್ 125 A ಅನ್ನು ಸೇರಿಸಲು ಕ್ಯಾಬಿನೆಟ್ ಅನುಮೋದಿಸಿದೆ ಎಂದು ಮಾನ್ ಹೇಳಿಕೆ ಉಲ್ಲೇಖಿಸಿದೆ.