ರೇಸ್ ಟ್ರ್ಯಾಕ್ ನಲ್ಲೇ ಭೀಕರ ಅಪಘಾತ: ಭಾರತದ ಜನಪ್ರಿಯ ಕಾರು ರೇಸರ್ ಮೃತ್ಯು
Team Udayavani, Jan 8, 2023, 6:33 PM IST
ಚೆನ್ನೈ: ಭಾರತದ ಜನಪ್ರಿಯ ಕಾರು ರೇಸರ್ ಕೆ ಇ ಕುಮಾರ್ (59) ಭೀಕರ ಅಪಘಾತದಲ್ಲಿ ಭಾನುವಾರ (ಜ.8 ರಂದು) ಮೃತಪಟ್ಟಿದ್ದಾರೆ.
ಮದ್ರಾಸ್ ಇಂಟರ್ನ್ಯಾಶನಲ್ ಸರ್ಕ್ಯೂಟ್ನಲ್ಲಿ ಭಾನುವಾರ ಮುಂಜಾನೆ ಭಾರತೀಯ ರಾಷ್ಟ್ರೀಯ ಕಾರ್ ರೇಸಿಂಗ್ ಚಾಂಪಿಯನ್ಶಿಪ್ ನ ಎಂಆರ್ ಎಫ್, ಎಂಎಂಎಸ್ ಸಿ, ಎಫ್ ಎಂಎಸ್ ಸಿಐ ರೇಸಿಂಗ್ ಸ್ಪರ್ಧೆಯ ಎರಡನೇ ಸುತ್ತು ನಡೆಯುತ್ತಿರುವಾಗ ಈ ದುರ್ಘಟನೆ ಸಂಭವಿಸಿದೆ.
ರೇಸ್ ನಲ್ಲಿರುವಾಗ ಕುಮಾರ್ ಅವರ ಕಾರು ಪ್ರತಿಸ್ಪರ್ಧಿಯ ಕಾರಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ ವೇಗದಲ್ಲಿದ್ದ ಕಾರು ಟ್ರ್ಯಾಕ್ ತಪ್ಪಿ ಪಲ್ಟಿಯಾಗಿ, ಬೇಲಿಗೆ ಹೋಗಿ ಗುದ್ದಿದೆ. ತಕ್ಷಣವೇ ರೇಸ್ ನಿಲ್ಲಿಸಿ, ಸಂಪೂರ್ಣ ನಜ್ಜುಗುಜ್ಜಾಗಿದ್ದ ಕಾರಿನಿಂದ ಕುಮಾರ್ ಅವರನ್ನು ಹೊರ ತೆಗೆದು ಕೂಡಲೇ ಆಸ್ಪತ್ರಗೆ ರವಾನಿಸಲಾಗಿತ್ತು. ಆದರೆ ಗಂಭೀರವಾಗಿ ಗಾಯಗೊಂಡ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.
ಫೆಡರೇಶನ್ ಆಫ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಆಫ್ ಇಂಡಿಯಾ ಅಧ್ಯಕ್ಷರಾಗಿರುವ ವಿಕ್ಕಿ ಚಾಂಧೋಕ್ ಈ ಬಗ್ಗೆ ಮಾತಾನಾಡಿಇದು ಅತ್ಯಂತ ದುರದೃಷ್ಟಕರ ಘಟನೆ. ಕುಮಾರ್ ಒಬ್ಬ ಅನುಭವಿ ರೇಸರ್ ಆಗಿದ್ದರು. ನಾನು ಅವರನ್ನು ಹಲವಾರು ದಶಕಗಳಿಂದ ಸ್ನೇಹಿತ ಮತ್ತು ಪ್ರತಿಸ್ಪರ್ಧಿಯಾಗಿ ತಿಳಿದಿದ್ದೇನೆ. ಎಂಎಂಎಸ್ ಸಿ ಮತ್ತು ಇಡೀ ರೇಸಿಂಗ್ ಸಮೂಹ ನಿಧನಕ್ಕೆ ಸಂತಾಪ ವ್ಯಕ್ತಪಡಿಸುತ್ತದೆ ಎಂದಿದ್ದಾರೆ.
ಕೆ ಇ ಕುಮಾರ್ ಮದ್ರಾಸ್ ಇಂಟರ್ನ್ಯಾಷನಲ್ ಸರ್ಕ್ಯೂಟ್ ಶಾಶ್ವತ ಸದಸ್ಯರಾಗಿದ್ದರು.
The crash that led to the death of veteran racer K.E. Kumar at the Madras International Circuit pic.twitter.com/jht1ysdzEv
— Santhosh Kumar (@giffy6ty) January 8, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ