ಉತ್ಕಲ್ ದುರಂತ : ಖಟೋಲಿಯಲ್ಲಿ ರೈಲು ಸೇವೆ ಪುನರ್ ಸ್ಥಾಪನೆ
Team Udayavani, Aug 21, 2017, 4:05 PM IST
ಹೊಸದಿಲ್ಲಿ : ಉತ್ಕಲ್ ರೈಲು ಹಳಿ ತಪ್ಪಿದ ದುರಂದ ಘಟಿಸಿದ ಬೆನ್ನಿಗೇ ಖಟೋಲಿಯಲ್ಲಿ ಅಮಾನತುಗೊಂಡಿದ್ದ ರೈಲು ಸೇವೆ ಇಂದು ಸೋಮವಾರ ಪುನರಾರಂಭಗೊಂಡಿದೆ. ಈ ಮಾರ್ಗದಲ್ಲಿ ಮೊದಲ ರೈಲು ಇಂದು ನಸುಕಿನ 1.21ರ ಹೊತ್ತಿಗೆ ಇಲ್ಲಿಂದ ನಿರ್ಗಮಿಸಿತೆಂದು ಉತ್ತರ ರೈಲ್ವೆ ತಿಳಿಸಿದೆ.
ಉತ್ಕಲ್ ಎಕ್ಸ್ಪ್ರೆಸ್ನ 13 ಬೋಗಿಗಳು ಕಳೆದ ಶನಿವಾರ ಹಳಿ ತಪ್ಪಿ 22 ಪ್ರಯಾಣಿಕರನ್ನು ಬಲಿತೆಗೆದುಕೊಂಡು 156 ಮಂದಿ ಗಾಯಗೊಂಡದ್ದನ್ನು ಅನುಸರಿಸಿ ಮೀರತ್-ಮುಜಫರನಗರ-ಸಹರನ್ಪುರ ರೈಲು ವಿಭಾಗದಲ್ಲಿ ರೈಲು ಸಂಚಾರ ಅಮಾನತುಗೊಂಡಿತ್ತು.
ಉತ್ಕಲ್ ರೈಲು ಹಳಿತಪ್ಪಿದ ದುರಂತಕ್ಕೆ ನಿರ್ಲಕ್ಷ್ಯದಿಂದಾಗಿ ಕಾರಣರಾದವರ ವಿರುದ್ಧದ ಅಭೂತಪೂರ್ವ ಶಿಸ್ತುಕ್ರಮದ ಭಾಗವಾಗಿ ರೈಲ್ವೇ ಇಲಾಖೆಯು ನಿನ್ನೆ ಮೂವರು ಉನ್ನತ ಅಧಿಕಾರಿಗಳನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಿತ್ತು.
ಇವರಲ್ಲಿ ರೈಲ್ವೇ ಮಂಡಳಿಯ ಕಾರ್ಯದರ್ಶಿ ಮಟ್ಟದ ಓರ್ವ ಸದಸ್ಯರೂ ಸೇರಿದ್ದರು. ಮಾತ್ರವಲ್ಲದೆ ನಾಲ್ವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿ ಒಬ್ಬ ಟ್ರ್ಯಾಕ್ ಇಂಜಿನಿಯರ್ನನ್ನು ವರ್ಗಾಯಿಸಲಾಗಿತ್ತು.
ಅಮಾನತು ಮಾಡಲ್ಪಟ್ಟಿದ್ದ ನಾಲ್ಕು ಅಧಿಕಾರಿಗಳಲ್ಲಿ ಒಬ್ಬರು ಹಿರಿಯ ವಿಭಾಗೀಯ ಇಂಜಿನಿಯರ್, ಒಬ್ಬರು ಸಹಾಯಕ ಇಂಜಿನಿಯರ್, ಒಬ್ಬರು ಹಿರಿಯ ಸೆಕ್ಷನ್ ಇಂಜಿನಿಯರ್ (ಇವರೆಲ್ಲರೂ ಹಳಿ ನಿರ್ವಹಣೆ ಜವಾಬ್ದಾರಿ ಹೊಂದಿದವರು) ಮತ್ತು ಒಬ್ಬ ಜೂನಿಯರ್ ಇಂಜಿನಿಯರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ