ಅಸ್ತಾನಾ ಈಗ ವಾಯುಯಾನ ಭದ್ರತಾ ದಳದ ಮಹಾ ನಿರ್ದೇಶಕ
Team Udayavani, Jan 18, 2019, 1:20 PM IST
ಹೊಸದಿಲ್ಲಿ : ಭ್ರಷ್ಟಾಚಾರ ಕಳಂಕಿತ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನಾ ಅವರ ಹುದ್ದೆಯ ಅವಧಿಯನ್ನು ಕೇಂದ್ರ ಸರಕಾರ ಮೊಟಕು ಗೊಳಿಸಿದ ಒಂದು ದಿನದ ತರುವಾಯ, ಅಸ್ತಾನಾ ಅವರನ್ನು ನಾಗರಿಕ ವಾಯು ಯಾನ ಭದ್ರತಾ ದಳದ (BCAS) ಹೊಸ ಮಹಾ ನಿರ್ದೇಶಕರನ್ನಾಗಿ ನೇಮಿಸಲಾಗಿದೆ.
ರಾಕೇಶ್ ಅಸ್ತಾನಾ ಅವರು ಪದಚ್ಯುತ ಸಿಬಿಐ ಮುಖ್ಯಸ್ಥ ಆಲೋಕ್ ವರ್ಮಾ ಅವರೊಂದಿಗೆ ತೀವ್ರವಾದ ಜಟಾಪಟಿ ನಡೆಸಿದ್ದರು.
ನಾಗರಿಕ ವಾಯು ಯಾನ ಧ್ರತಾ ದಳದ ನಿರ್ದೇಶಕರ ಹುದ್ದೆಯನ್ನು ಮೇಲ್ದರ್ಜೆಗೇರಿಸಿ ಮಹಾ ನಿದೇಶಕರ ಹುದ್ದೆ ರಚಿಸಲಾಗಿದ್ದು ಅಸ್ತಾನಾ ಅವರಿಗೆ ಈಗ ಹೊಸ ಹುದ್ದೆ ನೀಡಲಾಗಿದೆ ಎಂದು ಸಂಪುಟ ನೇಮಕಾತಿ ಸಮಿತಿ ಹೇಳಿದೆ.