“ಹನುಮ ಹುಟ್ಟಿದ್ದು ಗೋವಾದಲ್ಲಿ: ಶ್ರೀನಿವಾಸ್ ಖಲಾಪ್
Team Udayavani, Jun 3, 2022, 10:15 PM IST
ಪಣಜಿ: ಹನುಮನ ಜನ್ಮಸ್ಥಳದ ಬಗ್ಗೆ ಮಹಾರಾಷ್ಟ್ರ ಮತ್ತು ಕರ್ನಾಟಕದ ನಡುವೆ ಜಗಳ ನಡೆಯುತ್ತಿರುವಾಗಲೇ ಗೋವಾದ ಸಂಶೋಧಕರೊಬ್ಬರು ಹನುಮ ಗೋವಾದಲ್ಲೇ ಹುಟ್ಟಿದ್ದು ಎಂದಿದ್ದಾರೆ.
ಗೋವಾದ ಮಾಜಿ ಉಪಮುಖ್ಯಮಂತ್ರಿ ರಮಾಕಾಂತ್ ಖಲಾಪ್ ಅವರ ಪುತ್ರ ಹಾಗೂ ಇತಿಹಾಸ ಸಂಶೋಧಕರಾಗಿರುವ ಶ್ರೀನಿವಾಸ್ ಖಲಾಪ್ ಅವರು ಇಂತದ್ದೊಂದು ಹೇಳಿಕೆ ಕೊಟ್ಟಿದ್ದಾರೆ.
ಹನುಮ ಗೋವಾದಲ್ಲಿಯೇ ಜನಿಸಿದ್ದು ಎಂದು ವಾಲ್ಮೀಕಿ ರಾಮಾಯಣದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಅಲ್ಲಿ ಹೇಳಿರುವ ಪ್ರಕಾರ ಹನುಮನ ತಾಯಿ ಅಂಜನಿ ದ್ವೀಪವೊಂದರ ಕಡಲ ತೀರದಲ್ಲಿ ತಪಸ್ಸು ಮಾಡಿ ಹನುಮನನ್ನು ಮಗನಾಗಿ ಪಡೆದಿದ್ದು. ಆ ದ್ವೀಪಕ್ಕೇ ಅಂಜನಿ ದ್ವೀಪ ಎಂದು ಕರೆಯಲಾಗಿತ್ತು.
ಇದೀಗ ಅದಕ್ಕೆ ಆಂಜೆದಿವ ದ್ವೀಪ ಎನ್ನುವ ಹೆಸರಿದೆ. ಈ ದ್ವೀಪ ಕಾರವಾರಕ್ಕೆ ಹತ್ತಿರವಿದೆಯಾದರೂ ಭೌಗೋಳಿಕವಾಗಿ ಇದು ಗೋವಾಕ್ಕೆ ಸೇರಿದ್ದಾಗಿದೆ’ ಎಂದು ಅವರು ಹೇಳಿದ್ದಾರೆ.