ರಾಲಿ ವಿರುದ್ಧ ಶ್ರೀನಗರ, ಶೋಪಿಯಾನ್ನಲ್ಲಿ ನಿರ್ಬಂಧ ಹೇರಿಕೆ
Team Udayavani, Feb 2, 2018, 12:37 PM IST
ಶ್ರೀನಗರ : ಸೇನೆಯಿಂದ ಈಚೆಗೆ ನಡೆಯಿತೆನ್ನಲಾದ ಫೈರಿಂಗ್ನಲ್ಲಿ ಪೌರರು ಮಡಿದಿರುವುದನ್ನು ಪ್ರತಿಭಟಿಸಲು ಮೆರವಣಿಗೆ ಮತ್ತು ಸಭೆಯನ್ನು ಪ್ರತ್ಯೇಕತಾವಾದಿಗಳು ನಡೆಸದಂತೆ ಅಧಿಕಾರಿಗಳಿಂದು ಶ್ರೀನಗರ ಮತ್ತು ಶೋಪಿಯಾನ್ ಜಿಲ್ಲೆಗಳ ಕೆಲವು ಭಾಗಗಳಲ್ಲಿ ನಿರ್ಬಂಧಗಳನ್ನು ಹೇರಿದರು.
ಕಳೆದ ಜನವರಿ 27ರಂದು ತಮ್ಮ ಮೇಲೆ ಕಲ್ಲೆಸೆದವರ ಮೇಲೆ ಆತ್ಮರಕ್ಷಣೆಗಾಗಿ ಸೇನೆ ನಡೆಸಿದ್ದ ಫೈರಿಂಗ್ಗೆ ಮೂವರು ಪೌರರು ಬಲಿಯಾಗಿದ್ದರು.
ಇದನ್ನು ಪ್ರತಿಭಟಿಸಿ ಪ್ರತ್ಯೇಕತಾವಾದಿ ನಾಯಕರುಗಳಾದ ಸೈಯದ್ಯ ಅಲಿ ಶಾ ಗೀಲಾನಿ, ಮೀರ್ ವೇಜ್ ಉಮರ್ ಫಾರಕೂಕ್ ಮತ್ತು ಮೊಹಮ್ಮದ್ ಯಾಸಿನ್ ಮಲಿಕ್ ಅವರು ಜಂಟಿ ಪ್ರತಿರೋಧ ನಾಯಕತ್ವದ ಬ್ಯಾನರ್ನಡಿ ಶೋಪಿಯಾನ್ ಜಿಲ್ಲೆಗೆ ಇಂದು ಶುಕ್ರವಾರ ಪ್ರತಿಭಟನಾ ಮೆರವಣಿಗೆಯನ್ನು ಒಯ್ಯಲು ನಿರ್ಧರಿಸಿದ್ದಾರೆ.