ಎದ್ದೇಳಿ ವಿದ್ಯಾರ್ಥಿಗಳೇ,ನಿಮ್ಮ ಭವಿಷ್ಯ ಅಪಾಯದಲ್ಲಿದೆ: ರಾಹುಲ್
Team Udayavani, May 22, 2018, 2:54 PM IST
ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಮತ್ತು ಆರ್ಎಸ್ಎಸ್ ವಿರುದ್ಧ ಟ್ವೀಟರ್ನಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಟೀಕೆ ಮುಂದುವರಿಸಿದ್ದು, ಪತ್ರವೊಂದನ್ನು ಲಗತ್ತಿಸಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ವಿದ್ಯಾರ್ಥಿಗಳಿಗೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.
ಕೇಂದ್ರದ ಎನ್ಡಿಎ ಸರ್ಕಾರ ಕೇಂದ್ರ ನಾಗರಿಕ ಸೇವೆಗಳಲ್ಲಿ ಬಲಪಂಥೀಯ ಧೋರಣೆ ಉಳ್ಳ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲು ಯೋಜನೆ ರೂಪಿಸಿದ್ದು, ಈ ಪತ್ರ ಇದನ್ನು ಬಹಿರಂಗ ಪಡಿಸುತ್ತದೆ ಎಂದು ಬರೆದಿದ್ದಾರೆ.
ಟ್ವೀಟ್ನಲ್ಲಿ ”ಎದ್ದೇಳಿ ವಿದ್ಯಾರ್ಥಿಗಳೇ, ನಿಮ್ಮ ಭವಿಷ್ಯ ಅಪಾಯದಲ್ಲಿದೆ.ಯಾವುದು ನಿಮ್ಮದಾಗಬೇಕೋ ಅದನ್ನು ಆರ್ಎಸ್ಎಸ್ ಪಡೆಯಲು ಯತ್ನಿಸುತ್ತಿದೆ. ಈ ಪತ್ರ ಕೇಂದ್ರ ನಾಗರಿಕ ಸೇವೆಗಳಲ್ಲಿ ಪರೀಕ್ಷಾ ಶ್ರೇಯಾಂಕ, ಅರ್ಹತೆಯ ಪಟ್ಟಿ, ನಿರ್ವಹಣೆಯ ಬದಲಾಗಿ ವ್ಯಕ್ತಿನಿಷ್ಠ ಮಾನದಂಡವನ್ನು ಬಳಸಿಕೊಂಡು
ಆರ್ಎಸ್ಎಸ್ ಆಯ್ಕೆ ಮಾಡಿದವರನ್ನು ಬಳಸಿಕೊಳ್ಳುವ ಪ್ರಧಾನಿಗಳ ಯೋಜನೆಯನ್ನು ಸ್ಪಷ್ಟಪಡಿಸುತ್ತದೆ”ಎಂದು ಬರೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ
Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ
Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ
Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ
Manipal ಹಾಸ್ಪಿಟಲ್ಸ್ ಪಾಲಾದ ಮೆಡಿಕಾ ಸಿನರ್ಜಿ