ಅಸ್ಸಾಂ ಎನ್ಆರ್ಸಿ ಪ್ರಕಟನೆ: ರಾಜ್ಯಸಭೆಯಲ್ಲಿ ಗದ್ದಲ, ಮುಂದೂಡಿಕೆ
Team Udayavani, Jul 30, 2018, 12:07 PM IST
ಹೊಸದಿಲ್ಲಿ : ಅಸ್ಸಾಂ ಪ್ರಜೆಗಳ ರಾಷ್ಟ್ರೀಯ ದಾಖಲೆ (ಎನ್ಆರ್ಸಿ) ಪ್ರಕಟನೆಯನ್ನು ಪ್ರತಿಭಟಿಸಿ ಟಿಎಂಸಿ ಮತ್ತು ಸಮಾಜವಾದಿ ಪಕ್ಷದ ನೇತೃತ್ವದಲ್ಲಿ ವಿರೋಧ ಪಕ್ಷಗಳು ಇಂದು ರಾಜ್ಯಸಭೆಯಲ್ಲಿ ಭಾರೀ ಗದ್ದಲ ಎಬ್ಬಿಸಿದ ಕಾರಣ ಸದನದ ಕಲಾಪವನ್ನು ಮಧ್ಯಾಹ್ನದ ವರೆಗೆ ಮುಂಡೂಲಾಯಿತು.
ಇಂದು ಸೋಮವಾರ ಬೆಳಗ್ಗೆ ರಾಜ್ಯಸಭಾ ಕಲಾಪ ಆರಂಭವಾದಾಗ ಸದನದ ಮಾಜಿ ಸದಸ್ಯರೊಬ್ಬರ ನಿಧನಕ್ಕೆ ಶೋಕ ಪ್ರಕಟಿಸಲಾಯಿತು. ಅನಂತರ ದಿನದ ಕಲಾಪದ ಪಟ್ಟಿಯನ್ನು ಮಂಡಿಸಲಾಯಿತು. ಆಗಲೇ ತಮ್ಮ ನಾಯಕ ಡೆರೆಕ್ ಓ ಬ್ರಿನ್ ನೇತೃತ್ವದಲ್ಲಿ ಎನ್ಆರ್ಸಿ ವಿಷಯವನ್ನು ಎತ್ತಿ ಪ್ರತಿಭಟಿಸಲು ಟಿಎಂಸಿ ಸದಸ್ಯರು ತುದಿಕಾಲಲಲ್ಲಿ ನಿಂತಿದ್ದರು.
ಆಗ ಎಸ್ಪಿ ಸದಸ್ಯರು ಮತ್ತು ಕೆಲ ಕಾಂಗ್ರೆಸ್ ಸದಸ್ಯರು ಘೋಷಣೆ ಕೂಗಲು ತೊಡಗಿದರು. ಪರಿಣಾಮವಾಗಿ ಸದನದಲ್ಲಿ ಭಾರೀ ಗುಲ್ಲು ತುಂಬಿಕೊಂಡಿತು.
ಎನ್ಆರ್ಸಿ ವಿಷಯವನ್ನು ಎತ್ತುವ ಬಗ್ಗೆ ತನಗೆ ನೊಟೀಸ್ ಸಿಕ್ಕಿಲ್ಲ ಎಂದು ಆಗ ಹೇಳಿದ ಅಧ್ಯಕ್ಷ ಎಂ ವೆಂಕಯ್ಯ ನಾಯ್ಡು ಅವರು “ಕೆಲವು ಸದಸ್ಯರು ನನ್ನನ್ನು ಬೆಳಗ್ಗೆ ಭೇಟಿಯಾಗಿ ಎನ್ಆರ್ಸಿ ವಿಷಯ ಎತ್ತಲು ತಾವು ಬಯಸಿರುವುದಾಗಿ ಹೇಳಿದ್ದರು’ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ