Sabarimala; ಕೇರಳ ಸರಕಾರದ ಅಸಹಕಾರದಿಂದ ರೈಲ್ವೇ ಯೋಜನೆ ಕುಂಠಿತ
Team Udayavani, Feb 8, 2024, 12:18 AM IST
ಹೊಸದಿಲ್ಲಿ: ಶಬರಿಮಲೆ ರೈಲ್ವೇ ಯೋಜನೆಯು ರಾಜ್ಯ ಸರಕಾರದ ಅಸಹಕಾರದಿಂದಾಗಿ ಹಲವು ವರ್ಷಗಳ ಪ್ರಯತ್ನಗಳ ಅನಂತರವೂ ಪ್ರಗತಿ ಸಾಧಿ ಸಿಲ್ಲ. ಈ ಯೋಜನೆಗಾಗಿ 2 ಪರ್ಯಾಯ ಮಾರ್ಗಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ವಿಖ್ಯಾತ ಶಬರಿಮಲೆ ದೇಗುಲಕ್ಕೆ ಯಾತ್ರಾರ್ಥಿಗಳಿಗೆ ಸಂಪರ್ಕ ಕಲ್ಪಿಸುವ ಗುರಿಯನ್ನು ಈ ಶಬರಿ ರೈಲು ಯೋಜನೆ ಹೊಂದಿದೆ. ಲೋಕಸಭೆಯ ಪ್ರಶ್ನಾವಧಿಯಲ್ಲಿ ಉತ್ತರಿಸಿದ ಅವರು, “ಭೂಸ್ವಾಧೀನ ಮತ್ತು ಹೊಂದಾಣಿಕೆಯ ಅನುದಾನ ನೀಡುವ ವಿಚಾರದಲ್ಲಿ ಕೇರಳ ಸರಕಾರದ ಅಸಹಕಾರದಿಂದಾಗಿ ಈ ಯೋಜನೆ ನಿಗದಿತ ಪ್ರಗತಿ ಕಂಡಿಲ್ಲ. ಹೀಗಾಗಿ ಪರ್ಯಾ ಯ ಮಾರ್ಗಗಳನ್ನು ನಾವು ಪರಿಶೀಲಿಸುತ್ತಿದ್ದೇವೆ’ ಎಂದು ತಿಳಿಸಿದ್ದಾರೆ.