Sandeshkhali ಪ್ರಕರಣ ಶೇ.1 ನಿಜ ಆದ್ರೂ ಅದು ನಾಚಿಕೆಗೇಡು: ಹೈಕೋರ್ಟ್
Team Udayavani, Apr 5, 2024, 1:31 AM IST
ಕೋಲ್ಕತಾ: ಸಂದೇಶ್ಖಾಲಿ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಕಲ್ಕತ್ತಾ ಹೈಕೋರ್ಟ್ ಗುರು ವಾರ ಪಶ್ಚಿಮ ಬಂಗಾಲದ ಟಿಎಂಸಿ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಈ ಪ್ರಕರಣ ಸಂಬಂಧ ಅಫಿದವಿತ್ಗಳ ವಿಚಾರಣೆ ವೇಳೆ ಸರಕಾರದ ವಿರುದ್ಧ ಆಕ್ರೋಶ ಹೊರಹಾಕಿದ ಮುಖ್ಯ ನ್ಯಾ| ಟಿ.ಎಸ್.ಶಿವಜ್ಞಾನಂ, “ಈ ಅಫಿದವಿತ್ಗಳ ಪೈಕಿ 1 ಸತ್ಯ ವಾದರೂ, ಆರೋಪಗಳ ಪೈಕಿ ಶೇ.1ರಷ್ಟು ಸತ್ಯವಾದರೂ, ಅದು ನಾಚಿಕೆಗೇಡಿನ ವಿಚಾರ. ಪಶ್ಚಿಮ ಬಂಗಾಲವು ಮಹಿಳೆಯರಿಗೆ ಸುರಕ್ಷಿತ ವಾಗಿದೆ ಎಂದು ನೀವು ಹೇಳುತ್ತೀರಲ್ಲ? ಇಲ್ಲಿ ಕೇಳಿಬಂದಿರುವ ಆರೋಪಗಳಲ್ಲಿ ಒಂದು ನಿಜವಾದರೂ ನಿಮ್ಮ ಈ ಘೋಷಣೆಗಳೆಲ್ಲ ಸುಳ್ಳೆಂದು ಸಾಬೀತಾಗುತ್ತವೆ’ ಎಂದರು. ಇದೇ ವೇಳೆ ಆರೋಪಿ ಶೇಖ್ ಶಹಜಹಾನ್ಗೂ ಹೈಕೋರ್ಟ್ ಚಾಟಿ ಬೀಸಿತು.