553 ಪಾಯಿಂಟ್ ಏರಿದ ಷೇರು ಮಾರುಕಟ್ಟೆ
Team Udayavani, Jun 4, 2019, 6:00 AM IST
ಮುಂಬಯಿ: ಆರ್ಬಿಐ ಬಡ್ಡಿ ದರ ಕಡಿತಗೊಳಿಸುವ ನಿರೀಕ್ಷೆ ಹಾಗೂ ಹೊಸ ಸರಕಾರ ನೂತನ ಸುಧಾರಣಾ ಕ್ರಮಗಳನ್ನು ಕೈಗೊಳ್ಳುವ ನಿರೀಕ್ಷೆಯಿಂದ ಮುಂಬಯಿ ಷೇರು ಮಾರುಕಟ್ಟೆ ಚೇತರಿಸಿಕೊಂಡಿದೆ. ಸೋಮವಾರ ಬಿಎಸ್ಇ ಸೆನ್ಸೆಕ್ಸ್ 553 ಪಾಯಿಂಟ್ ಏರಿಕೆ ಕಂಡು 40,267.52ಕ್ಕೆ ತಲುಪಿದೆ. ಇನ್ನೊಂದೆಡೆ ನಿಫ್ಟಿ 12,088.55ಕ್ಕೆ ತಲುಪಿದ್ದು, 166 ಪಾಯಿಂಟ್ ಏರಿಕೆ ಕಂಡಿದೆ. ಎರಡೂ ಸೂಚ್ಯಂಕಗಳು ದಿನದ ವಹಿವಾಟಿನಲ್ಲಿ 40,308 ಹಾಗೂ 12,103 ವರೆಗೆ ತಲುಪಿತ್ತು.
ವಿಶ್ವದ ಇತರ ಮಾರುಕಟ್ಟೆಗಳು ಕುಸಿತ ಕಾಣುತ್ತಿದ್ದರೂ ಭಾರತದ ಮಾರುಕಟ್ಟೆ ಏರುಗತಿಯಲ್ಲಿ ಸಾಗಿದೆ. ಕಚ್ಚಾ ತೈಲ ಬೆಲೆ ಇಳಿಕೆ, ವಿದೇಶಿ ಹಣಕಾಸು ಒಳಹರಿವು ಹೆಚ್ಚಿರುವುದು ಕೂಡ ಇದಕ್ಕೆ ಕಾರಣ. ಎಲ್ಲಕ್ಕಿಂತ ಮುಖ್ಯವಾಗಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದ ಅನಂತರ ಇನ್ನಷ್ಟು ಆರ್ಥಿಕ ಸುಧಾರಣೆ ಕ್ರಮಗಳನ್ನು ಕೈಗೊಳ್ಳುವ ನಿರೀಕ್ಷೆ ಮಾರುಕಟ್ಟೆಯಲ್ಲಿ ಮೂಡಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಎಚ್ಡಿಎಫ್ಸಿ, ರಿಲಯನ್ಸ್ ಹಾಗೂ ಟಿಸಿಎಸ್ ಷೇರುಗಳ ಭಾರಿ ಏರಿಕೆಯಿಂದಾಗಿ ಇಡೀ ಮಾರುಕಟ್ಟೆ ಚೇತರಿಕೆ ಕಂಡಿದೆ. ಹೀರೋ ಮೋಟೋಕಾರ್ಪ್ ಶೇ. 6.01ರಷ್ಟು ಏರಿದೆ.
ಇನ್ನೊಂದೆಡೆ ರೂಪಾಯಿ ಮೌಲ್ಯವೂ ಚೇತರಿಕೆ ಕಂಡಿದ್ದು, ಅಮೆರಿಕದ ಡಾಲರ್ ವಿರುದ್ಧ 69.26ಕ್ಕೆ ತಲುಪಿದೆ. ಸೋಮ ವಾರ 44 ಪೈಸೆ ಕುಸಿತವನ್ನು ರೂಪಾಯಿ ದಾಖಲಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
MUST WATCH
ಹೊಸ ಸೇರ್ಪಡೆ
ಸಂಸದ ಶ್ರೀನಿವಾಸ್ ಪ್ರಸಾದ್ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್