ಹಿಂದೂ ಮಹಾಸಾಗರದಲ್ಲಿ ಸಿಲುಕಿದ್ದ ಯೋಧನ ರಕ್ಷಣೆ
Team Udayavani, Sep 25, 2018, 9:50 AM IST
ಹೊಸದಿಲ್ಲಿ: ನೌಕೆಯ ಮೂಲಕ ವಿಶ್ವಪರ್ಯಟನೆ ಮಾಡುವ ಗೋಲ್ಡನ್ ಗ್ಲೋಬ್ ಸ್ಪರ್ಧೆಯಲ್ಲಿ ಭಾಗವಹಿಸಿ, ಹಿಂದೂ ಮಹಾಸಾಗರದಲ್ಲಿ ಚಂಡಮಾರುತಕ್ಕೆ ಸಿಲುಕಿದ್ದ ಭಾರತೀಯ ನೌಕಾಪಡೆಯ ಯೋಧ ಅಭಿಲಾಷ್ ಟಾಮಿಯನ್ನು 3 ದಿನಗಳ ಬಳಿಕ ಸೋಮವಾರ ರಕ್ಷಣೆ ಮಾಡಲಾಗಿದೆ. ಚಂಡಮಾರುತದ ಹೊಡೆತದಿಂದ ಅಭಿಲಾಷ್ ಬೆನ್ನಿಗೆ ಗಾಯವಾಗಿದ್ದು, ಈಗ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಆಸ್ಟ್ರೇಲಿಯಾದ ಪರ್ತ್ನಿಂದ 1900 ನಾಟಿಕಲ್ ಮೈಲು ದೂರದಲ್ಲಿ ಶುಕ್ರವಾರ ಇವರು ಸಿಲುಕಿದ್ದರು. ದೇಶೀಯವಾಗಿ ನಿರ್ಮಿಸಲಾದ ಥೊರಿಯಾ ನೌಕೆ ಕೂಡ ಹಾನಿಗೊಳಗಾಗಿದೆ. ಫ್ರಾನ್ಸ್ನ ಒಸಿರಿಸ್ ಮೀನುಗಾರಿಕೆ ಹಡಗು ಬಳಸಿ ಅಭಿಲಾಷ್ ರಕ್ಷಣೆ ಮಾಡಲಾಗಿದೆ. ಕೀರ್ತಿ ಚಕ್ರ ಪುರಸ್ಕಾರವನ್ನೂ ಪಡೆದಿರುವ ಇವರು, ಎರಡನೇ ಬಾರಿಗೆ ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದರು. ಚಂಡಮಾರುತದ ಹೊಡೆತಕ್ಕೆ ಸಿಲುಕುವಾಗ ಇವರು ಸ್ಪರ್ಧೆಯಲ್ಲಿ ಮೂರನೇ ಸ್ಥಾನದಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ
Andhra Pradesh; ಸಿಎಂ ಜಗನ್ ಪಕ್ಷಕ್ಕೆ ರೈತರು,ಟೆೃಲರ್, ಗೃಹಿಣಿಯರೇ ಸ್ಟಾರ್ ಪ್ರಚಾರಕರು!
Loksabha; ಮುಸ್ಲಿಮರಿಗೆ ಅಷ್ಟೇ ಅಲ್ಲ, ನನಗೂ 5 ಮಕ್ಕಳಿದ್ದಾರೆ: ಮೋದಿಗೆ ಖರ್ಗೆ ಟಕ್ಕರ್
ಉಗ್ರರಿದ್ದಲ್ಲೇ ನುಗ್ಗಿ ವಿನಾಶ; ಇದು ನವಭಾರತದ ಹೆಗ್ಗಳಿಕೆ: ಪ್ರಧಾನಿ ಮೋದಿ
Lok Sabha; ರಾಯ್ಬರೇಲಿ, ಅಮೇಠಿ ಕಾಂಗ್ರೆಸ್ ಅಭ್ಯರ್ಥಿಗಳ ಬಗ್ಗೆ ಇನ್ನೂ ಸಸ್ಪೆನ್ಸ್!