ಸುಖೋಯ್ ಫೈಟರ್ ಜೆಟ್ ಪೈಲಟ್ನ ರಕ್ತಸಿಕ್ತ ಬೂಟು, ಪರ್ಸ್ ಪತ್ತೆ
Team Udayavani, May 30, 2017, 11:38 AM IST
ಗುವಾಹಟಿ : ಕಳೆದ ವಾರ ಅಸ್ಸಾಂ-ಅರುಣಾಚಲ ಪ್ರದೇಶ ಗಡಿಗೆ ಸಮೀಪದಲ್ಲಿ ಪತನಗೊಂಡಿದ್ದ ಭಾರತೀಯ ವಾಯು ಪಡೆಯ ಸುಖೋಯ್ 30 ಯುದ್ಧ ವಿಮಾನದ ನಾಪತ್ತೆಯಾಗಿರುವ ಇಬ್ಬರು ಪೈಲಟ್ಗಳಲ್ಲಿ ಒಬ್ಟಾತನ ರಕ್ತಸಿಕ್ತ ಬೂಟು, ಅರೆಸುಟ್ಟ ಪಾನ್ ಕಾರ್ಡ್ ಮತ್ತು ಹಣದ ಪರ್ಸ್ ಪತ್ತೆಯಾಗಿರುವುದಾಗಿ ವರದಿಯಾಗಿದೆ.
ಹಾಗಿದ್ದರೂ ಈ ನತದೃಷ್ಟ ಯುದ್ಧ ವಿಮಾನದ ಕಾಣೆಯಾಗಿರುವ ಇಬ್ಬರು ಪೈಲಟ್ಗಳ ಗತಿ ಏನಾಗಿದೆ ಎಂಬುದು ಈ ತನಕವೂ ಗೊತ್ತಾಗಿಲ್ಲ; ಮಾತ್ರವಲ್ಲ ಅವರ ಶವಗಳು ಕೂಡ ಪತ್ತೆಯಾಗಿಲ್ಲ.
ಶೋಧ ಹಾಗೂ ರಕ್ಷಣಾ ತಂಡಕ್ಕೆ ಕಳೆದ ಮೇ 28ರಂದು ಯುದ್ಧ ವಿಮಾನದ ಬ್ಲಾಕ್ ಬಾಕ್ಸ್ ಸಿಕ್ಕಿತ್ತು. ವಿಮಾನ ಪತನಗೊಂಡಿದ್ದ ದಟ್ಟಾರಣ್ಯದಲ್ಲಿ ಪೈಲಟ್ಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದ ತಂಡಕ್ಕೆ ಈ ಅತ್ಯಮೂಲ್ಯ ಬ್ಲಾಕ್ ಬಾಕ್ಸ್ ಸಿಕ್ಕಿತ್ತಾದರೂ ಪೈಲಟ್ಗಳ ಶವ ಎಲ್ಲೂ ಕಂಡು ಬರಲಿಲ್ಲ.
“ಪ್ರತಿಕೂಲ ಹವಾಮಾನ ಇರುವ ಹೊರತಾಗಿಯೂ ಶೋಧ ಕಾರ್ಯಾಚರಣೆ ಈಗಲೂ ನಡೆಯುತ್ತಿದೆ; ಆದರೂ ಕಾಣೆಯಾಗಿರುವ ಇಬ್ಬರು ಪೈಲಟ್ಗಳ ಬಗ್ಗೆ ಮಾತ್ರ ಯಾವುದೇ ಮಾಹಿತಿ, ಕುರುಹು ಲಭಿಸಿಲ್ಲ’ ಎಂದು ಭಾರತೀಯ ಸೇನಾ ಮೂಲಗಳು ಹೇಳಿವೆ.
ಮೇ 23ರಂದು ನಿಗೂಢವಾಗಿ ನಾಪತ್ತೆಯಾಗಿದ್ದ ಸುಖೋಯ್ ಜೆಟ್ ವಿಮಾನದ ಅವಶೇಷಗಳು ತೇಜ್ಪುರ ನಗರದಿಂದ ಸುಮಾರು 60 ಕಿ.ಮೀ. ದೂರದ ದಟ್ಟಾರಣ್ಯದಲ್ಲಿ ಮೇ 26ರಂದು ಪತ್ತೆಯಾಗಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್