Supreme Court ವಕೀಲೆ ಹತ್ಯೆ; ಮನೆ ಮಾರಲು ಒಪ್ಪದಿದ್ದಕ್ಕೆ ಪತಿಯಿಂದಲೇ ಭೀಕರ ಕೃತ್ಯ
ಕೊಲೆ ಮಾಡಿ ಉಗ್ರಾಣದಲ್ಲಿ 36 ಗಂಟೆಗಳ ಕಾಲ ಬಚ್ಚಿಟ್ಟುಕೊಂಡಿದ್ದ ಪತಿ
Team Udayavani, Sep 11, 2023, 11:01 PM IST
ನೋಯ್ಡಾ: ಸರ್ವೋಚ್ಚ ನ್ಯಾಯಾಲಯದ 61 ವರ್ಷದ ವಕೀಲೆಯನ್ನು ಸ್ವತಃ ಅವರ ಪತಿಯೇ ಹತ್ಯೆ ಮಾಡಿದ್ದಾರೆ. 4 ಕೋಟಿ ರೂ.ಗೆ ದುಬಾರಿ ಮನೆಯನ್ನು ಮಾರಲು ಹೊರಟಿದ್ದಕ್ಕೆ, ಪತ್ನಿ ಒಪ್ಪಿಲ್ಲವೆನ್ನುವುದೇ ಕೊಲೆಗೆ ಕಾರಣ. ಘಟನೆಯ ನಂತರ 36 ಗಂಟೆಗಳ ಕಾಲ ತಮ್ಮ ಮನೆಯ ಉಗ್ರಾಣದಲ್ಲಿ ಆರೋಪಿ ಅಜಯ್ ನಾಥ್(62) ಬಚ್ಚಿಟ್ಟುಕೊಂಡಿದ್ದಾರೆ! ಆರೋಪಿ ಅಜಯ್ ಅವರು ಭಾರತೀಯ ಕಂದಾಯ ಸೇವೆಗಳ ನಿವೃತ್ತ ಅಧಿಕಾರಿಯಾಗಿದ್ದಾರೆ.
ಪೊಲೀಸರು ಆರೋಪಿಯ ಮೊಬೈಲನ್ನು ಟ್ರ್ಯಾಕ್ ಮಾಡಿದಾಗ ಉಗ್ರಾಣದಲ್ಲಿ ಸಿಕ್ಕಿಬಿದ್ದಿದ್ದಾರೆ. ಘಟನೆ ಉತ್ತರಪ್ರದೇಶದ ನೋಯ್ಡಾದ ಐಷಾರಾಮಿ ಪ್ರದೇಶದಲ್ಲಿ ಸಂಭವಿಸಿದೆ.
ವಕೀಲೆ, ಸಹೋದರಿ ರೇಣು ಸಿನ್ಹಾ ತಮ್ಮ ಕರೆಗೆ 2 ದಿನಗಳಿಂದ ಉತ್ತರಿಸುತ್ತಿಲ್ಲ ಎಂದು ಅವರ ಸಹೋದರ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಶೋಧ ನಡೆಸಿದಾಗ ದುಬಾರಿ ಮನೆಯ ಸ್ನಾನದ ಕೋಣೆಯಲ್ಲಿ ರೇಣು ಸಿನ್ಹಾ ಶವ ಸಿಕ್ಕಿದೆ. ಕೊಲೆ ಭಾನುವಾರವೇ ಸಂಭವಿಸಿದೆ ಎಂದು ವರದಿಗಳು ಹೇಳಿವೆ.
ಕೊಲೆಗೆ ತಮ್ಮ ಭಾವನವರೇ ಕಾರಣವಿರುವ ಸಾಧ್ಯತೆಯಿದೆ, ಅವರೂ ಮೊಬೈಲ್ ಕರೆಗೆ ಸಿಗುತ್ತಿಲ್ಲ ಎಂದು ರೇಣು ಸಹೋದರ ಹೇಳಿದ್ದಾರೆ. ಇದಾದ ಮೇಲೆ ರೇಣು ಪತಿ ಅಜಯ್ ನಾಥ್ರನ್ನು ಹುಡುಕಲಾಗಿದೆ. ಅಜಯ್ ಮನೆಯನ್ನು ಹೊರಗಿನಿಂದ ಲಾಕ್ ಮಾಡಿ, ಟೆರೇಸ್ನಲ್ಲಿರುವ ಉಗ್ರಾಣದಲ್ಲಿ ಸತತ 36 ಗಂಟೆಗಳಿಂದ ಅವಿತುಕೊಂಡಿದ್ದು ಗೊತ್ತಾಗಿದೆ.
ಇತ್ತೀಚೆಗಷ್ಟೇ ರೇಣು ಕ್ಯಾನ್ಸರ್ನಿಂದ ಚೇತರಿಸಿಕೊಂಡಿದ್ದರು. ಅವರು ವಾಸಿಸುತ್ತಿದ್ದ ಬಂಗಲೆಯನ್ನು ಮಾರಲು ಅಜಯ್ ನಿರ್ಧರಿಸಿ, ಮುಂಗಡ ಹಣವನ್ನೂ ಪಡೆದಿದ್ದರು. ಪತ್ನಿ ಒಪ್ಪದಿದ್ದರಿಂದ ಆಗಾಗ ಜಗಳ ನಡೆದಿತ್ತು. ಅದೀಗ ಕೊಲೆಯಲ್ಲಿ ಮುಕ್ತಾಯವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇನ್ಸ್ಟಾ ಪ್ರೊಫೈಲ್ ಮಾಯೆ: ಯುವತಿ ಎಂದು 45ರ ಆಂಟಿ ಜೊತೆ 20ರ ಯುವಕನ ಚಾಟ್: ಮುಂದೆ ಆದದ್ದು..
NewsClick ಸ್ಥಾಪಕ ಪ್ರಬೀರ್ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!
ದೆಹಲಿಯ 50 ಕ್ಕೂ ಹೆಚ್ಚಿನ ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್: ಪೋಷಕರಿಗೆ ಆತಂಕ
W.Bengal; ಮುಸ್ಲಿಂ ಮುನಿಸಿಗೆ ಮಂದಿರಕ್ಕೆ ಬಾರದ ಮಮತಾ: ಅಮಿತ್ ಶಾ
1500 for women: ಆಂಧ್ರದಲ್ಲಿ ಕರ್ನಾಟಕ ಮಾದರಿ ಎನ್ಡಿಎ ಗ್ಯಾರಂಟಿ
MUST WATCH
ಹೊಸ ಸೇರ್ಪಡೆ
ಇನ್ಸ್ಟಾ ಪ್ರೊಫೈಲ್ ಮಾಯೆ: ಯುವತಿ ಎಂದು 45ರ ಆಂಟಿ ಜೊತೆ 20ರ ಯುವಕನ ಚಾಟ್: ಮುಂದೆ ಆದದ್ದು..
NewsClick ಸ್ಥಾಪಕ ಪ್ರಬೀರ್ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!
T20 ವಿಶ್ವಕಪ್ ಗೆ ಆಸ್ಟ್ರೇಲಿಯಾ ತಂಡ ಪ್ರಕಟ; ಅನುಭವಿ ಆಟಗಾರನಿಗಿಲ್ಲ ಚಾನ್ಸ್
Politics: ಡಿಕೆಶಿ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ : ರಾಮಲಿಂಗಾರೆಡ್ಡಿ
ದೆಹಲಿಯ 50 ಕ್ಕೂ ಹೆಚ್ಚಿನ ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್: ಪೋಷಕರಿಗೆ ಆತಂಕ