ಟ್ವಿಸ್ಟ್; ದಿಶಾ ಸಾಲ್ಯಾನ್ ಸಾವಿನ ನಂತರವೂ 9 ದಿನಗಳ ಕಾಲ ಮೊಬೈಲ್ ಬಳಕೆಯಾಗಿತ್ತು!
ಜೂನ್ 9 ಮತ್ತು ಜೂನ್ 17ರ ನಡುವೆ ದಿಶಾ ಮೊಬೈಲ್ ನಿಂದ ಇಂಟರ್ನೆಟ್ ಕರೆ ಮಾಡಲಾಗಿತ್ತು
Team Udayavani, Aug 24, 2020, 4:46 PM IST
ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ಕುರಿತು ಸಿಬಿಐ ತನಿಖೆಯನ್ನು ಚುರುಕುಗೊಳಿಸಿದೆ. ಏತನ್ಮಧ್ಯೆ ಸುಶಾಂತ್ ಮಾಜಿ ಮ್ಯಾನೇಜರ್ ದಿಶಾ ಸಾಲ್ಯಾನ್ ಸಾವನ್ನಪ್ಪಿದ್ದ ನಂತರ ಒಂಬತ್ತು ದಿನಗಳ ಕಾಲ ಆಕೆಯ ಮೊಬೈಲ್ ಸಕ್ರಿಯವಾಗಿತ್ತು ಎಂಬ ಅಂಶ ಹೊರಬಿದ್ದಿದೆ.
ಜೂನ್ 8ರಂದು ಮುಂಬೈನ ನಿವಾಸದಲ್ಲಿ ದಿಶಾ ಸಾಲ್ಯಾನ್ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದಳು. ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಶರಣಾಗುವ ಆರು ದಿನದ ಮೊದಲು ದಿಶಾ ಸಾಲ್ಯಾನ್ ಕಟ್ಟಡದಿಂದ ಕೆಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದರು.
ಇದೀಗ ದಿಶಾ ಸಾಲ್ಯಾನ್ ಸಾವಿನ ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ಮೂಲಗಳ ಪ್ರಕಾರ, ದಿಶಾ ಸಾವನ್ನಪ್ಪಿದ್ದ ನಂತರ ಒಂದು ವಾರಕ್ಕಿಂತಲೂ ಹೆಚ್ಚು ಕಾಲ ಮೊಬೈಲ್ ಚಾಲನೆಯಲ್ಲಿತ್ತು ಎಂದು ತಿಳಿಸಿದೆ.
ಜೂನ್ 9 ಮತ್ತು ಜೂನ್ 17ರ ನಡುವೆ ದಿಶಾ ಮೊಬೈಲ್ ನಿಂದ ಇಂಟರ್ನೆಟ್ ಕರೆ ಮಾಡಲಾಗಿತ್ತು ಎಂದು ಮೂಲಗಳು ಹೇಳಿವೆ. ಆದರೆ ದಿಶಾ ಸಾವಿನ ನಂತರವೂ ಆಕೆಯ ಮೊಬೈಲ್ ಅನ್ನು ಯಾರು ಉಪಯೋಗಿಸುತ್ತಿದ್ದರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ವರದಿ ವಿವರಿಸಿದೆ.
ಜೀ ನ್ಯೂಸ್ ಗೆ ಲಭ್ಯವಾಗಿರುವ ದಿಶಾ ಕರೆಗಳ ಮಾಹಿತಿ ಪ್ರಕಾರ, ದಿಶಾ ಸಾಯುವ ಎರಡು ದಿನಗಳ ಮುನ್ನ ಅಂದರೆ ಜೂನ್ 6ರಂದು ಆಕೆಯ ಮೊಬೈಲ್ ನಿಂದ ಮೂರು ಕರೆಗಳನ್ನು ಮಾಡಲಾಗಿತ್ತು. ಜೂನ್ 7ರಂದು ದಿಶಾ ಮೊಬೈಲ್ ನಿಂದ ರಾತ್ರಿ 12:02 ಹಾಗೂ ರಾತ್ರಿ 12:57ಕ್ಕೆ ಎರಡು ಪ್ರತ್ಯೇಕ ಕರೆಗಳನ್ನು ಮಾಡಲಾಗಿತ್ತು ಎಂದು ತಿಳಿಸಿದೆ.
ಜೂನ್ 7ರಂದು ದಿಶಾ ಕನಿಷ್ಠ 36 ಮೊಬೈಲ್ ಕರೆಗಳನ್ನು ಮಾಡಿದ್ದಳು, ಇದರಲ್ಲಿ ಆಕೆಯ ಗೆಳತಿ ಏಕ್ತಾಗೆ 12.10ಸುಮಾರಿಗೆ ಮಾಡಿದ್ದ ಕರೆ ಕೂಡಾ ಸೇರಿದೆ.
ಪ್ರತ್ಯಕ್ಷದರ್ಶಿಗಳ ಹೇಳಿಕೆ ಪ್ರಕಾರ, ದಿಶಾ ಸಾಲ್ಯಾನ್ ಆತ್ಮಹತ್ಯೆ ಮಾಡಿಕೊಂಡ ಕೆಲವೇ ಹೊತ್ತಿನಲ್ಲಿ ಮುಂಬೈ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರು. ಆದರೆ ಅಧಿಕಾರಿಗಳಿಗೆ ದಿಶಾ ಮೊಬೈಲ್ ಫೋನ್ ಸ್ವಾಧೀನಪಡಿಸಿಕೊಳ್ಳಲು ಆಗಿಲ್ಲವಾಗಿತ್ತು ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
MUST WATCH
ಹೊಸ ಸೇರ್ಪಡೆ
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !