ತಮಿಳು ನಾಡು : ದೇವರು ಖಂಡಿತವಾಗಿ ಶಿಕ್ಷಿಸುತ್ತಾನೆ : ಪಳನಿಸ್ವಾಮಿ
Team Udayavani, Mar 29, 2021, 11:08 AM IST
ಚೆನ್ನೈ : ತನ್ನ ತಾಯಿ ಮತ್ತು ಅವರ ವಿರುದ್ದ ಪ್ರತಿಪಕ್ಷ ಡಿ ಎಮ್ ಕೆ ನಾಯಕರು ಕೊಟ್ಟಿರುವ ಹೇಳಿಕೆಗೆ ಮುಖ್ಯಮಂತ್ರಿ ಪಳನಿಸ್ವಾಮಿ ತಿರುಗೇಟು ನೀಡಿದ್ದಾರೆ.
ಡಿ ಎಮ್ ಕೆ ನಾಯಕ ರಾಜಾ ಅವರನ್ನು ಸ್ಟ್ಯಾಲಿನ್ ಅವರ ಸ್ಲಿಪ್ಪರ್ ಎಂದು ಅವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಉತ್ತರ ಚೆನ್ನೈನ ತಿರುವೊಟ್ಟಿಯೂರ್ ನಲ್ಲಿ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪಳನಿಸ್ವಾಮಿ, ನಾನು ನನ್ನ ಬಗ್ಗೆ ಮಾತ್ರ ಮಾತನಾಡುತ್ತಿಲ್ಲ, ಮುಖ್ಯಮಂತ್ರಿ ತಾಯಿಯ ಬಗ್ಗೆಯೇ ಇಂತಹದ್ದನ್ನು ಕೇಳುವಂತಾದರೇ, ಇನ್ನು ನಿಮ್ಮ ತಾಯಂದಿರಿಗೆ ಮತ್ತು ಮಹಿಳೆಯರಿಗೆ ಇಲ್ಲಿ ಯಾವ ರಕ್ಷಣೆ ಇದೆ…? ಎಂದು ಹೇಳುವುದರ ಮೂಲಕ ಡಿ ಎಮ್ ಕೆ ನಾಯಕ ರಾಜಾ ಅವರ ಅಶ್ಲೀಲ ಹೇಳಿಕೆಯನ್ನು ಅವರು ಆರೋಪಿಸಿದ್ದಾರೆ.
ಓದಿ : ವಾಜೆ ನದಿಗೆ ಎಸೆದಿದ್ದ ಕಂಪ್ಯೂಟರ್ ಸಿಪಿಯು, ನಂಬರ್ ಪ್ಲೇಟ್, ಹಾರ್ಡ್ ಡಿಸ್ಕ್ ವಶ
ನಾನು ಈ ವಿಷಯವನ್ನು ತೆಗೆದುಕೊಳ್ಳಲು ಅಥವಾ ಮುಂದುವರಿಸಲು ಇಷ್ಟಪಡಲಿಲ್ಲ ಆದರೆ ನಾನು ನನ್ನ ನೋವನ್ನು ತಡೆಯಲು ಸಾಧ್ಯವಾಗಲಿಲ್ಲ, ಇಲ್ಲಿಯ ಮಹಿಳೆಯರನ್ನು ನೋಡಿ ಈ ವಿಚಾರವನ್ನು ಎತ್ತಲೇ ಬೇಕಾಯಿತು” ಎಂದಿದ್ದಾರೆ.
ಒಬ್ಬ ತಾಯಿ ಆಕೆ ಶ್ರೀಮಂತಳಾಗಿರಲಿ ಅಥವಾ ಬಡವೆಯಾಗಿರಲಿ ಸಮಾಜದಲ್ಲಿ ಆಕೆ ಉನ್ನತ ಸ್ಥಾನವನ್ನು ಹೊಂದಿದ್ದಾಳೆ ಮತ್ತು ಮಹಿಳೆಯರನ್ನು ಅವಹೇಳನ ಮಾಡುವ ಯಾರಾದರೂ ದೇವರಿಂದ ಶಿಕ್ಷಿಸಲ್ಪಡುತ್ತಾರೆ. ಎಂದು ಅವರು ಕಿಡಿ ಕಾರಿದ್ದಾರೆ.
ರಾಜನಂತೆ ಮೆರಯುವವರಿಗೆ ಮತಗಳ ಮೂಲಕ “ಸೂಕ್ತ ಶಿಕ್ಷೆಯನ್ನು” ನೀಡುವಂತೆ ಜನರಿಗೆ ಪಳನಿಸ್ವಾಮಿ ಮನವಿ ಮಾಡಿಕೊಂಡಿದ್ದಾರೆ.
ಅವರು ಕೂಡ ಒಬ್ಬ ತಾಯಿಯ ಗರ್ಭದಲ್ಲಿ ಹುಟ್ಟಿದ್ದಾರೆ. ಆದರೇ, ತಾಯಂದಿರನ್ನು ಅವರು ಅವಮಾನಿಸಿದ್ದಾರೆ. ಅಂತಹ ಜನರು ಶಿಕ್ಷೆಗೆ ಒಳಗಾಗಲೇ ಬೇಕು. ನಾನು ಒಂದು ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದಿದ್ದೇನೆ. ನನ್ನ ತಾಯಿ ಬಡತನವನ್ನು ಕಂಡಿದ್ದಾರೆ. ತುಂಬಾ ಕಷ್ಟ ಪಟ್ಟು ಕೆಲಸ ಮಾಡಿದ್ದಾರೆ. ಈಗ ಅವರು ಇಲ್ಲ. ಶ್ರೀಮಂತರಾಗಲಿ, ಬಡವರಾಗಲಿ, ತಾಯಿಯ ಸ್ಥಾನ ಎಂದಿಗೂ ಶ್ರೇಷ್ಠವಾಗಿರುತ್ತದೆ. ಮುಖ್ಯಮಂತ್ರಿಯಾಗಿರುವನಿಗೆ ಇದು ಸಂಭವಿಸಬಹುದಾದರೆ, ನಿಮ್ಮಂತಹ ಸಾಮಾನ್ಯ ಜನರಿಗೆ ಏನಾಗಬಹುದು ಎಂದು ಯೋಚಿಸಿ. ಅಂತಹ ಜನರನ್ನು ದೇವರು ಖಂಡಿತವಾಗಿ ಶಿಕ್ಷಿಸುತ್ತಾನೆ ಎಂದು ಅವರು ಹೇಳಿದ್ದಾರೆ.
ಓದಿ : NCT ಮಸೂದೆಗೆ ರಾಷ್ಟ್ರಪತಿ ಅಂಕಿತ, ದೆಹಲಿ ಸಿಎಂಗಿಂತ ಗವರ್ನರ್ ಗೆ ಹೆಚ್ಚಿನ ಅಧಿಕಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ
Karnataka ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು
Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು
Bidar; ಹಣ ಹಂಚುವ ದೂರು: ನಾಗಮಾರಪಳ್ಳಿ ಮನೆಯಲ್ಲಿ ಪರಿಶೀಲನೆ
Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ