Judge: ಅಕ್ರಮ ಮರಳು ಮಾಫಿಯಾಗೆ ಬಲಿಯಾದ ಅಧಿಕಾರಿಯ ಮಗ ಈಗ ಜಡ್ಜ್!
Team Udayavani, Feb 21, 2024, 8:47 AM IST
ತೂತುಕುಡಿ: ಅಕ್ರಮ ಮರಳು ದಂಧೆಯನ್ನು ತಡೆಯಲು ಯತ್ನಿಸುವಾಗ ಕೊಲೆಯಾಗಿದ್ದ ಗ್ರಾಮ ಆಡಳಿತ ಅಧಿಕಾರಿಯ ಮಗನೀಗ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ. ನ್ಯಾಯಾಂಗ ಸೇವೆಗಳ ಪರೀಕ್ಷೆಯನ್ನು ಪೂರ್ಣಗೊಳಿಸಿರುವ ತಮಿಳುನಾಡಿನ ತೂತುಕುಡಿಯ ಏಸುವಾದಿಯಾನ್ ಇಂಥದ್ದೊಂದು ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ.
2023ರ ಏ.25ರಂದು ಅಕ್ರಮ ಮರಳು ಗಣಿಗಾರಿಕೆ ತಡೆಯಲು ಯತ್ನಿ ಸುವಾಗ ಮುರಪ್ಪನಾಡಿನ ಗ್ರಾಮೀಣ ಆಡಳಿತಾಧಿಕಾರಿಯಾಗಿದ್ದ ಲಾರ್ಡ್ ಫ್ರಾನ್ಸಿನ್ ಹತ್ಯೆಗೀಡಾಗಿದ್ದರು. ಅದಾಗಿ 10 ತಿಂಗಳ ಅಂತರದಲ್ಲಿ ಸಿವಿಲ್ ನ್ಯಾಯಾಧೀಶನಾಗುವ ಮೂಲಕ ಏಸುವಾದಿಯಾನ್ ತಮ್ಮ ತಂದೆಗೆ ಅರ್ಥಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಸಿವಿಲ್ ನ್ಯಾಯಾಧೀಶ ರಾಗಿ ಆಯ್ಕೆ ಯಾಗಿರುವ ಬಗ್ಗೆ ಸಂತಸ ಹಂಚಿ ಕೊಂಡಿರುವ ಏಸುವಾದಿ ಯಾನ್, ನನ್ನಂಥ ಯುವಕರು ಶ್ರಮ ಪಡುವು ದನ್ನು ನಾನು ಬಯಸುತ್ತೇನೆ. ಬದುಕಿ ನಲ್ಲಿ ಶಿಕ್ಷಣ ಮಾತ್ರ ನಮಗೆ ಒಳ್ಳೆಯ ಸ್ಥಾನ ನೀಡಬಲ್ಲದು ಎಂದಿದ್ದಾರೆ. ಪುಡುಕೊಟ್ಟಾಯಿಯ ಸರ್ಕಾರಿ ಶಾಲೆ ಯಲ್ಲಿ ಓದಿರುವ ಏಸುವಾದಿಯಾನ್, ಚೆನ್ನೈಯಲ್ಲಿ ಕಾನೂನು ಪದವಿ ಮುಗಿಸಿದ್ದರು.
ಫ್ರಾನ್ಸಿನ್ ಸಾವು ಇಡೀ ತಮಿಳು ನಾಡು ರಾಜ್ಯವನ್ನೇ ತಲ್ಲಣಗೊಳಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ