ಬೇರೊಬ್ಬನ ಪತ್ನಿ ಜೊತೆ ಕಳ್ಳಾಟ; ಪತಿ ಕೈಯಲ್ಲೇ ಸಿಕ್ಕಿಬಿದ್ದ ಎಸ್ಐ!
Team Udayavani, Feb 21, 2017, 4:23 PM IST
ಹೈದರಾಬಾದ್:ಕಳ್ಳನನ್ನು ಹಿಡಿಯಬೇಕಾದ ಪೊಲೀಸ್ ಅಧಿಕಾರಿಯೇ ತಾನೇ “ಕಳ್ಳಾಟ” ನಡೆಸಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ ನಡೆದಿದೆ. ಮಹಿಳೆಯೊಬ್ಬಳ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಂಡನ ಕೈಯಲ್ಲೇ ಸಿಕ್ಕಿಬಿದ್ದಿರುವ ಪ್ರಕರಣ ಹೈದರಾಬಾದ್ ನ ಕಮ್ಮಂನಲ್ಲಿ ಬೆಳಕಿಗೆ ಬಂದಿದೆ.
ಸೋಮವಾರ ಮೋತಿನಗರದಲ್ಲಿನ ಮನೆಯೊಂದರಲ್ಲಿ ಕಮ್ಮಂ ಎಸ್ ಐ ಮಹಿಳೆಯ ಪತಿ ಕೈಯಲ್ಲೇ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.
ಏನಿದು ಕಳ್ಳಾಟ!
ಕಮ್ಮಂ ಟೌನ್ ಪೊಲೀಸ್ ಠಾಣೆಯ ಎಸ್ಐ ಆಗಿರುವ ಡಿ.ವಿಜಯ್ ಕುಮಾರ್ (35ವರ್ಷ)ಗೆ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಈ ಎಸ್ ಐಗೆ ಕಳೆದ 8 ತಿಂಗಳ ಹಿಂದೆ ಫೇಸ್ ಬುಕ್ ನಲ್ಲಿ 27ವರ್ಷದ ಮಹಿಳೆಯೊಬ್ಬಳ ಪರಿಚಯವಾಗಿದೆ. ಆಕೆಗೂ ಸಾಫ್ಟ್ ವೇರ್ ಇಂಜಿನಿಯರ್ ಜೊತೆ ವಿವಾಹವಾಗಿತ್ತು. ಆಕೆಗೆ 6 ತಿಂಗಳ ಮಗು ಕೂಡಾ ಇದೆ.
ಅಚ್ಚರಿ ಏನಪ್ಪ ಅಂದರೆ ಎಸ್ ಐ ಮತ್ತು ಈಕೆ ನಡುವಿನ ಆನ್ ಲೈನ್ ಸಂಬಂಧ ಪ್ರೀತಿಗೆ ತಿರುಗಿತ್ತು. ಹೀಗೆ ಕೆಲವು ಸಮಯದ ಹಿಂದೆ ಎಸ್ಐ ಆಕೆಯನ್ನು ವೈಯಕ್ತಿಕವಾಗಿ ಭೇಟಿ ಕೂಡ ಆಗಿದ್ದ ಎಂದು ವರದಿ ವಿವರಿಸಿದೆ.
ಕೆಲವೇ ವಾರಗಳಲ್ಲಿ ಇಬ್ಬರ ನಡುವಿನ ಸಂಬಂಧ ಗಾಢವಾಗತೊಡಗಿತ್ತು. ಬಳಿಕ ಆಕೆಯ ಮನೆಯಲ್ಲಿ ಎಸ್ಐ ಕದ್ದುಮುಚ್ಚಿ ಬಂದು ಮಾತನಾಡಿ ಹೋಗತೊಡಗಿದ್ದ ಎಂದು ಎಸ್ಆರ್ ನಗರದ ಇನ್ಸ್ ಪೆಕ್ಟರ್ ಮೊಹಮ್ಮದ್ ವಾಹೀದ್ದುದ್ದೀನ್ ತಿಳಿಸಿದ್ದಾರೆ. ತನ್ನ ಪತ್ನಿ ಹೆಚ್ಚಿನ ಕಾಲ ಫೋನ್ ಸಂಭಾಷಣೆಯಲ್ಲಿ ಇರುವುದನ್ನು ಗಮನಿಸಿದ್ದ ಪತಿಗೆ ಸಂಶಯ ಮೂಡತೊಡಗಿತ್ತು. ಆ ನಿಟ್ಟಿನಲ್ಲಿ ಪತ್ನಿಯ ಕಳ್ಳಾಟ ಬಯಲು ಮಾಡಲು ಪತಿ ನಿರ್ಧರಿಸಿದ್ದ.
ಶನಿವಾರದಂದು ಪತಿ, ತಾನು ಮೂರು ದಿನಗಳ ಕಾಲ ಹೊರಗೆ ಹೋಗುವುದಾಗಿ ಹೇಳಿದ್ದ. ತದನಂತರ ಅಪಾರ್ಟ್ ಮೆಂಟ್ ನಲ್ಲಿರುವ ತನ್ನ ಮನೆಗೆ ಯಾರು ಬರಲಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ಕಾದು ಕುಳಿತಿದ್ದ, ಆಗ ಸಿಕ್ಕಿಬಿದ್ದಿರುವ ವ್ಯಕ್ತಿಯೇ ಈ ಎಸ್ಐ. ಕೂಡಲೇ ಇಬ್ಬರನ್ನು ಪತಿ ಟಾಯ್ಲೆಟ್ ನಲ್ಲಿ ಕೂಡಿ ಹಾಕಿ, ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
MUST WATCH
ಹೊಸ ಸೇರ್ಪಡೆ
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
IPL; ಮೆಕ್ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ