ವಾರದೊಳಗೆ ತೇಜಸ್ವಿ ಯಾದವ್ ರಾಜೀನಾಮೆ?
Team Udayavani, Jul 24, 2017, 7:15 AM IST
ಪಾಟ್ನಾ: ಇನ್ನು ಕೇವಲ 5 ದಿನಗಳಲ್ಲಿ ಬಿಹಾರ ಉಪಮುಖ್ಯಮಂತ್ರಿ ಸ್ಥಾನ ತೇಜಸ್ವಿ ಯಾದವ್ ಅವರ ಕೈತಪ್ಪಲಿದೆಯೇ?
ಹೌದು ಎನ್ನುತ್ತದೆ ಮೂಲಗಳು. ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಆರ್ಜೆಡಿ ನಾಯಕ ಲಾಲು ಪ್ರಸಾದ್ ಅವರ ಪುತ್ರ ತೇಜಸ್ವಿ ಯಾದವ್ ರಾಜೀನಾಮೆ ನೀಡಲೇಬೇಕು ಎಂದು ಸಿಎಂ ನಿತೀಶ್ ಕುಮಾರ್ ಪಟ್ಟು ಹಿಡಿದಿದ್ದಾರೆ. ಇದೇ 28ರಂದು ಬಿಹಾರ ವಿಧಾನಸಭೆ ಅಧಿವೇಶನ ಆರಂಭವಾಗಲಿದ್ದು, ಅದಕ್ಕೆ ಮೊದಲೇ ತೇಜಸ್ವಿ ಡಿಸಿಎಂ ಸ್ಥಾನ ತೊರೆಯಬೇಕು ಎಂದು ನಿತೀಶ್ ಕಟ್ಟಪ್ಪಣೆ ಹೊರಡಿಸಿದ್ದಾರೆ. ಅಧಿವೇಶನದಲ್ಲಿ ಪ್ರತಿಪಕ್ಷ ಬಿಜೆಪಿಯಿಂದ ಮುಖ ಉಳಿಸಿಕೊಳ್ಳಬೇಕೆಂದರೆ ನಿತೀಶ್ಗೆ ಇದಲ್ಲದೇ ಬೇರೆ ದಾರಿಯಿಲ್ಲ. ಅದರಂತೆ, ಅವರು ತಮ್ಮ ನಿಲುವನ್ನು ಈಗಾಗಲೇ ಮಿತ್ರಪಕ್ಷಗಳಾದ ಆರ್ಜೆಡಿ ಮತ್ತು ಕಾಂಗ್ರೆಸ್ಗೂ ತಲುಪಿಸಿದ್ದಾರೆ. ಹೀಗಾಗಿ 28ರೊಳಗೆ ತೇಜಸ್ವಿ ರಾಜೀನಾಮೆ ನೀಡುವ ಸಾಧ್ಯತೆ ಇದೆ. ಇನ್ನೊಂದೆಡೆ, ರಾಜಿನಾಮೆಯ ಪ್ರಶ್ನೆಯೇ ಇಲ್ಲ ಎನ್ನುತ್ತಿದ್ದ ಲಾಲು ಅವರೂ ಸ್ವಲ್ಪಮಟ್ಟಿಗೆ ಮೆತ್ತಗಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ತೇಜಸ್ವಿ ರಾಜೀನಾಮೆ ಕುರಿತು ತಮ್ಮ ನಿರ್ಧಾರ ಮರುಪರಿಶೀಲಿಸಲು ಅವರು ನಿರ್ಧರಿಸಿದ್ದಾರೆ. ತೇಜಸ್ವಿ ವಿಚಾರದಲ್ಲಿ ಜೆಡಿಯು ಜತೆ ಗಿನ ಮೈತ್ರಿ ಕಳೆದುಕೊಳ್ಳಲು ಲಾಲು ಅವರಿಗೆ ಮನಸ್ಸಿಲ್ಲ. ಹೀಗಾಗಿ, ತೇಜಸ್ವಿ ರಾಜೀನಾಮೆ ಪಡೆದು ಮೈತ್ರಿ ಉಳಿಸಿಕೊಳ್ಳುವ ಯೋಚನೆ ಮಾಡಿದ್ದಾರೆ ಎನ್ನಲಾಗಿದೆ.
ಬಿಜೆಪಿ ಸಂಚು?: ಏತನ್ಮಧ್ಯೆ, ಆರ್ಜೆಡಿ-ಜೆಡಿಯು ಬಿಕ್ಕಟ್ಟು ಹಿಂದೆ ಬಿಜೆಪಿಯ ಕುತಂತ್ರ ಅಡಗಿದೆ ಎಂದು ಬರೆದಿರುವ ಬ್ಯಾನರ್ಗಳು ಪಾಟ್ನಾದ ಬೀದಿ ಗಳಲ್ಲಿ ರಾರಾಜಿಸತೊಡಗಿವೆ. ಬಿಜೆಪಿ ನಾಯಕ ಸುಶೀಲ್ ಮೋದಿ ಹೇಳಿದಂತೆ ಕೆಲ ಜೆಡಿಯು ನಾಯಕರು ಕುಣಿಯುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ