ತೆಲಂಗಾಣ ಕಾಂಗ್ರೆಸ್ನಲ್ಲಿ ಭಿನ್ನಮತ ಸ್ಫೋಟ: 13 ಪಿಸಿಸಿ ಸದಸ್ಯರ ರಾಜೀನಾಮೆ
Team Udayavani, Dec 18, 2022, 9:47 PM IST
ಹೈದರಾಬಾದ್:ತೆಲಂಗಾಣ ಕಾಂಗ್ರೆಸ್ನಲ್ಲಿನ ಆಂತರಿಕ ಭಿನ್ನಮತವು ಸ್ಫೋಟಗೊಂಡಿದ್ದು, ಭಾನುವಾರ ಪ್ರದೇಶ ಕಾಂಗ್ರೆಸ್ ಕಮಿಟಿಯ 13 ಸದಸ್ಯರು ರಾಜೀನಾಮೆ ನೀಡಿದ್ದಾರೆ.
ಬೇರೆ ಪಕ್ಷಗಳಿಂದ ಕಾಂಗ್ರೆಸ್ಗೆ ವಲಸೆ ಬಂದವರಿಗೇ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂಬ ಹಿರಿಯ ನಾಯಕರ ಹೇಳಿಕೆಯನ್ನು ಖಂಡಿಸಿ ರಾಜೀನಾಮೆ ನೀಡುತ್ತಿರುವುದಾಗಿ ಇವರೆಲ್ಲರೂ ತಿಳಿಸಿದ್ದಾರೆ.
13 ಸದಸ್ಯರ ಪೈಕಿ ಹಾಲಿ ಶಾಸಕಿ ದನಸಾರಿ ಅನಸೂಯ, ಮಾಜಿ ಶಾಸಕ ವೇಮ್ ನರೇಂದ್ರ ರೆಡ್ಡಿ ಅವರೂ ಸೇರಿದ್ದಾರೆ.