92 ದೇಶಗಳಿಗೆ ಹತ್ತು ಕೋಟಿ ಕೋವಿಡ್ ಲಸಿಕೆ; ಸೀರಂ ಇನ್ಸ್ಟಿಟ್ಯೂಟ್ನಿಂದ ಉತ್ಪಾದನೆ
Team Udayavani, Aug 8, 2020, 11:16 AM IST
ಹೈದರಾಬಾದ್ನಲ್ಲಿ ಆರೋಗ್ಯ ಕಾರ್ಯಕರ್ತರು ಶುಕ್ರವಾರ ಸಾರ್ವಜನಿಕರ ಗಂಟಲ ದ್ರವದ ಮಾದರಿ ಪಡೆದುಕೊಳ್ಳುತ್ತಿರುವುದು.
ಭಾರತದಲ್ಲಿ ಲಸಿಕೆಯ ಪ್ರಯೋಗಕ್ಕೆ ಅನುಮತಿ ಪಡೆದಿರುವ ಎಸ್ಎಸ್ಐ
ಪ್ರತಿ ಸ್ಯಾಂಪಲ್ ಲಸಿಕೆಗೆ 225 ರೂ. ದರ ನಿಗದಿ ಮಾಡಲು ಪುಣೆ ಸಂಸ್ಥೆಯ ಇಂಗಿತ
ನವದೆಹಲಿ: ಕೋವಿಡ್ ನಿಯಂತ್ರಣಕ್ಕಾಗಿ 10 ಕೋಟಿ ಲಸಿಕೆಯ ಸ್ಯಾಂಪಲ್ಗಳನ್ನು ಉತ್ಪಾದಿಸಲಿರುವುದಾಗಿ ಪುಣೆಯ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಶುಕ್ರವಾರ ತಿಳಿಸಿದೆ. ಈ ಉದ್ದೇಶಕ್ಕಾಗಿ ಅಮೆರಿಕದ ಬಿಲ್ ಆ್ಯಂಡ್ ಮೆಲಿಂಡಾ ಗೇಟ್ಸ್ ಫೌಂಡೇಷನ್ ಹಾಗೂ ಗ್ಯಾವಿ ವ್ಯಾಕ್ಸಿನ್ಸ್’ ಕಂಪೆನಿಯ ಜೊತೆಗೆ 1,125 ಕೋಟಿ ರೂ.ಗಳ ಒಪ್ಪಂದ ಮಾಡಿಕೊಂಡಿದೆ.
ಮತ್ತೂಂದು ಮಹತ್ವದ ವಿಚಾರವೆಂದರೆ, ಆಕ್ಸ್ಫರ್ಡ್ ವಿವಿಯ ಆ್ಯಸ್ಟ್ರಾ ಝೆನೆಕಾ ಹಾಗೂ ನೊವಾವ್ಯಾಕ್ಸ್ ಲಸಿಕೆಗಳ ಪ್ರತಿಯೊಂದು ಸ್ಯಾಂಪಲ್ ಬೆಲೆಯನ್ನು 225 ರೂ.ಗಳಿಗೆ ನಿಗದಿಗೊಳಿಸಿ, ಅವನ್ನು 92 ದೇಶಗಳಿಗೆ ಸರಬರಾಜು ಮಾಡಲು ನಿರ್ಧರಿಸಲಾಗಿದೆ. ಗ್ಯಾವಿ ಕಂಪೆನಿಯ ಅಂಗಸಂಸ್ಥೆಯಾದ ಕೊವ್ಯಾಕ್ಸ್ ಮಾರ್ಕೆಟ್ ಕಮಿಟ್ಮೆಂಟ್ (ಎಎಂಸಿ) ಕಂಪೆನಿಯಿಂದ ಸ್ಯಾಂಪಲ್ಗಳನ್ನು ಸರಬರಾಜು ಮಾಡಲಾಗುತ್ತದೆ. ಆ ಸರಬರಾಜಿಗೆ ತಗಲುವ ವೆಚ್ಚವನ್ನು ಗೇಟ್ಸ್ ಫೌಂಡೇಶನ್ ನೀಡಲಿದೆ.
24 ಗಂಟೆಗಳಲ್ಲಿ ದಾಖಲೆಯ ಪ್ರಕರಣ: ಇದೇ ಮೊದಲ ಬಾರಿಗೆ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಒಂದೇ ದಿನ 60 ಸಾವಿರದ ಗಡಿ ದಾಟಿದೆ. ಗುರುವಾರ ಬೆಳಗ್ಗೆ 8ರಿಂದ ಶುಕ್ರವಾರ ಬೆಳಗ್ಗೆ 8ರವರೆಗೆ ದಾಖಲೆಯ 62,538 ಪ್ರಕರಣಗಳು ಪತ್ತೆಯಾಗಿದ್ದು, ಈ ಅವಧಿಯಲ್ಲಿ 886 ಮಂದಿ ಸಾವಿಗೀಡಾಗಿದ್ದಾರೆ. ದೇಶದಲ್ಲಿ ಈವರೆಗೆ ಗುಣಮುಖರಾದವರ ಸಂಖ್ಯೆ 13.78 ಲಕ್ಷಕ್ಕೇರಿದ್ದು, ಗುಣಮುಖ ಪ್ರಮಾಣ ಶೇ.67.98ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಸೋಂಕಿತರ ಸಂಖ್ಯೆ 1ಲಕ್ಷಕ್ಕೇರಲು 110 ದಿನಗಳು ತಗುಲಿದ್ದವು. 10 ಲಕ್ಷ ದಾಟಲು 59 ದಿನಗಳು ಬೇಕಾದವು. ನಂತರ ಕೇವಲ 21 ದಿನಗಳಲ್ಲಿ ಸೋಂಕಿತರ ಸಂಖ್ಯೆ 20 ಲಕ್ಷ ದಾಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ
Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್
Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ
Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ
Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ
MUST WATCH
ಹೊಸ ಸೇರ್ಪಡೆ
ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್
Ramana Avatara: ಇದು ಮಾಡರ್ನ್ ರಾಮನ ಕಥೆ: ‘ರಾಮನ ಅವತಾರ’ ಮೇಲೆ ರಿಷಿ ನಿರೀಕ್ಷೆ
60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ
Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ