‘ಘೋಷಣೆ ಸಾಲದು, ಉಗ್ರ ಕ್ರಮ ಬೇಕು’
Team Udayavani, Jul 26, 2019, 5:07 AM IST
ನವದೆಹಲಿ: ಪಾಕಿಸ್ತಾನದಲ್ಲಿ ಈಗಲೂ 40 ಸಾವಿರ ಉಗ್ರರು ಸಕ್ರಿಯರಾಗಿದ್ದಾರೆ ಎಂಬ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಭಾರತ, ಉಗ್ರರ ಬಗ್ಗೆ ಜಾಗತಿಕ ಮಟ್ಟದಲ್ಲಿ ಮಾಹಿತಿ ನೀಡುವುದಷ್ಟೇ ಅಲ್ಲ, ಅವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲೂ ಇದು ಸಕಾಲ ಎಂದು ಹೇಳಿದೆ.
ಈ ಹಿನ್ನೆಲೆಯಲ್ಲಿ, ಗುರುವಾರ ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಖಾತೆ ವಕ್ತಾರ ರವೀಶ್ ಕುಮಾರ್ ಹೀಗೆ ಆಗ್ರಹಿಸಿದ್ದಾರೆ.
ಈ ನಡುವೆ, ಸ್ವದೇಶಕ್ಕೆ ಮರಳಿರುವ ಇಮ್ರಾನ್ ಖಾನ್, ಪಾಕ್-ಅಮೆರಿಕ ನಡುವಿನ ದ್ವಿಪಕ್ಷೀಯ ಸಂಬಂಧಕ್ಕೆ ಹೊಸ ಭಾಷ್ಯ ಬರೆದು ಬಂದಿದ್ದು, 1992ರಲ್ಲಿ ಏಕದಿನ ವಿಶ್ವಕಪ್ ಗೆದ್ದು ಪಾಕ್ಗೆ ಹಿಂದಿರುಗಿದ್ದಾಗ ಉಂಟಾಗಿದ್ದ ಸಂಭ್ರಮವೇ ಈಗ ಮತ್ತೆ ತಮ್ಮಲ್ಲಿ ಮರುಕಳಿಸಿದೆ ಎಂದಿದ್ದಾರೆ.