Shiv Sena (UBT); ಮುಸ್ಲಿಮರು ನಮ್ಮೊಂದಿಗೆ ಬರುತ್ತಿದ್ದಾರೆ : ಉದ್ಧವ್ ಠಾಕ್ರೆ
ನಾನು 'ಹಿಂದೂ ಹೃದಯ ಸಾಮ್ರಾಟ್'ನ ಮಗ ಎಂದು ಹೇಳಿದೆ ..ಅದಕ್ಕೆ ಅವರು...
Team Udayavani, Feb 11, 2024, 5:12 PM IST
ಮುಂಬೈ: ‘ಮುಸ್ಲಿಂ ಸಮುದಾಯದವರು ನಮ್ಮೊಂದಿಗೆ ಬರುತ್ತಿದ್ದಾರೆ’ ಎಂದು ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿಕೆ ನೀಡಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. .
ನಾನು ಶಿವಸೇನೆಯ ಪಕ್ಷದ ಮುಖ್ಯಸ್ಥ ಮತ್ತು ‘ಹಿಂದೂ ಹೃದಯ ಸಾಮ್ರಾಟ್’ನ ಮಗ ಎಂದು ನಿಮಗೆ ತಿಳಿದಿಲ್ಲವೇ ಎಂದು ನಾನು ಮುಸ್ಲಿಮರನ್ನು ಕೇಳಿದೆ. ‘ನಾನೇ ಕಟ್ಟಾ ಹಿಂದೂ ಆಗಿದ್ದು ಯಾಕೆ ನನ್ನ ಜೊತೆ ಬರುತ್ತೀರಿ’ ಎಂದು ಪ್ರಶ್ನಿಸಿದೆ. ಅದಕ್ಕೆ ಅವರು ”ನಿಮ್ಮ ಹಿಂದುತ್ವಕ್ಕೂ ಬಿಜೆಪಿಯ ಹಿಂದುತ್ವಕ್ಕೂ ವ್ಯತ್ಯಾಸವಿದೆ ಎಂದು ತಿಳಿದಿದೆ. ನಿಮ್ಮ ಹಿಂದುತ್ವ ನಮ್ಮ ಮನೆಯಲ್ಲಿ ಒಲೆ ಉರಿಸುತ್ತದೆ, ಬಿಜೆಪಿಯ ಹಿಂದುತ್ವ ಮನೆಯನ್ನು ಸುಡುತ್ತದೆ” ಎಂದು ಪ್ರತಿಕ್ರಿಯಿಸಿದರು ಎಂದು ಹೇಳಿದ್ದಾರೆ.
ನಮ್ಮ ಹೃದಯದಲ್ಲಿ ರಾಮನಿದ್ದಾನೆ ಮತ್ತು ನಮ್ಮ ಕೈಯಲ್ಲಿ ಕೆಲಸ, ಇದು ನಮ್ಮ ಹಿಂದುತ್ವ, ಮತ್ತು ನಾವು ದೇಶಭಕ್ತ ಹಿಂದೂಗಳು ಎಂದು ಉದ್ಧವ್ ಠಾಕ್ರೆ ಬಿಜೆಪಿ ಮತ್ತು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ
Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?