ಶತಕ ಪೂರೈಸಿದ ಡ್ಯಾಂಗಳ ಬಗ್ಗೆ ಸಂಸದೀಯ ಸಮಿತಿ ಆತಂಕ

ಕರ್ನಾಟಕದ 15 ಸಹಿತ ದೇಶದಲ್ಲಿವೆ 234 ಪುರಾತನ ಅಣೆಕಟ್ಟುಗಳು

Team Udayavani, Apr 4, 2023, 7:15 AM IST

ಶತಕ ಪೂರೈಸಿದ ಡ್ಯಾಂಗಳ ಬಗ್ಗೆ ಸಂಸದೀಯ ಸಮಿತಿ ಆತಂಕ

ಹೊಸದಿಲ್ಲಿ: ದೇಶದಲ್ಲಿ 100 ವರ್ಷಗಳು ದಾಟಿರುವಂಥ 234 ಅಣೆಕಟ್ಟುಗಳನ್ನು ಈಗಲೂ ಬಳಸಲಾಗುತ್ತಿದ್ದು, ಈ ಅಣೆಕಟ್ಟುಗಳ ಸುರಕ್ಷೆ ಬಗ್ಗೆ ಸಂಸದೀಯ ಸಮಿತಿ ತೀವ್ರ ಕಳವಳ ವ್ಯಕ್ತಪಡಿಸಿದೆ. ಕೆಲವು ಡ್ಯಾಂಗಳಂತೂ 300 ವರ್ಷಕ್ಕೂ ಹಳೆಯದಾಗಿದ್ದು, ಇವುಗಳನ್ನು ಇನ್ನೂ ಬಳಕೆಯಿಂದ ಮುಕ್ತಗೊಳಿಸಿಲ್ಲ ಎಂದೂ ಸಮಿತಿ ಅಸಮಾಧಾನ ಹೊರಹಾಕಿದೆ. ಶತಕ ಪೂರೈಸಿರುವಂಥ ಡ್ಯಾಂಗಳ ಪೈಕಿ ಕರ್ನಾಟಕದ 15 ಅಣೆಕಟ್ಟುಗಳೂ ಸೇರಿವೆ.

ಸಾಮಾನ್ಯವಾಗಿ ಅಣೆಕಟ್ಟುಗಳನ್ನು 100 ವರ್ಷಗಳ ಬಾಳಿಕೆ ಅವಧಿಗೆ ವಿನ್ಯಾಸಗೊಳಿಸಿರಲಾಗುತ್ತದೆ. ಕಾಲ ಕ್ರಮೇಣ ಜಲಾಶಯದ ನೀರು ದೀರ್ಘಾವಧಿ ಶೇಖರಣೆಗೊಳ್ಳುವ ಕಾರಣ ಅಣೆಕಟ್ಟಿನ ಕಾರ್ಯ ಕ್ಷಮತೆ ಕುಗ್ಗುತ್ತಾ ಹೋಗುತ್ತದೆ. ಆದರೆ ನಮ್ಮ ದೇಶದಲ್ಲಿ ಈವರೆಗೆ ಒಂದೇ ಒಂದು ಅಣೆಕಟ್ಟನ್ನೂ ಸ್ಥಗಿತಗೊಳಿಸಿಲ್ಲ. ಅಮೆರಿಕ ಸಹಿತ ಹಲವು ದೇಶಗಳು ಅವಧಿ ಮೀರಿದ ಅಣೆಕಟ್ಟುಗಳನ್ನು ಬಳಕೆಯಿಂದ ಮುಕ್ತಗೊಳಿಸಿ, ನೀರಿನ ನೈಸರ್ಗಿಕ ಹರಿವಿಗೆ ದಾರಿ ಮಾಡಿಕೊಡುತ್ತಿವೆ. ಭಾರತದಲ್ಲಿ ಇಂಥ ಪ್ರಕ್ರಿಯೆ ನಡೆದೇ ಇಲ್ಲ.

ನೀರಿಗೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿಯು ಸಂಸತ್‌ಗೆ ಮಾ. 20ರಂದು ಸಲ್ಲಿಸಿದ ವರದಿಯಲ್ಲಿ ಈ ಕುರಿತು ಬೆಳಕು ಚೆಲ್ಲಿದೆ. ಜಲಶಕ್ತಿ ಸಚಿವಾಲಯವು ಶೀಘ್ರವೇ ಅಣೆಕಟ್ಟುಗಳ ಬಾಳಿಕೆ ಅವಧಿ ಮತ್ತು ಕಾರ್ಯಾಚರಣೆಯನ್ನು ಪರಿಶೀಲನೆ ನಡೆಸಬೇಕು ಮತ್ತು ಬಾಳಿಕೆ ಅವಧಿ ಮುಗಿದಿರುವ ಅಣೆಕಟ್ಟುಗಳನ್ನು ಕಾರ್ಯಾಚರಣೆಯಿಂದ ತೆಗೆದು ಹಾಕಬೇಕು ಎಂದು ಶಿಫಾರಸು ಮಾಡಿದೆ.

ದೇಶದಲ್ಲಿ ಈವರೆಗೆ ಸುಮಾರು 36ರಷ್ಟು ಅಣೆಕಟ್ಟು ದುರಂತಗಳು ನಡೆದಿವೆ. ಈ ಪೈಕಿ ಗುಜರಾತ್‌ನ ಮೊರ್ಬಿಯಲ್ಲಿ ನಡೆದ ಮಚ್ಚು ಅಣೆಕಟ್ಟು ಅವಘಡವು ಅತ್ಯಂತ ಭೀಕರ ದುರಂತಗಳ ಸಾಲಿಗೆ ಸೇರಿದೆ. 1979ರಲ್ಲಿ ನಡೆದ ಈ ದುರಂತದಲ್ಲಿ 2 ಸಾವಿರ ಮಂದಿ ಸಾವಿಗೀಡಾಗಿ, ಸುಮಾರು 12 ಸಾವಿರ ಮನೆಗಳು ನಾಶವಾಗಿದ್ದವು.

ಯಾವ ರಾಜ್ಯದಲ್ಲಿ ಎಷ್ಟಿವೆ?
ಮಧ್ಯಪ್ರದೇಶ 63
ಮಹಾರಾಷ್ಟ್ರ 44
ಗುಜರಾತ್‌ 30
ರಾಜಸ್ಥಾನ 25
ತೆಲಂಗಾಣ 21
ಉತ್ತರಪ್ರದೇಶ 17
ಕರ್ನಾಟಕ 15
ಛತ್ತೀಸ್‌ಗಡ 7
ಆಂಧ್ರಪ್ರದೇಶ 6
ಒಡಿಶಾ 3
ಬಿಹಾರ, ಕೇರಳ, ತ.ನಾಡು ತಲಾ 1

 

 

ಟಾಪ್ ನ್ಯೂಸ್

1-qweqqweqwe

ಲೈಂಗಿಕ ಕಿರುಕುಳದೂರು ರಾಜಕೀಯ ಪ್ರೇರಿತ: ಪ.ಬಂಗಾಲ ಗವರ್ನರ್‌

Madikeri ವೃದ್ಧೆ ಸಾವು: ಸೊಸೆಗೆ ನ್ಯಾಯಾಂಗ ಬಂಧನ

Madikeri ವೃದ್ಧೆ ಸಾವು: ಸೊಸೆಗೆ ನ್ಯಾಯಾಂಗ ಬಂಧನ

Malpe ದಕ್ಕೆಯಲ್ಲಿ ನೀರಿಗೆ ಬಿದ್ದು ಸಾವು: ದೂರು ದಾಖಲು

Malpe ದಕ್ಕೆಯಲ್ಲಿ ನೀರಿಗೆ ಬಿದ್ದು ಸಾವು: ದೂರು ದಾಖಲು

bjpRoad Mishap ಉಳ್ಳಾಲ: ಬಿಜೆಪಿ ಕಾರ್ಯಕರ್ತ ಸಾವು

Road Mishap ಉಳ್ಳಾಲ: ಬಿಜೆಪಿ ಕಾರ್ಯಕರ್ತ ಸಾವು

Uppinangady ಹೃದಯಾಘಾತ; ಯುವಕ ಸಾವು

Uppinangady ಹೃದಯಾಘಾತ; ಯುವಕ ಸಾವು

IND VS PAK

ಪಾಕ್‌ಗೆ ರಾಜತಾಂತ್ರಿಕ ಸಭ್ಯತೆ ಇಲ್ಲ: ಭಾರತ ಕಿಡಿ

Kadaba ಪತಿಯ ಕಿರುಕುಳ ತಾಳಲಾರದೆ ಪತ್ನಿ ಆತ್ಮಹತ್ಯೆ

Kadaba ಪತಿಯ ಕಿರುಕುಳ ತಾಳಲಾರದೆ ಪತ್ನಿ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qweqqweqwe

ಲೈಂಗಿಕ ಕಿರುಕುಳದೂರು ರಾಜಕೀಯ ಪ್ರೇರಿತ: ಪ.ಬಂಗಾಲ ಗವರ್ನರ್‌

Supreme Court

ಒಂದೇ ಹೆಸರಿರುವ ಅಭ್ಯರ್ಥಿಗಳ ಸ್ಪರ್ಧೆಗೆ ನಿಷೇಧ ಇಲ್ಲ: ಸುಪ್ರೀಂ

1-ewqeqewq

Eknath Shinde ಬಣ ಶಿವಸೇನೆ ಸೇರಿದ ಮಾಜಿ ಸಂಸದ ಸಂಜಯ ನಿರುಪಮ್‌

2000

2,000 ರೂ.ನ 97.76% ನೋಟು ವಾಪಸ್‌: ಆರ್‌ಬಿಐ

police crime

Deepfake ವೀಡಿಯೋ ಸೃಷ್ಟಿಕರ್ತರನ್ನು ಬಂಧಿಸಿ: ಮಹಾ ಸರಕಾರ ಆದೇಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqqweqwe

ಲೈಂಗಿಕ ಕಿರುಕುಳದೂರು ರಾಜಕೀಯ ಪ್ರೇರಿತ: ಪ.ಬಂಗಾಲ ಗವರ್ನರ್‌

Supreme Court

ಒಂದೇ ಹೆಸರಿರುವ ಅಭ್ಯರ್ಥಿಗಳ ಸ್ಪರ್ಧೆಗೆ ನಿಷೇಧ ಇಲ್ಲ: ಸುಪ್ರೀಂ

1-ewqeqewq

Eknath Shinde ಬಣ ಶಿವಸೇನೆ ಸೇರಿದ ಮಾಜಿ ಸಂಸದ ಸಂಜಯ ನಿರುಪಮ್‌

2000

2,000 ರೂ.ನ 97.76% ನೋಟು ವಾಪಸ್‌: ಆರ್‌ಬಿಐ

Madikeri ವೃದ್ಧೆ ಸಾವು: ಸೊಸೆಗೆ ನ್ಯಾಯಾಂಗ ಬಂಧನ

Madikeri ವೃದ್ಧೆ ಸಾವು: ಸೊಸೆಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.