Goa ಅಭಯಾರಣ್ಯದಲ್ಲಿರುವ ಜಲಪಾತಕ್ಕೆ ಪ್ರವಾಸಿಗರ ಪ್ರವೇಶ ನಿಷೇಧ
Team Udayavani, Jul 11, 2023, 8:00 PM IST
ಪಣಜಿ: ನೇತ್ರಾವಳಿ ಅಭಯಾರಣ್ಯದ ಮೈನಾಪಿ ಜಲಪಾತದಲ್ಲಿ ಭಾನುವಾರ ಇಬ್ಬರು ಮುಳುಗಿದ ಸಾವನ್ನಪ್ಪಿದ ಘಟನೆಯ ನಂತರ ಪ್ರವಾಸಿಗರ ಸುರಕ್ಷತೆಯ ಪ್ರಶ್ನೆ ಮತ್ತೊಮ್ಮೆ ಎದುರಾಗಿದೆ.
ಈ ಹಿನ್ನೆಲೆಯಲ್ಲಿ ಅಭಯಾರಣ್ಯದಲ್ಲಿರುವ ಎಲ್ಲಾ ಜಲಪಾತಗಳಿಗೆ ಪ್ರವಾಸಿಗರಿಗೆ ಅರಣ್ಯ ಇಲಾಖೆ ನಿಷೇಧ ಹೇರಿದೆ. ಇದರಿಂದಾಗಿ ಮುಂದಿನ ಆದೇಶ ಹೊರ ಬೀಳುವ ವರೆಗೂ ಗೋವಾದ ಅಭಯಾರಣ್ಯ ಭಾಗದಲ್ಲಿ ಬರುವ ಯಾವುದೇ ಜಲಪಾತದ ಬಳಿ ತೆರಳಲು ಪ್ರವಾಸಿಗರಿಗೆ ಸಂಪೂರ್ಣವಾಗಿ ನಿಷೇಧ ಹೇರಲಾಗಿದೆ.
ದಕ್ಷಿಣ ಗೋವಾದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅನಿಕೇತ್ ಗಾಂವ್ಕರ್ ಅವರ ಪ್ರಕಾರ ಯಾವುದೇ ಭದ್ರತಾ ಕ್ರಮಗಳಿಲ್ಲದ ಎಲ್ಲಾ ಜಲಪಾತಗಳಲ್ಲಿ ಪ್ರವಾಸಿಗರಿಗೆ ಸಂಪೂರ್ಣವಾಗಿ ನಿಷೇಧ ಹೇರಲಾಗಿದೆ. ಈ ಜಲಪಾತಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಲೈಫ್ ಜಾಕೆಟ್ಗಳನ್ನು ಒದಗಿಸಲು ಈಗ ಚಿಂತನೆ ನಡೆಸಲಾಗುತ್ತಿದೆ ಎಂಬ ಮಾಹಿತಿ ನೀಡಿದರು.
ಮೈನಾಪಿ ಜಲಪಾತ ಅಪಘಾತದ ಬಗ್ಗೆ ಮಾತನಾಡಿದ ಗಾಂವ್ಕರ್ ವಾಸ್ತವವಾಗಿ, ಈ ಜಲಪಾತವು ಚಿಕ್ಕದಾಗಿದೆ ಮತ್ತು ಇಲ್ಲಿಯವರೆಗೆ ಯಾವುದೇ ಅಪಘಾತ ಸಂಭವಿಸಿಲ್ಲ. ಭಾನುವಾರ ಜಲಪಾತದಲ್ಲಿ ಇದ್ದಕ್ಕಿದ್ದಂತೆ ಜನಜಂಗುಳಿ ಉಂಟಾಗಿತ್ತು. ಮಳೆಯಿಂದಾಗಿ ಜಲಪಾತದ ನೀರಿನ ಮಟ್ಟ ಏಕಾಏಕಿ ಹೆಚ್ಚಾಯಿತು. 27 ವರ್ಷದ ಶಿವದತ್ತ ನಾಯ್ಕ ನೀರಿನಲ್ಲಿ ಮುಳುಗಿ ಮೃತಪಟ್ಟವರು. ಜನಾರ್ದನ್ ಸಾಡೇಕರ್ ಅವರನ್ನು ರಕ್ಷಿಸಲು ನೀರಿಗೆ ಹಾರಿದ್ದಾರೆ.
ಸೆಕ್ಯೂರಿಟಿ ಗಾರ್ಡ್ ನೀರಿಗೆ ಹಾರಿ ಹೊರಗೆ ಎಳೆದಾಗ ಅವರೂ ನೀರಿನಲ್ಲಿ ಮುಳುಗಿದ್ದಾರೆ.ನೀರಿಂದ ಅವರನ್ನು ಮೇಲೆತ್ತಿದಾಗ ಏಕಾಏಕಿ ಉಸಿರಾಟ ಸ್ಥಗಿತಗೊಂಡು ಮೃತಪಟ್ಟಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ ಎಂದರು.
ಗೋವಾದ ದೂಧ್ ಸಾಗರ ಜಲಪಾತದ ಬಳಿ ಮಾತ್ರ ಜೀವರಕ್ಷಕ ದಳ…
ರಾಜ್ಯದಲ್ಲಿ ಹಲವಾರು ಜಲಪಾತಗಳಿವೆ. ಪ್ರವಾಸಿಗರು ಈ ಜಲಪಾತಗಳಿಗೆ ಭೇಟಿ ನೀಡುತ್ತಿದ್ದರೂ, ದೂಧ್ ಸಾಗರ ಜಲಪಾತವನ್ನು ಹೊರತುಪಡಿಸಿ ಯಾವುದೇ ಜಲಪಾತಗಳ ಬಳಿ ಜೀವರಕ್ಷಕರನ್ನು ನಿಯೋಜಿಸಲಾಗಿಲ್ಲ. ದೂಧ್ ಸಾಗರ ಜಲಪಾತದಲ್ಲಿ ಪ್ರವಾಸಿಗರಿಗೆ ಲೈಫ್ ಜಾಕೆಟ್ಗಳನ್ನು ನೀಡಲಾಗುತ್ತದೆ. ಮೈನಾಪಿ ಜಲಪಾತದ ಬಳಿ ನಡೆದ ಅಪಘಾತದ ಸ್ಥಳದಲ್ಲಿ ಇಬ್ಬರು ಭದ್ರತಾ ಸಿಬ್ಬಂದಿಯನ್ನು ಮಾತ್ರ ನಿಯೋಜಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MUST WATCH
ಹೊಸ ಸೇರ್ಪಡೆ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ
Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್ ನೀಚ ಕೃತ್ಯ