ಗೋವೆಯಲ್ಲಿ ಸಮುದ್ರಕ್ಕೆ ಬಿದ್ದು ಇಬ್ಬರು ತಮಿಳು ನಾಡು ಪ್ರವಾಸಿಗರ ಸಾವು
Team Udayavani, Jun 18, 2018, 12:22 PM IST
ಪಣಜಿ : ಅರಬ್ಬೀ ಸಮುದ್ರದ ಗೋವೆಯ ಸಮೀಪದ ಬೀಚ್ಗಳಲ್ಲಿ ನಡೆದಿರುವ ಎರಡು ಪ್ರತ್ಯೇಕ ಅವಘಡಗಳಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಇಬ್ಬರು ತಮಿಳು ನಾಡಿನ ಪ್ರವಾಸಿಗರು ಮೃತಪಟ್ಟ ಘಟನೆ ವರದಿಯಾಗಿದೆ.
ತಮಿಳು ನಾಡು ಮತ್ತು ಕರ್ನಾಟಕದ ಎಂಟು ಮಂದಿಯ ಪ್ರವಾಸಿಗರ ಒಂದು ಸಮೂಹ ಉತ್ತರ ಗೋವೆಯ ಬಾಗಾ ಬೀಚಿಗೆ ಶನಿವಾರ ಸಂಜೆ ಭೇಟಿಕೊಟ್ಟಿತ್ತು.
ಈ ಗುಂಪಿನ ಮೂವರು ಸಮುದ್ರ ತೀರದಿಂದ ಸ್ವಲ್ಪ ದೂರದಲ್ಲಿರುವ ಬಂಡೆಗಳ ಮೇಲೆ ನಿಂತುಕೊಂಡು ತಮ್ಮ ಮೊಬೈಲ್ನಲ್ಲಿ ಸೆಲ್ಫಿ ತೆಗೆಯುವಾಗ ಭಾರೀ ದೊಡ್ಡ ಅಲೆಗಳು ಅಪ್ಪಳಿಸಿದವು. ಆಗ ಮೂವರ ಪೈಕಿ ಇಬ್ಬರು ಈಜಿಕೊಂಡು ದಡ ಸೇರಿದರು; ಆದರೆ ಮೂರನೇ ವ್ಯಕ್ತಿ, ತಮಿಳು ನಾಡಿನ ವೆಲ್ಲೂರ್ ನಿವಾಸಿ ದಿನೇಶ್ ಕುಮಾರ್ ರಂಗನಾಥನ್ (28) ನೀರು ಪಾಲಾಗಿ ಮೃತಪಟ್ಟರು. ಅವರ ಮೃತ ದೇಹವನ್ನು ಅನಂತರ ಮೇಲೆತ್ತಲಾಯಿತು.
ಇದೇ ರೀತಿಯ ಇನ್ನೊಂದು ಅವಘಡ ಉತ್ತರ ಗೋವೆಯ ಫೋರ್ಟ್ ಅಗುವಾಡಾ ಸಮೀಪದ ಬೀಚ್ನಲ್ಲಿ ನಡೆದು ತಮಿಳು ನಾಡಿನ 33ರ ಹರೆಯದ ಶಶಿಕುಮಾರ್ ಎಂಬವರು ಮೃತಪಟ್ಟರು.
ಗೋವೆಯ ಬೀಚುಗಳಲ್ಲಿ ಇದೇ ಜೂನ್ 1ರಿಂದ ಮುಂದಿನ ನಾಲ್ಕು ತಿಂಗಳ ಕಾಲ ಈಜುವುದನ್ನು ಮತ್ತು ಅಪಾಯಕಾರಿಯಾಗಿ ಕಡಲಿಗೆ ಇಳಿಯುವುದನ್ನು ನಿಷೇಧಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ