ಸಹೋದರನ ಮೇಲೆ ಟ್ರ್ಯಾಕ್ಟರ್ ಹರಿಸಿ ಹತ್ಯೆ ಯತ್ನ… CCTVಯಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ
Team Udayavani, Mar 30, 2024, 11:36 AM IST
ಉತ್ತರ ಪ್ರದೇಶ: ಇತ್ತೀಚಿನ ದಿನಗಳಲ್ಲಿ ಹಣ, ಅಸ್ತಿ, ಅಂತಸ್ತಿನ ನಡುವೆ ಯಾವುದೇ ಸಂಬಂಧವೂ ಲೆಕ್ಕಕ್ಕಿಲ್ಲ ಎಂಬಂತಾಗಿದೆ, ಹಣದ ಆಸೆಗೋಸ್ಕರ ಹೆತ್ತ ತಂದೆ ತಾಯಿಯನ್ನೇ ಕೊಲೆ ಮಾಡಿದ ಅದೆಷ್ಟೋ ಘಟನೆಗಳು ನಡೆದು ಹೋಗಿವೆ ಅಂತದ್ದೇ ಒಂದು ಘಟನೆ ಉತ್ತರಪ್ರದೇಶದ ಸಹರಾನ್ಪುರದಲ್ಲಿ ನಡೆದಿದೆ.
ಇಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿ ಇಬ್ಬರು ಸಹೋದರರಾದ ರಾಮ್ ಕುಮಾರ್ ಹಾಗೂ ಓಂಕುಮಾರ್ ನಡುವೆ ಆಗಾಗ ಜಗಳಗಳು ನಡೆಯುತ್ತಿತ್ತು ಎಂದು ಹೇಳಲಾಗಿದೆ ಆದರೆ ಕಳೆದ ಗುರುವಾರ ಇಬ್ಬರು ಸಹೋದರರ ನಡುವೆ ಮತ್ತೆ ಜಗಳ ಆರಂಭವಾಗಿದ್ದು ಈ ವೇಳೆ ಆರೋಪಿ ರಾಮ್ಕುಮಾರ್ ತನ್ನ ಸಹೋದರ ಓಂಕುಮಾರ್ ಮೇಲೆ ಟ್ರ್ಯಾಕ್ಟರ್ ಹರಿಸಿ ಹತ್ಯೆಗೆ ಯತ್ನಿಸಿದ್ದಾನೆ ಅಲ್ಲದೆ ಟ್ರ್ಯಾಕ್ಟರ್ ನ ಅಡಿಗೆ ಬಿದ್ದ ಸಹೋದರ ಹೊರ ಬರಲು ಯತ್ನ ನಡೆಸುವ ವೇಳೆ ಆರೋಪಿ ರಾಮಕುಮಾರ್ ಮೂರೂ ನಾಲ್ಕು ಬಾರಿ ಟ್ರ್ಯಾಕ್ಟರ್ ಅನ್ನು ಹಿಂದೆ ಮುಂದೆ ಚಲಾಯಿಸಿದ್ದಾನೆ ಅದೃಷ್ಟವಶಾತ್ ಸಹೋದರ ಓಂಕುಮಾರ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಈ ವೇಳೆ ರಕ್ಷಣೆಗೆ ಬಂದ ಓಂಕುಮಾರ್ ಪತ್ನಿ ಪವಿತ್ರ ಅವರಿಗೂ ಗಾಯಗಳಾಗಿದೆ ಎಂದು ಹೇಳಲಾಗಿದೆ.
ಘಟನೆಯ ಭಯಾನಕ ದೃಶ್ಯ ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ, ಘಟನೆ ಸಂಬಂಧ ಓಂಕುಮಾರ್ ತನ್ನ ಸಹೋದರನ ಮೇಲೆ ದೂರು ದಾಖಲಿಸಿದ್ದು ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ.
ಇದನ್ನೂ ಓದಿ: Liquor Policy Case: ದೆಹಲಿಯ ಮತ್ತೊಬ್ಬ ಸಚಿವನಿಗೆ ಜಾರಿ ನಿರ್ದೇಶನಾಲಯ ಸಮನ್ಸ್
यूपी के सहारनपुर में जमीन विवाद को लेकर सगे भाई ने अपने ही भाई को ट्रैक्टर से कुचलकर मरने का प्रयास किया pic.twitter.com/fqIuR5yPwn
— Priya singh (@priyarajputlive) March 29, 2024