ಉತ್ತರ ಪ್ರದೇಶ ಮೇಯರ್ಗಳು ಗುಜರಾತ್ಗೆ!
Team Udayavani, Dec 5, 2017, 7:56 AM IST
ಲಕ್ನೋ: ಇತ್ತೀಚೆಗೆ ಉತ್ತರ ಪ್ರದೇಶ ಮೇಯರ್ ಚುನಾವಣೆಗಳಲ್ಲಿ ಅದ್ಭುತ ಜಯ ದಾಖಲಿಸಿರುವ ಬಿಜೆಪಿ, ಆ ಯಶಸ್ಸನ್ನು ಗುಜರಾತ್ನಲ್ಲಿಯೂ ನಿರೀಕ್ಷಿಸುತ್ತಿದೆ.
16 ಮೇಯರ್ ಸ್ಥಾನಗಳಿಗಾಗಿ ನಡೆದ ಚುನಾವಣೆಯಲ್ಲಿ 14 ಸ್ಥಾನಗಳನ್ನು ಬಿಜೆಪಿಯೇ ಗೆದ್ದಿತ್ತು. ಹೊಸದಾಗಿ ಚುನಾಯಿತರಾಗಿರುವ ಎಲ್ಲಾ ಮೇಯರ್ಗಳು ಮಂಗಳವಾರ, ಪ್ರಧಾನಿ ನರೇಂದ್ರ ಮೋದಿಯವರ ಆಶೀರ್ವಾದ ಪಡೆಯಲು ದೆಹಲಿಗೆ ದೌಡಾಯಿಸಲಿದ್ದಾರೆ. ಇದಾದ ನಂತರ, ಈ ಎಲ್ಲಾ ಮೇಯರ್ಗಳು ಸೀದಾ ಹೋಗುವುದು ಗುಜರಾತ್ಗೆ!
ಅಲ್ಲಿ ಹಲವಾರು ರ್ಯಾಲಿಗಳಲ್ಲಿ ಪಾಲ್ಗೊಳ್ಳುವ ಮೂಲಕ ಮತದಾರರನ್ನು ಬಿಜೆಪಿಗೆ ಸೆಳೆಯುವ ಪ್ರಯತ್ನ ಮಾಡಲಿದ್ದಾರೆ. ಇವರಲ್ಲಿ, ಕಾಂಗ್ರೆಸ್ ಭದ್ರಕೋಟೆಯಾದ ಅಮೇಥಿಯಲ್ಲಿ ಬಿಜೆಪಿ ಪತಾಕೆ ಹಾರಿಸಿರುವ ನೂತನ ಮೇಯರ್ ಚಂದ್ರಮ ದೇವಿ, ಜೈಸ್ ನಗರ್ ಪಾಲಿಕಾ ಪರಿಷದ್ನ ಮುಖ್ಯಸ್ಥ ಮಹೇಶ್ ಪ್ರತಾಪ್ ಪ್ರಮುಖರು.
ಬಿಜೆಪಿ ವಿರುದ್ಧ ಲಂಚದ ಆರೋಪ: ಸೂರತ್ನಲ್ಲಿ ತಾವು ಭಾನುವಾರ (ನ. 3) ನಡೆಸಿದ್ದ ರ್ಯಾಲಿಯಿಂದ ತಮ್ಮನ್ನು ದೂರ ಉಳಿಯುವಂತೆ ಮಾಡಲು ಬಿಜೆಪಿ ಷಡ್ಯಂತ್ರ ರೂಪಿಸಿತ್ತು ಎಂದು ಪಟೇಲ್ ಸಮುದಾಯದ ಹಾರ್ದಿಕ್ ಪಟೇಲ್ ಆರೋಪಿಸಿದ್ದಾರೆ. ಸೋಮವಾರ ಸುದ್ದಿ ಗಾರ ರೊಂದಿಗೆ ಮಾತನಾಡಿದ ಅವರು, ರ್ಯಾಲಿಯಿಂದ ದೂರ ಉಳಿದರೆ 5 ಕೋಟಿ ರೂ. ನೀಡುವುದಾಗಿ ಬಿಜೆಪಿ ಬೆಂಬಲಿಗ ರಾದ ಗುಜರಾತ್ ಉದ್ಯಮಿಯೊಬ್ಬರು ತಮಗೆ ಆಮಿಷ ಒಡ್ಡಿದ್ದರೆಂದು ತಿಳಿಸಿದ್ದಾರೆ.
ಹಾರ್ದಿಕ್ ಪಟೇಲ್, ಅಲ್ಪೇಶ್ ಠಾಕೋಟ್ ಹಾಗೂ ಜಿಗ್ನೇಶ್ ಮೆವಾನಿ ಅವರನ್ನು “ಹಜ್’ ಎಂದು ಸಂಬೋಧಿಸುವ ಮೂಲಕ ಅವರ ಹೋರಾಟಕ್ಕೆ ಮತೀಯ ಬಣ್ಣ ಬಳಿಯಲಾಗುತ್ತಿದೆ. ಇಂಥ ಒಡೆದು ಆಳುವ ನೀತಿಯುಳ್ಳ ರಾಜಕಾರಣವನ್ನು ಗುಜರಾತ್ ಯುವಕರು ವಿರೋಧಿಸಬೇಕು.
ಪಿ. ಚಿದಂಬರಂ, ಕೇಂದ್ರದ ಮಾಜಿ ವಿತ್ತ ಸಚಿವ