ಕಾಣೆಯಾದ ಪತಿಯೆಂದು ಭಾವಿಸಿ ಬೀದಿಯಲ್ಲಿದ್ದ ವಿಶೇಷ ಚೇತನ ವ್ಯಕ್ತಿಯನ್ನು ಮನೆಗೆ ಕರೆತಂದ ಮಹಿಳೆ
Team Udayavani, Jul 30, 2023, 11:29 AM IST
ಲಕ್ನೋ: 10 ವರ್ಷದ ಹಿಂದೆ ನಾಪತ್ತೆಯಾದ ಪತಿಯೆಂದು ಭಾವಿಸಿ ಮಹಿಳೆಯೊಬ್ಬರು ರಸ್ತೆಯಲ್ಲಿದ್ದ ವಿಶೇಷ ಚೇತನ ವ್ಯಕ್ತಿಯನ್ನು ಮನೆಗೆ ತಂದಿರುವ ಘಟನೆ ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ನಡೆದಿದೆ.
ಘಟನೆ ಹಿನ್ನೆಲೆ: ಹತ್ತು ವರ್ಷದ ಹಿಂದೆ ಜಾನಕಿ ದೇವಿ ಎನ್ನುವ ಮಹಿಳೆಯ ಪತಿ ಮೋತಿ ಚಂದ್ ಅವರು ನಾಪತ್ತೆಯಾಗಿದ್ದಾರೆ. ತನ್ನ ಪತಿ ಇವತ್ತು ಬರುತ್ತಾನೆ, ನಾಳೆ ಬರುತ್ತಾನೆ ಎಂದು ಕಾದು ಜಾನಕಿ ದೇವಿ ಸೋತು ಹೋಗಿದ್ದಾರೆ. ಶುಕ್ರವಾರ ( ಜು.28 ರಂದು) ಜಾನಕಿ ದೇವಿ ಬಲ್ಲಿಯಾ ಜಿಲ್ಲಾ ಆಸ್ಪತ್ರೆಯ ಮುಂದೆ ಗಡ್ಡ ಬಿಟ್ಟಿರುವ, ಕೊಳಕು ಮತ್ತು ಹರಿದ ಬಟ್ಟೆಯನ್ನು ಹಾಕಿರಯವ ವ್ಯಕ್ತಿಯನ್ನು ನೋಡಿದ್ದಾರೆ. ಆತನನ್ನು ನೋಡಿದ ಕೂಡಲೇ ಇದು ನಾಪತ್ತೆಯಾಗಿರುವ ತನ್ನ ಪತಿಯೆಂದು ಭಾವಿಸಿ “ಇಷ್ಟು ದಿನ ಎಲ್ಲಿದ್ದಿ?” ಎಂದು ಆತನ ಬಳಿ ಕೇಳಿದ್ದಾರೆ. ಮಹಿಳೆ ಏನೇ ಕೇಳಿದರೂ ಆ ವ್ಯಕ್ತಿ ಮಾತ್ರ ಯಾವ ಪ್ರತಿಕ್ರಿಯೆ ನೀಡದೆ ಸುಮ್ಮನೆ ಕೂತಿದ್ದಾನೆ.
ಆ ಬಳಿಕ ಈತ ತನ್ನ ಪತಿಯೆಂದೇ ಭಾವಿಸಿ, ಮನೆಗೆ ಕರೆದುಕೊಂಡು ಹೋಗಿದ್ದಾರೆ. ಬೇರೆ ಬಟ್ಟೆಯನ್ನು ಹಾಕಿ, ಆತನ ಗಡ್ಡವನ್ನು ತೆಗೆದು, ಅವನ ಗುರುತನ್ನು ಖಚಿತಪಡಿಸಿಕೊಳ್ಳಲು ಅವನ ದೇಹದ ಮೇಲೆ ಗುರುತುಗಳನ್ನು ಹುಡುಕಿದ್ದಾರೆ. ಆದರೆ ಈ ವೇಳೆ ಆತ ಮೋತಿ ಚಂದ್ ಅಲ್ಲ, ಆತನ ಹೆಸರು ರಾಹುಲ್ ಎಂದು ಗೊತ್ತಾಗಿದೆ.
ಜಾನಕಿ ಅವರಿಗೆ ತನ್ನ ತಪ್ಪಿನ ಅರಿವಾಗಿ, ವಿಶೇಷ ಚೇತನ ವ್ಯಕ್ತಿಯಾದ ರಾಹುಲ್ ಅವರ ಸಂಬಂಂಧಿಕರನ್ನು ಸಂಪರ್ಕಿಸಿದ್ದಾರೆ. ಗ್ರಾಮದ ಮುಖಂಡರು ಮತ್ತು ಕೆಲವರು ಆತನ ಗುರುತನ್ನು ಖಚಿತಪಡಿಸಿದ್ದಾರೆ. ಬಳಿಕ ಆತನನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
MUST WATCH
ಹೊಸ ಸೇರ್ಪಡೆ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು