Tunnel ಎರಡು ಕಡೆಯಿಂದ ಕೊರೆಯುವ ಕೆಲಸ; ಕೈಯಿಂದಲೇ ಸುರಂಗ ಕೊರೆಯಲು 6 ಮಂದಿಯ ತಂಡ ಆಗಮನ
ಬೆಟ್ಟದ ಮೇಲ್ಭಾಗದಿಂದಲೂ ಮುಂದುವರಿದ ಡ್ರಿಲ್ಲಿಂಗ್
Team Udayavani, Nov 27, 2023, 8:52 PM IST
ಉತ್ತರಕಾಶಿ: ಉತ್ತರಾಖಂಡದ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರ ರಕ್ಷಣೆಗೆ ಹರಸಾಹಸ ಮುಂದುವರಿದಿದೆ. ಅಂತಾರಾಷ್ಟ್ರೀಯ ಹಾಗೂ ದೇಶೀಯ ತಜ್ಞರ ತಂಡವು 6 ಕಾರ್ಯತಂತ್ರಗಳನ್ನು ರೂಪಿಸಿದ್ದು, ಈ ಪೈಕಿ ಎರಡನ್ನು ಕಾರ್ಯರೂಪಕ್ಕೆ ತರಲಾಗುತ್ತಿದೆ. ಬೆಟ್ಟದ ಮೇಲಿನಿಂದ ಡ್ರಿಲ್ಲಿಂಗ್ ನಡೆಸುವುದರ ಜೊತೆಗೆ, ಕೈಯಿಂದ ಅಗೆಯುವ ಕೆಲಸವೂ ಆರಂಭವಾಗಿದೆ.
ಕಾರ್ಮಿಕರಿಗೆ ಹೊರಬರುವ ಮಾರ್ಗವನ್ನು ನಿರ್ಮಿಸಬೇಕೆಂದರೆ ಬೆಟ್ಟದ ಮೇಲಿನಿಂದ ಲಂಬವಾಗಿ ಒಟ್ಟು 86 ಮೀಟರ್(1.2 ಮೀಟರ್ ವ್ಯಾಸದ ಪೈಪ್ ) ಕೊರೆಯಬೇಕಾಗುತ್ತದೆ. ಭಾನುವಾರವೇ ಈ ಪ್ರಕ್ರಿಯೆ ಆರಂಭವಾಗಿದ್ದು, ಸೋಮವಾರ ಸಂಜೆ ವೇಳೆಗೆ 31 ಮೀ.ಗಳಷ್ಟು ಕೊರೆಯಲಾಗಿದೆ.
ಇದೇ ವೇಳೆ, ಪ್ಲಾಸ್ಮಾ ಕಟ್ಟರ್ ಮೂಲಕ ಒಳಗೆ ಸಿಲುಕಿದ್ದ ಆಗರ್ ಯಂತ್ರದ ಭಾಗಗಳನ್ನು ಹೊರತೆಗೆಯಲಾಗಿದೆ. ಈ ಸ್ಥಳದಲ್ಲಿ ಅಡ್ಡಲಾಗಿ ಕೊರೆಯುವ ಕೆಲಸವನ್ನು ಮಾಡಲು ರ್ಯಾಟ್-ಹೋಲ್ ಮೈನರ್ (ಒಬ್ಬ ವ್ಯಕ್ತಿಗಷ್ಟೇ ಹೋಗಿ-ಬರಲು ಸಾಧ್ಯವಾಗುವಂಥ ಕಿರಿದಾದ ಗುಂಡಿಗಳನ್ನು ಅಗೆಯುವವರು)ಗಳ ತಂಡವನ್ನು ಕರೆಸಿಕೊಳ್ಳಲಾಗಿದೆ. ಮತ್ತೂಂದೆಡೆ ಸುರಂಗದ ಮತ್ತೂಂದು ತುದಿಯಿಂದ ಡ್ರಿಲ್ಲಿಂಗ್ ಆರಂಭಿಸುವ ಚಿಂತನೆಯನ್ನೂ ಮಾಡಲಾಗಿದೆ.
ಕೈಯಿಂದ ಕೊರೆತ ಹೇಗೆ?
6 ಮಂದಿ ರ್ಯಾಟ್ ಹೋಲ್ ಮೈನರ್ಗಳ ತಂಡವು ಸೋಮವಾರ ಸ್ಥಳಕ್ಕೆ ಆಗಮಿಸಿದೆ. ಈ ತಂಡದ ಪ್ರತಿ ಸದಸ್ಯನು ಒಂದು ಬಾರಿಗೆ ಒಬ್ಬನಂತೆ ಸುರಂಗದ ಅವಶೇಷಗಳ ಒಳಗೆ ತೂರಿಸಲಾಗಿರುವ 800 ಎಂಎಂ ವ್ಯಾಸದ ಪೈಪ್ನೊಳಕ್ಕೆ ಹೋಗಿ, ಸಲಿಕೆಯ ಮೂಲಕ ಕೈಯಿಂದಲೇ ಅಗೆಯಲಿದ್ದಾರೆ. ಇದು ಅತ್ಯಂತ ನಿಧಾನ ಹಾಗೂ ಕಷ್ಟಕರ ಕೆಲಸವಾಗಿದ್ದರೂ, ಕಾರ್ಮಿಕರನ್ನು ತಲುಪಲು ಕೇವಲ 10-12 ಮೀಟರ್ ದೂರವಿರುವ ಕಾರಣ, ಇದುವೇ ಸದ್ಯಕ್ಕಿರುವ ಉತ್ತಮ ಆಯ್ಕೆ ಎಂದು ತಜ್ಞರು ತಿಳಿಸಿದ್ದಾರೆ.
ಮಾನಸಿಕವಾಗಿ ಕುಗ್ಗದಂತೆ ಆಪ್ತ ಸಮಾಲೋಚನೆ
ಸುರಂಗ ಕೊರೆಯುವ ಪ್ರಕ್ರಿಯೆಯ ಮಧ್ಯೆಯೇ ಒಳಗೆ ಸಿಲುಕಿರುವ 41 ಕಾರ್ಮಿಕರು ಮಾನಸಿಕವಾಗಿ ಕುಗ್ಗದಂತೆ ನೋಡಿಕೊಳ್ಳುವ ಕೆಲಸವನ್ನೂ ಮಾಡಲಾಗುತ್ತಿದೆ. ವೈದ್ಯರು, ಮನಶಾÏಸ್ತ್ರಜ್ಞರು ಸೇರಿದಂತೆ ತಜ್ಞರ ತಂಡವು ದಿನಕ್ಕೆ 2 ಬಾರಿ(ಬೆಳಗ್ಗೆ 9ರಿಂದ 11 ಮತ್ತು ಸಂಜೆ 5ರಿಂದ 8) ಕಾರ್ಮಿಕರೊಂದಿಗೆ ಮಾತುಕತೆ ನಡೆಸುತ್ತಿದೆ. ಯಾವ ಕಾರಣಕ್ಕೂ ಧೈರ್ಯಗೆಡದಂತೆ, “ನಾವು ನಿಮ್ಮೊಂದಿಗಿದ್ದೇವೆ’ ಎಂದು ಹುರಿದುಂಬಿಸಲಾಗುತ್ತಿದೆ. ಕುಟುಂಬ ಸದಸ್ಯರೊಂದಿಗೆ ಮಾತುಕತೆ ನಡೆಸಲೂ ಅವಕಾಶ ಕಲ್ಪಿಸಲಾಗುತ್ತಿದೆ. ಕಾರ್ಮಿಕರ ಮನದಲ್ಲಿ ಭಯ, ಆತಂಕ, ನಕಾರಾತ್ಮಕ ಯೋಚನೆಗಳು ಬಾರದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ವೈದ್ಯಕೀಯ ತಂಡದ ನೋಡಲ್ ಅಧಿಕಾರಿ ಡಾ. ಬಿಮಲೇಶ್ ಜೋಷಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ