ವೆಲ್ಲೂರು ಲೋಕಸಭಾ ಚುನಾವಣೆ ರದ್ದು
Team Udayavani, Apr 17, 2019, 6:30 AM IST
ಹೊಸದಿಲ್ಲಿ: ತಮಿಳುನಾಡಿನ ವೆಲ್ಲೂರಿನಲ್ಲಿ ಎ.18ರಂದು ನಡೆಯಬೇಕಾಗಿದ್ದ ಲೋಕಸಭಾ ಚುನಾವಣೆಯನ್ನು ರದ್ದುಗೊಳಿಸಲಾಗಿದೆ. ದೇಶದ ಲೋಕಸಭಾ ಚುನಾವಣ ಇತಿಹಾಸದಲ್ಲೇ ಮೊದಲ ಬಾರಿಗೆ ಚುನಾವಣೆ ರದ್ದುಗೊಳಿಸಲ್ಪಟ್ಟ ಕ್ಷೇತ್ರ ವೆಂಬ ಕುಖ್ಯಾತಿಗೆ ವೆಲ್ಲೂರು ಪಾತ್ರವಾಗಿದೆ. ಆದರೆ ಇಲ್ಲಿನ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪ ಚುನಾವಣೆ ನಿಗದಿಯಾದಂತೆ ನಡೆಯಲಿದೆ.
ಮಾ. 29ರಂದು ಡಿಎಂಕೆಯ ನಾಯಕ ದುರೈ ಮುರುಗನ್ ಪುತ್ರ ಕಾತಿರ್ ಆನಂದ್ ನಿವಾಸದಲ್ಲಿ 11 ಲಕ್ಷ ರೂ.ಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದರು. ಜತೆಗೆ ಎ. 1ರಂದು ದುರೈಮುರುಗನ್ ಅವರಿಗೆ ಸೇರಿದ ಕಾಲೇಜಿನಿಂದ ಸಾಗಿಸಲಾಗಿತ್ತು ಎನ್ನಲಾಗಿದ್ದ 11.53 ಕೋಟಿ ರೂ.ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇದರ ಜತೆಗೆ ವಿವಿಧೆಡೆ ನಡೆದ ದಾಳಿಗಳಿಂದ 2,500 ಕೋಟಿ ರೂ. ಮೊತ್ತದ ಮಾದಕ ದ್ರವ್ಯಗಳು, ಮದ್ಯ, ಬೆಲೆಬಾಳುವ ಲೋಹ, ಉಡುಗೊರೆಗಳನ್ನು ಜಪ್ತಿ ಮಾಡಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ