ಸಿಕಂದರಾಬಾದ್‌ ರೈಲು ನಿಲ್ದಾಣದ ಅಗ್ನಿಪಥ್‌ ಗಲಭೆ ಪೂರ್ವ ನಿರ್ಧರಿತ

ಅಗ್ನಿಪಥ ಗಲಭೆ "ಟೂಲ್‌ಕಿಟ್‌' ಪತ್ತೆ!

Team Udayavani, Jun 19, 2022, 7:25 AM IST

ಸಿಕಂದರಾಬಾದ್‌ ರೈಲು ನಿಲ್ದಾಣದ ಅಗ್ನಿಪಥ್‌ ಗಲಭೆ ಪೂರ್ವ ನಿರ್ಧರಿತ

ಹೈದರಾಬಾದ್‌: ಹೊಸ ಮಾದರಿಯ ಸೇನಾ ನೇಮಕಾತಿಯಾದ ಅಗ್ನಿಪಥ ಯೋಜನೆ ಯನ್ನು ವಿರೋಧಿಸಿ ಶುಕ್ರವಾರ ಸಿಕಂದರಾಬಾದ್‌ ರೈಲ್ವೇ ನಿಲ್ದಾಣದಲ್ಲಿ ನಡೆದ ಗಲಭೆಯು ಹಠಾತ್ತಾಗಿ ನಡೆದ ಬೆಳವಣಿಗೆ ಯಲ್ಲ, ಈ ಗಲಭೆಗೆ ಪ್ರಚೋದ ನಾತ್ಮಕವಾದ ಆಡಿಯೋ ತುಣುಕುಗಳೇ ಕಾರಣ ಎಂಬ ಅಂಶವನ್ನು ರೈಲ್ವೇ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಗಲಭೆಗಳಿಗೆ ಪ್ರೇರಣೆ ನೀಡಿದ್ದು ಮಾತ್ರವಲ್ಲ, ಗಲಭೆಯನ್ನು ಎಲ್ಲಿ ನಡೆಸಬೇಕು, ಹೇಗೆ ಜನರನ್ನು ಸಂಘಟಿಸಬೇಕು ಎಂಬಿ ತ್ಯಾದಿ ಮಾಹಿತಿಗಳೆಲ್ಲವೂ ಗಲಭೆಕೋರರಿಗೆ ರವಾನೆಯಾಗಿವೆ. ಆಡಿಯೋ ಕ್ಲಿಪ್‌ಗ್ಳಲ್ಲಿ ಇದ್ದ ನಿರ್ದೇಶನದಂತೆಯೇ ಗಲಭೆಗಳು ನಡೆ ದಿವೆ. ಹಾಗಾಗಿ ಸಿಕಂದರಾಬಾದ್‌ನಲ್ಲಿ ನಡೆದ ಗಲಭೆಯ ಹಿಂದೆ ದೊಡ್ಡದೊಂದು ಷಡ್ಯಂ ತರವಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ನಡುವೆ ಒಂದು ಆಡಿಯೋ ಕ್ಲಿಪ್‌ನಲ್ಲಿರುವ ಅಂಶಗಳನ್ನು ಮಾಧ್ಯಮವೊಂದು ವರದಿ ಮಾಡಿದೆ. ಅದರಲ್ಲಿರುವ ಒಂದು ಧ್ವನಿ, ನೀನು ಸಿಕಂದರಾಬಾದ್‌ ರೈಲು ನಿಲ್ದಾ ಣಕ್ಕೆ ನಾಳೆ ಯಾವಾಗ ಬರುತ್ತೀಯ? ಬರು ವಾಗ ಮರೆಯದೆ ಪೆಟ್ರೋಲ್‌, ಟಯರ್‌ಗಳು, ಹಳೆಯ ಬಟ್ಟೆಗಳನ್ನು ತಂದುಬಿಡು. ಏಕೆಂ ದರೆ ರೈಲು ನಿಲ್ದಾಣಗಳಲ್ಲಿ ಇಂಥವೆಲ್ಲ ನಮಗೆ ತತ್‌ಕ್ಷಣಕ್ಕೆ ಸಿಗುವುದಿಲ್ಲ. ಹಾಗಾಗಿ ನೀವು ಇವೆಲ್ಲವನ್ನೂ ತರಬೇಕು. ಇದರಿಂದ ವಾಹನಗಳಿಗೆ ಹಾಗೂ ರೈಲುಗಳಿಗೆ ಬೆಂಕಿ ಹಚ್ಚಲು ಸಹಾಯವಾಗುತ್ತದೆ ಎಂದು ವ್ಯಕ್ತಿಯೊಬ್ಬರಿಗೆ ಆದೇಶಿಸಿದೆ.

ಇನ್ನೂ ಕೆಲವು ಆಡಿಯೋ ಸಂದೇಶಗಳಲ್ಲಿ, ಯಾವುದೇ ಕಾರಣಕ್ಕೂ ಪ್ರತಿಭಟನೆ ನಿಲ್ಲಿಸಬೇಡಿ. ಹಳೆಯ ಸೇನಾ ನೇಮಕಾತಿ ಜಾರಿ ಯಾಗುವವರೆಗೂ ಹೋರಾಟ ಮುಂದು  ವರಿಯಲಿ ಎಂದು ಹೇಳಲಾಗಿದೆ. ಈ ನಡುವೆ ಬಿಹಾರ, ಉತ್ತರ ಪ್ರದೇಶ ಮುಂತಾದೆಡೆ ಅಗ್ನಿಪಥ ವಿರೋಧಿ ಪ್ರತಿಭಟನೆಗಳು ಶನಿವಾರವೂ ಮುಂದುವರಿದಿವೆ.

ವಿಪಕ್ಷಗಳ ಕುತಂತ್ರ- ಜ| ವಿ.ಕೆ. ಸಿಂಗ್‌: ಅಗ್ನಿಪಥದ ವಿರುದ್ಧ ದೇಶದ ನಾನಾ ರಾಜ್ಯಗಳಲ್ಲಿ ಭುಗಿಲೆದ್ದಿರುವ ಗಲಭೆಗಳ ಹಿಂದೆ ವಿಪಕ್ಷಗಳ ಕೈವಾಡವಿದೆ. ಅವರು ಯುವ ಜನರಲ್ಲಿ ಅಗ್ನಿಪಥದ ಬಗ್ಗೆ ತಪ್ಪು ಮಾಹಿತಿಯನ್ನು ನೀಡಿ, ಅವರ ದಾರಿ ತಪ್ಪಿಸುವುದರ ಜತೆಗೆ ಗಲಭೆಗೆ ಪ್ರೇರೇಪಿ ಸುತ್ತಿದ್ದಾರೆ ಎಂದು ಸೇನೆಯ ಮಾಜಿ ಮುಖ್ಯಸ್ಥ ಹಾಗೂ ಕೇಂದ್ರ ಸಚಿವ ಜ| ವಿ.ಕೆ. ಸಿಂಗ್‌ ಆರೋಪಿಸಿದ್ದಾರೆ.

ಸಿಂಗ್‌ ಸಭೆ: ಹಲವಾರು ರಾಜ್ಯಗಳಲ್ಲಿ ಅಗ್ನಿಪಥ್‌ ಗಲಭೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಶನಿವಾರದಂದು ರಕ್ಷಣ ಸಚಿವ ರಾಜನಾಥ್‌ ಸಿಂಗ್‌ ಅವರು ತಮ್ಮ ನಿವಾಸದಲ್ಲಿ ಭಾರತದ ಮೂರೂ ಪಡೆಗಳ ಮುಖ್ಯಸ್ಥರ ಜತೆಗೆ ಮಹತ್ವದ ಸಭೆ ನಡೆಸಿದರು.

ಸೇನಾ ಸೇವೆ ಕಡ್ಡಾಯವಿರುವ ದೇಶಗಳು
ರಷ್ಯಾ: 18-27 ವರ್ಷದ ಯುವಕರಿಗೆ 12 ತಿಂಗಳು ಸೇನೆಯಲ್ಲಿ ಕೆಲಸ ಕಡ್ಡಾಯ. ತಪ್ಪಿದಲ್ಲಿ ದಂಡ, ಜೈಲು.
ಉ. ಕೊರಿಯಾ: 17-18 ವರ್ಷಕ್ಕೆ ಶಾಲಾ ಶಿಕ್ಷಣ ಮುಗಿದಾಕ್ಷಣ ಸೇನೆ ಸೇರಬೇಕು. ಯುವಕರಿಗೆ 10 ವರ್ಷ, ಯುವತಿಯರಿಗೆ 7 ವರ್ಷ ಸೇವೆ.
ದಕ್ಷಿಣ ಕೊರಿಯಾ: ಯುವಕರಿಗೆ ಸೇನೆಯಲ್ಲಿ 21 ತಿಂಗಳು/ ನೌಕಾಪಡೆ ಯಲ್ಲಿ 23 ತಿಂಗಳು/ವಾಯುಪಡೆಯಲ್ಲಿ 24 ತಿಂಗಳ ಸೇವೆ ಕಡ್ಡಾಯ.
ಇಸ್ರೇಲ್‌: 18 ವರ್ಷ ತುಂಬಿರುವವರಿಗೆ ಸೇವೆ ಕಡ್ಡಾಯ. ಯುವಕರಿಗೆ 2 ವರ್ಷ 8 ತಿಂಗಳು ಹಾಗೂ ಯುವತಿಯರಿಗೆ 2 ವರ್ಷ ಕಡ್ಡಾಯ ಸೇವೆ.
ಬ್ರೆಜಿಲ್‌: 18 ವರ್ಷದ ಮೇಲ್ಪಟ್ಟ ಯುವಕರಿಗೆ 12 ತಿಂಗಳು ಸೇನೆಯಲ್ಲಿ ಕೆಲಸ ಕಡ್ಡಾಯ. ತಪ್ಪಿದವರು ಅನೇಕ ಸೌಲಭ್ಯಗಳಿಂದ ವಂಚಿತರಾಗುತ್ತಾರೆ.
ಇರಾನ್‌:18 ವರ್ಷ ಮೇಲ್ಪಟ್ಟ ಯುವಕರಿಗೆ 18-24 ತಿಂಗಳು ಸೇವೆ ಕಡ್ಡಾಯ. ತಪ್ಪಿದಲ್ಲಿ ಸರಕಾರಿ ಕೆಲಸ, ಸರಕಾರಿ ಸೌಲಭ್ಯ ಕೈ ಸೇರುವುದಿಲ್ಲ.
ಟರ್ಕಿ: 20-41 ವರ್ಷದ ಪುರುಷರಿಗೆ ಸೇವೆ ಕಡ್ಡಾಯ.
ಕ್ಯೂಬಾ: 17-28 ವರ್ಷದ ಯುವಕರಿಗೆ 2 ವರ್ಷ ಸೇನೆಯ ಸೇವೆ ಕಡ್ಡಾಯ. ತಪ್ಪಿದಲ್ಲಿ ದಂಡ, ಜೈಲುಶಿಕ್ಷೆ.
ಸ್ವಿಟ್ಸರ್ಲೆಂಡ್‌: 20 ವರ್ಷ ಮೇಲ್ಪಟ್ಟ ಯುವಕರಿಗೆ 21 ವಾರಗಳ ಕಾಲ ಸೇನೆಯಲ್ಲಿ ಕೆಲಸ ಮಾಡುವುದು ಕಡ್ಡಾಯ.
ಎರಿಟ್ರಿಯಾ: ಸೆಕೆಂಡರಿ ಶಾಲಾ ಶಿಕ್ಷಣದಲ್ಲಿಯೇ ವಿದ್ಯಾರ್ಥಿಗಳಿಗೆ ಸೇನಾ ತರಬೇತಿ ಕಡ್ಡಾಯ. 18 ತಿಂಗಳ ಸೇವೆ ಕಡ್ಡಾಯವೆಂಬ ನಿಯಮವಿದ್ದರೂ ಅನಿರ್ದಿಷ್ಟಾವಧಿ ಸೇವೆ ಮಾಡಿಸಿಕೊಳ್ಳುತ್ತಿರುವ ಸೇನೆ.
ಸ್ವೀಡನ್‌: 2010ರಲ್ಲಿ ರದ್ದು ಮಾಡಲಾಗಿದ್ದ ಕಡ್ಡಾಯ ನಿಯಮವನ್ನು ಮರು ಜಾರಿಗೆ ಚಿಂತನೆ. ಯುವಕ ಮತ್ತು ಯುವತಿಯರಿಗೆ 9ರಿಂದ 12 ತಿಂಗಳು ಸೇವೆ ಕಡ್ಡಾಯ ಸಾಧ್ಯತೆ.

ಟಾಪ್ ನ್ಯೂಸ್

Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ

Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ

Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೋಟಿಸ್

Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್

LS Polls: ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರಾ ಪ್ರಿಯಾಂಕಾ ಗಾಂಧಿ…? ವರದಿ ಹೇಳೋದೇನು

Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ

Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೋಟಿಸ್

Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್

LS Polls: ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರಾ ಪ್ರಿಯಾಂಕಾ ಗಾಂಧಿ…? ವರದಿ ಹೇಳೋದೇನು

Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ

3

Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

1-twin

Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ

Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ

Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೋಟಿಸ್

Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್

Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!

Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!

LS Polls: ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರಾ ಪ್ರಿಯಾಂಕಾ ಗಾಂಧಿ…? ವರದಿ ಹೇಳೋದೇನು

Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ

Sandalwood: ಧೀರೇನ್‌ ರೀ ಇಂಟ್ರೊಡಕ್ಷನ್‌

Sandalwood: ಧೀರೇನ್‌ ರೀ ಇಂಟ್ರೊಡಕ್ಷನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.